Sirsi Marikamba Jatre: ಇಂದಿನಿಂದ ಶಿರಸಿ ಜಾತ್ರೆ ಶುಭಾರಂಭ; ಗದ್ದುಗೆ ಏರಿ ಕುಳಿತ ಮಾರಿಕಾಂಬಾ

Source link

ನಾವು ಗೆಳೆಯರಿಗಿಂತ ಹೆಚ್ಚಾಗಿ ಸಹೋದರರು; ಮೋದಿ ಬಗ್ಗೆ ಇಸ್ರೇಲ್ ಸಂಸತ್​​ನಲ್ಲಿ ಪ್ರಧಾನಿ ನೆತನ್ಯಾಹು ಬಣ್ಣನೆ – Kannada News | PM Modi is more than a friend he is a brother Israel PM Netanyahu highlights bond in Parliament

ಟೆಲ್ ಅವಿವ್, ಫೆಬ್ರವರಿ 25: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಮಾನ ನಿಲ್ದಾಣಕ್ಕೇ ಆಗಮಿಸಿ ಆತ್ಮೀಯವಾಗಿ ಸ್ವಾಗತ ನೀಡಿದರು. ಇಂದು ಪ್ರಧಾನಿ ಮೋದಿ (PM Modi in Israel) ಇಸ್ರೇಲ್ ಸಂಸತ್​​ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯೆಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಲಿದ್ದಾರೆ. ಅದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನೆತನ್ಯಾಹು ಪ್ರಧಾನಿ ಮೋದಿಯನ್ನು ತಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಭಾರತ ಮತ್ತು ಇಸ್ರೇಲ್ ನಡುವಿನ ಗೆಳೆತನ, ಬಾಂಧವ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ.

ಈ ಸ್ನೇಹದ ಪ್ರತಿಬಿಂಬವಾಗಿ, ಭಾರತ ಮತ್ತು ಇಸ್ರೇಲ್ ತಮ್ಮ ವ್ಯಾಪಾರವನ್ನು ದ್ವಿಗುಣಗೊಳಿಸಿದೆ. ಎರಡೂ ದೇಶಗಳ ನಡುವಿನ ಸಹಕಾರ 3 ಪಟ್ಟು ಹೆಚ್ಚಾಗಿದೆ, ಎರಡೂ ದೇಶಗಳ ನಡುವಿನ ತಿಳುವಳಿಕೆ 4 ಪಟ್ಟು ಹೆಚ್ಚಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ. “ಇದು ನಮಗೆ ಹೆಮ್ಮೆಯ ಕ್ಷಣ. ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ನನ್ನ ಗೆಳೆಯ ಎನ್ನುವುದಕ್ಕಿಂತಲೂ ಸಹೋದರ ಎಂದರೂ ತಪ್ಪಾಗಲಾರದು. ಭಾರತದೊಂದಿಗಿನ ವ್ಯಾಪಾರ ದ್ವಿಗುಣಗೊಂಡಿದೆ ಮತ್ತು ಸಹಕಾರ 4 ಪಟ್ಟು ಹೆಚ್ಚಾಗಿದೆ” ಎಂದು ಮೋದಿ ಹೇಳಿದ್ದಾರೆ.

ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ಎರಡನೇ ಬಾರಿಗೆ ಇಸ್ರೇಲ್‌ಗೆ ಆಗಮಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅವರ ಪತ್ನಿ ಪ್ರಧಾನಿಯನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಇಸ್ರೇಲ್ ಸಂಸತ್ತಿನಲ್ಲಿ “ಮೋದಿ, ಮೋದಿ” ಎಂಬ ಘೋಷಣೆಗಳು ಕೇಳಿಬಂದವು. ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ “ಇದು ನಮಗೆ ಹೆಮ್ಮೆಯ ಕ್ಷಣ” ಎಂದು ಹೇಳಿದರು. ಅವರು ಪ್ರಧಾನಿಯನ್ನು “ನಮಸ್ತೆ” ಯೊಂದಿಗೆ ಸ್ವಾಗತಿಸಿದರು. ಈ ವೇಳೆ ಸಂಸತ್​​ನ ಎಲ್ಲ ಸದಸ್ಯರೂ ಎದ್ದುನಿಂತು ಕೈ ಜೋಡಿಸಿ ನಮಸ್ಕಾರ ಮಾಡಿ ಮೋದಿಯನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 9:23 pm, Wed, 25 February 26

Source link

ಶಿವಮೊಗ್ಗ SSLC ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​: ಸಂಕೇತ್ ಕೊಲೆ ರಹಸ್ಯ ಬಯಲು! – Kannada News | Big Twist To Shivamogga SSLC Student Murder Case: Sanketh Killed from classmates

ಶಿವಮೊಗ್ಗ, (ಫೆಬ್ರವರಿ 25): ಶಿವಮೊಗ್ಗ (Shivamogga) ಹೊರವಲಯದಲ್ಲಿರುವ ಸೂಳೆಬೈಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಂಕೇತ್ ಕೊಲೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಸೂಳೆಬೈಲಿನಲ್ಲಿ ಸಂಕೇತ್ ಕೊಲೆ ನಡೆದು ಇಂದಿಗೆ ಮೂರನೇ ದಿನ. ಫೆ. 23. ರ ರಾತ್ರಿ 9.30 ಆಸುಪಾಸಿನಲ್ಲಿ ಆತನ ಕೊಲೆ ನಡೆದಿತ್ತು. ಕೊಲೆ ಕೇಸ್ ನಲ್ಲಿ ಈಗಾಗಲೇ ತುಂಗಾ ನಗರ ಪೊಲೀಸರು 7 ಅಪ್ರಾಪ್ತರನ್ನು ಬಂಧಿಸಿದ್ದಾರೆ. ಈ ಕೊಲೆ ಕೇಸ್ ನಲ್ಲಿ ಅದೇ ಶಾಲೆಯ ನಾಲ್ವರು ಇರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಕೊಲೆ ದಿನ ನಡೆದಿದ್ದು ಏನು? ಕೊಲೆ ಮಾಡಿದ್ದು ಯಾರು? ಎನ್ನುವುದನ್ನು ಹತ್ಯೆಯಾದ ಸಂಕೇತ್ ಸಹಪಾಠಿಗಳು ಬಿಚ್ಚಿಟ್ಟಿದ್ದಾರೆ. ಇನ್ನು ಸಂಕೇತ ಜೀವ ಉಳಿಸಿಲು ಶಿಕ್ಷಕ ನಡೆಸಿದ ಹೋರಾಟ ಹೇಗಿತ್ತು ಎನ್ನುವ ಡಿಟೇಲ್ಸ್ ವಿಡಿಯೋನಲ್ಲಿದೆ.

Source link

IND vs ZIM: ಭಾರತ- ಜಿಂಬಾಬ್ವೆ ಫೈಟ್​ಗೆ ಮಳೆ ಅಡ್ಡಿ? ಪಂದ್ಯ ರದ್ದಾದರೆ ಭಾರತದ ಕನಸು ಭಗ್ನ – Kannada News | IND vs ZIM T20 World Cup: Chennai Pitch, Rain and Semi Final Race | Super 8 Battle

ಭಾರತ ಹಾಗೂ ಜಿಂಬಾಬ್ವೆ (India vs Zimbabwe) ಎರಡೂ ತಂಡಗಳು ಟಿ20 ವಿಶ್ವಕಪ್​ನ (T20 World Cup) ಗುಂಪು ಹಂತದಲ್ಲಿ ಅಜೇಯರಾಗಿ ಉಳಿದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿದ್ದವು. ಆದರೆ ಈ ಎರಡೂ ತಂಡಗಳು ಸೂಪರ್ 8 ಸುತ್ತಿನಲ್ಲಿ ಗೆಲುವಿನ ಆರಂಭವನ್ನು ಪಡೆಯುವಲ್ಲಿ ವಿಫಲವಾಗಿವೆ. ಆದ್ದರಿಂದ ಈಗ ಎರಡೂ ತಂಡಗಳಿಗೆ ಪರಸ್ಪರ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿರುವುದರಿಂದ ಟೀಂ ಇಂಡಿಯಾಗೆ ತವರಿನ ಲಾಭ ಸಿಗಬಹುದು. ಆದಾಗ್ಯೂ ಟೀಂ ಇಂಡಿಯಾ ಈ ಪಂದ್ಯದಲ್ಲಿ ಮೈಮರೆತರೆ ಸೋಲು ಕಟ್ಟಿಟ್ಟ ಬುತ್ತಿ. ಏಕೆಂದರೆ, ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳಿಗೆ ಜಿಂಬಾಬ್ವೆ ಆಘಾತ ನೀಡಿದೆ. ಆದ್ದರಿಂದ, ಜಿಂಬಾಬ್ವೆಗೆ ಹೋಲಿಸಿದರೆ, ಈ ಪಂದ್ಯದಲ್ಲಿ ಭಾರತ ಹೆಚ್ಚಿನ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ.

ಚೆನ್ನೈ ಹವಾಮಾನ ಹೇಗಿರಲಿದೆ?

ಎರಡೂ ತಂಡಗಳ ನಡುವಿನ ಪಂದ್ಯವು ಫೆಬ್ರವರಿ 26 ರ ಗುರುವಾರ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಮಿಫೈನಲ್ ರೇಸ್‌ನಲ್ಲಿ ಉಳಿಯಬೇಕಾದರೆ ಎರಡೂ ತಂಡಗಳು ಗೆಲ್ಲುವುದು ಕಡ್ಡಾಯವಾಗಿದೆ. ಆದ್ದರಿಂದ, ಎರಡೂ ತಂಡಗಳು ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ. ಆದರೆ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ ಏನಾಗಲಿದೆ?. ಇದಕ್ಕೆ ಉತ್ತರ, ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಈ ಪಂದ್ಯ ನಡೆಯದಿದ್ದರೆ, ಟೀಂ ಇಂಡಿಯಾ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ.

ಪಂದ್ಯ ರದ್ದಾದರೆ, ಎರಡೂ ತಂಡಗಳು ತಲಾ 1 ಅಂಕಗಳನ್ನು ಪಡೆಯುತ್ತವೆ. ಅಲ್ಲದೆ, ಭಾರತ ಮತ್ತು ಜಿಂಬಾಬ್ವೆ ಎರಡೂ ತಂಡಗಳು ಸೂಪರ್ 8 ಸುತ್ತಿನಲ್ಲಿ ತಮ್ಮ ಮೊದಲ ಪಂದ್ಯವನ್ನು ದೊಡ್ಡ ಅಂತರದಿಂದ ಸೋತಿವೆ. ಆದ್ದರಿಂದ, ಸೆಮಿಫೈನಲ್ ತಲುಪಲು ಎರಡೂ ತಂಡಗಳು ಉಳಿದ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು. ಮಳೆ ಅದಕ್ಕೆ ಅಡ್ಡಿಪಡಿಸಿದರೆ, ಬ್ಯಾಕಪ್ ಖಚಿತ. ಹವಾಮಾನ ಮುನ್ಸೂಚಕ ಅಕ್ಯೂವೆದರ್ ಪ್ರಕಾರ, ಗುರುವಾರ ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದು.

IND vs ZIM: ಭಾರತ- ಜಿಂಬಾಬ್ವೆ ನಡುವಿನ ನಿರ್ಣಾಯಕ ಪಂದ್ಯ ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ಆರಂಭ?

ಸ್ಪಿನ್ನರ್‌ಗಳ ಸವಾಲು

ಚೆನ್ನೈ ಪಿಚ್‌ನಲ್ಲಿ ಆರಂಭದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ. ಆದರೆ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳನ್ನು ಹೇಗೆ ನಿಭಾಯಿಸುತ್ತಾರೆ? ಎಂಬುದರ ಮೇಲೆ ಟಾರ್ಗೆಟ್ ನಿರ್ಧಾರವಾಗುತ್ತದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಇಲ್ಲಿ ಇಲ್ಲಿಯವರೆಗೆ ಆರು ಪಂದ್ಯಗಳು ನಡೆದಿದ್ದು, ಬ್ಯಾಟ್ಸ್‌ಮನ್‌ಗಳು ಸ್ಪಷ್ಟವಾಗಿ ಪ್ರಾಬಲ್ಯ ಸಾಧಿಸಿದ್ದಾರೆ, ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳು ವಿಕೆಟ್ ಪಡೆಯುವುದು ಕಷ್ಟಕರವಾಗಿದೆ. ಟಿ 20 ವಿಶ್ವಕಪ್‌ನಲ್ಲಿ ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವವರ ಸರಾಸರಿ ಸ್ಕೋರ್ 180 ರಿಂದ 200 ರನ್‌ಗಳವರೆಗೆ ಇದೆ. ಆದ್ದರಿಂದ, ಮೊದಲು ಬ್ಯಾಟಿಂಗ್ ಮಾಡುವ ತಂಡವು 200 ಕ್ಕಿಂತ ಹೆಚ್ಚು ಸ್ಕೋರ್‌ಗೆ ಗುರಿಯಿಡಬೇಕು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಮೆಗಾ ಟ್ವಿಸ್ಟ್: ಕಾನ್ಫಿಡೆಂಟ್ ಒಡೆಯನಿಗೆ ಮುಳುವಾಯ್ತಾ 500 ಕೋಟಿ ರೂ.? – Kannada News | Confident Group Chairman CJ Roy suicide for IT probe into Rs 500 crore transactions, suspected to be Hawala dealings

ಬೆಂಗಳೂರು, ಫೆಬ್ರವರಿ 25): ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ (CJ Roy )ಆತ್ಮಹತ್ಯೆಗೆ ಹವಾಲಾ ಹಣ(Hawala dealings) ಕಾರಣ ಎನ್ನುವುದು ಈ ಹಿಂದೆ ಬಟಾಬಯಾಲಾಗಿತ್ತು. ಆದರೆ ಆ ಹವಲಾ ಹಣ ಎಷ್ಟು ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಸದ್ಯ Tv9ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಿಜೆ ರಾಯ್ ಆತ್ಮಹತ್ಯೆಗೆ ಬರೋಬ್ಬರಿ 500 ಕೋಟಿ ರೂಪಾಯಿ ‌ಹವಲಾ ಹಣ ಕಾರಣ ಎಂದು ತಿಳಿದುಬಂದಿದೆ. 500 ಕೋಟಿ ರೂ. ಹವಾಲಾ ವ್ಯವಹಾರದ ಬಗ್ಗೆ ಲೆಕ್ಕ ಕೊಡಲಾಗದ ಸಿಜೆ ರಾಯ್ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದು. ಇದರಿಂದ ಪ್ರಾಣಕಳೆದುಕೊಂಡಿದ್ದಾರೆ ಎನ್ನಲಾಗಿದೆ.

500 ಕೋಟಿ ಮತ್ತು ಸಿ.ಜೆ.ರಾಯ್

ಸಿ.ಜೆ.ರಾಯ್ ವ್ಯವಹಾರದಲ್ಲಿ 500 ಕೋಟಿ ರೂ.‌ ಮಿಸ್ ಮ್ಯಾಚ್ ಆಗಿದ್ದು, ಕೇರಳ, ಕೊಚ್ಚಿ ಪ್ರಾಜೆಕ್ಟ್ ಬೆನ್ನಲ್ಲೇ ಡಿಸೆಂಬರ್​ನಲ್ಲೇ ತನಿಖೆ ನಡೆಸ್ತಿದ್ದ ಐಟಿ ಇಲಾಖೆ 500 ಕೋಟಿ ಲೆಕ್ಕ ಕೇಳಿತ್ತು. ಇದರಿಂದ ರಾಯ್ ದುಬೈನಿಂದ ಭಾರತಕ್ಕೆ ವಾಪಸ್ ಬಾರದೆ ಮೀನಾಮೇಶ ಎಣಿಸುತ್ತಿದ್ದರು. ಅಲ್ಲದ ಐಟಿ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೆ ಐಟಿ ರೇಡ್ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೂ ಭಾರತಕ್ಕೆ ಬಂದ ಸಿಜೆ ರಾಯ್ ಗೆ ಅನೇಕ ಪ್ರಶ್ನೆಗಳನ್ನ ಮುಂದಿಟ್ಟಿದ್ದರು. ಹೀಗಾಗಿಯೇ ತಮ್ಮ ಪಾರ್ಟ್​ನರ್, ಸಿಎ ಸಲಹೆಯಂತೆ ರಾಯ್ ಕೋರ್ಟ್ ಹಾಕಿದ್ದ ಅರ್ಜಿ ವಾಪಸ್ ಪಡೆದುಕೊಂಡಿದ್ದರು. ಕೊನೆಗೆ 500 ಕೋಟಿ ರೂಪಾಯಿ ಮೂಲ ನೀಡಲಾಗದೆ, ತಮಗೆ ಬಂದಿದ್ದ ಹವಾಲಾ ಹಣದ ಲೆಕ್ಕ ಕೊಡದೆ ಸಿ.ಜೆ.ರಾಯ್ ಪರದಾಡಿದ್ದರು.

ಇದನ್ನೂ ಓದಿ: ಸಿಜೆ ರಾಯ್‌ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!

ಹೀಗೆ 500 ಕೋಟಿ ರೂ. ಹವಾಲಾ ವ್ಯವಹಾರದ ಬಗ್ಹೆ ಲೆಕ್ಕ ಕೊಡಲಾಗದ ಸಿಜೆ ರಾಯ್ ಗೆ ಅತ್ತ ದರಿ ಇತ್ತ ಪುಲಿ ಅನ್ನೋ ಪರಿಸ್ಥಿತಿ ಆಗಿತ್ತು. ಇದರಿಂದ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆದರೂ ಆತ್ಮಹತ್ಯೆ ದಿನ ಐಟಿಗೆ ಉತ್ತರಿಸುವುದಾಗಿ ಹೇಳಿದ್ದ ರಾಯ್, ಅಂದು ಮಾನಸಿಕ ಖಿನ್ನತೆಯ ಟ್ಯಾಬ್ಲೆಟ್ ಕೂಡಾ ಸೇವಿಸರಿಲಿಲ್ಲ. ಮಾತ್ರೆ ಸೇವಿಸದೆ ಇದ್ದಿದ್ದು ಖಿನ್ನತೆ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಇದೆ. ಸದ್ಯ ಇಂತ ವ್ಯವಹಾರದ ಬಗ್ಗೆ ಸಿಜೆ ರಾಯ್, ಕೇರಳ ಮೂಲದ ಬ್ಯುಸಿನೆಸ್ ಪಾರ್ಟನರ್, ಐಟಿ ಅಧಿಕಾರಿಗಳು & ಸಿಜೆ ರಾಯ್ ಸಿಎಗೆ ಮಾತ್ರ ಗೊತ್ತಿರೋದು 500 ಕೋಟಿ ರೂ. ಕುತೂಹಲ ಜೀವಂತವಾಗಿಸಿದೆ.

ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ರಾ ರಾಯ್?

ಸಿಜೆ ರಾಯ್ ತಮ್ಮ ಕಚೇರಿಗೂ ಮುನ್ನ ಇದ್ದಂತ ಖಾಸಗಿ ಹೋಟೆಲ್ ನಲ್ಲಿ ಸಜೀವ ಗುಂಡು ಸಿಕ್ಕಿದ್ದವು. ಹೀಗಾಗಿ ಖಾಸಗಿ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಮುಂದಾಗಿ ಕೊನೆಗೆ ಪ್ರೈವಸಿ ಸ್ಥಳದಲ್ಲಿ ಆತ್ಮಹತ್ಯೆಗೆ ಸೂಕ್ತ ಸ್ಥಳ ಅಲ್ಲವೆಂದು ನಿರ್ಧರಿಸ ಹೋಟೆಲ್ ಬದಲು ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಕಚೇರಿಯ ಚೇಂಬರ್​ನಲ್ಲಿ ಪಾಯಿಂಟ್ ಬ್ಲ್ಯಾಂಕ್​ನಲ್ಲಿ ಎದೆಗೆ ಗುರಿ ಇಟ್ಟು ಫೈರ್ ಮಾಡಿಕೊಂಡಿದ್ದ ರಾಯ್ ಕ್ಯಾಬಿನ್​ನಲ್ಲೇ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದ್ದರು. ಆದರೆ ಆತ್ಮಹತ್ಯೆ ಸ್ಥಳದಲ್ಲಿ ಕೆಲವೇ ಹನಿ ರಕ್ತ ಮಾತ್ರ ಚೆಲ್ಲಿತ್ತು . ಯಾಕೆಂದ್ರೆ ಸಿಡಿದ ಗುಂಡು ದೇಹದಿಂದ ಹೊರ ಬಾರದ ಹಿನ್ನೆಲೆ, ರಾಯ್ ದೇಹದಿಂದ ಹೆಚ್ಚು ರಕ್ತ ಸೋರಿಕೆಯಾಗಿರಲಿಲ್ಲ. ಬುಲೇಟ್ ರಾಯ್ ಹೃದಯ ಸೀಳಿ, ಕಿಡ್ನಿಗೆ ತಾಗಿದೆ. ಬಳಿಕ ರಿಬ್ಸ್​ನಲ್ಲಿ ಗುಂಡು ಸಿಲುಕಿದ್ದ ಹಿನ್ನೆಲೆ ರಕ್ತ ಬಂದಿಲ್ಲ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸಿಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಹವಾಲ ಹಣ ಮ್ಯಾಟರ್ ತಗ್ಲಾಕೊಂಡಿರುವುದು ಗೊತ್ತಾಗಿದೆ. ಆದರೆ ಈ ಹಣ ಯಾರದ್ದು, ಯಾಕಾಗಿ ನೀಡಿದ್ರು ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೆಟ್ಟಿ ಗ್ಯಾಂಗ್ ಬಿಟ್ಟು ಕನ್ನಡದ ಕೆಲವರಿಗೆ ಮಾತ್ರ ಮದುವೆ ಆಹ್ವಾನ ನೀಡಿದ ರಶ್ಮಿಕಾ – Kannada News | Rashmika Mandanna invites a few people from Kannada Film Industry

ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ. ಆದರೆ ಈಗ ಮದುವೆಯ ಸಂದರ್ಭದಲ್ಲಿ ಶೆಟ್ಟಿ ಗ್ಯಾಂಗ್​ ಅನ್ನು ಅವರು ಮರೆತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಆಹ್ವಾನವನ್ನು ಕನ್ನಡ ಚಿತ್ರರಂಗದ ಕೆಲವೇ ಕೆಲವು ಮಂದಿಗೆ ಮಾತ್ರ ನೀಡಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರು ಮದುವೆ ಆಗುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರು ಈ ಮದುವೆಗೆ ಹಾಜರಿ ಹಾಕುತ್ತಿದ್ದಾರೆ. ಇನ್ನು ಯಾರೆಲ್ಲ ಮದುವೆಗೆ ಬರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

10ನೇ ತರಗತಿ ಬೋರ್ಡ್ ಎಕ್ಸಾಂ ಬರೆಯುತ್ತಿದ್ದ ಬಾಲಕಿಗೆ ಹೆರಿಗೆ; ಆಕೆ ಗರ್ಭಿಣಿಯೆಂದೇ ಗೊತ್ತಿರಲಿಲ್ಲ! – Kannada News | Class 10 student delivered a Baby at exam centre in Madhya Pradesh family unaware of pregnancy

ಧಾರ್, ಫೆಬ್ರವರಿ 25: ಈಗಿನ ಕಾಲದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಇರುವುದರಿಂದ ಅವರ ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಲಭ್ಯವಿರುತ್ತದೆ. ತಮಗೆ ಬೇಕಾದ ಎಲ್ಲ ವಿಷಯವನ್ನೂ ಮಕ್ಕಳು ಮೊಬೈಲಿನಿಂದಲೇ ತಿಳಿದುಕೊಳ್ಳುತ್ತಾರೆ. ಹೀಗಿದ್ದರೂ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾನು ಗರ್ಭಿಣಿಯಾದ (Pregnant) ವಿಷಯ ಮುಚ್ಚಿಟ್ಟು ಮಗುವನ್ನು ಹೆತ್ತಿದ್ದಾಳೆ. ಬೋರ್ಡ್ ಎಕ್ಸಾಂ ಬರೆಯುವಾಗ ಪರೀಕ್ಷಾ ಕೇಂದ್ರದಲ್ಲಿಯೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ! ಎಸ್​ಎಸ್​ಎಲ್​ಸಿ ಓದುವ ಹುಡುಗಿಗೆ ತನ್ನ ದೇಹದಲ್ಲಾದ ಬದಲಾವಣೆಗಳು ಗೊತ್ತಾಗಲಿಲ್ಲವೇ? ಹೆರಿಗೆಯ ಸಮಯ ಬಂದರೂ ಆಕೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದೇಕೆ? ಆಕೆ ತನ್ನ ತಂದೆ-ತಾಯಿಯಿಂದ ತಾನು ಗರ್ಭಿಣಿಯಾದ ವಿಷಯ ಮುಚ್ಚಿಟ್ಟಿದ್ದೇಕೆ? ಆಕೆ ಗರ್ಭಿಣಿಯಾಗಲು ಕಾರಣ ಯಾರು? ಎಂಬ ಹಲವು ಪ್ರಶ್ನೆಗಳು ಈ ಘಟನೆಯ ಬಳಿಕ ಎದ್ದಿವೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕೈಗಾರಿಕಾ ಪ್ರದೇಶವಾದ ಪಿತಾಂಪುರದಲ್ಲಿ ಮಂಗಳವಾರ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದಾಗ 10ನೇ ತರಗತಿಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವುದು ತೀವ್ರ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ವಿದ್ಯಾವಂತೆಯಾದ ಬಾಲಕಿ ತಾನು ಗರ್ಭಿಣಿಯಾದರೂ ಆ ವಿಷಯ ಮುಚ್ಚಿಟ್ಟಿದ್ದೇಕೆ? ಮೊದಲೇ ಹೇಳಿದ್ದರೆ ಇಷ್ಟು ಚಿಕ್ಕ ವಯಸ್ಸಿಗೆ ತಾಯಿಯಾಗುವ ಅಪಾಯ ತಪ್ಪಿಸಬಹುದಿತ್ತು, ಆ ಮಗುವಿನ ತಂದೆ ಯಾರು ಎಂಬಿತ್ಯಾದಿ ಪ್ರಶ್ನೆಗಳೆದ್ದಿವೆ.

ಇದನ್ನೂ ಓದಿ: ಧರ್ಮಗುರುವಿನಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಮಗು ಹುಟ್ಟೋವರೆಗೂ ಗರ್ಭಿಣಿಯಾದ ವಿಷಯವೇ ಗೊತ್ತಾಗಲಿಲ್ಲ!

ಮಧ್ಯಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪರೀಕ್ಷೆಗಳ ಕೇಂದ್ರವಾದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಗಣಿತ ಪತ್ರಿಕೆ ಬರೆಯಲು ಹಾಜರಾಗಿದ್ದ ಬಾಲಕಿ ಒಂದೂವರೆ ಗಂಟೆ ಪರೀಕ್ಷೆ ಬರೆದಿದ್ದಳು. ಆದರೆ, ಆಗ ಇದ್ದಕ್ಕಿದ್ದಂತೆ ಆಕೆಗೆ ಹೊಟ್ಟೆನೋವು ಜೋರಾಗಿತ್ತು. ಹೀಗಾಗಿ, ಪರೀಕ್ಷೆಯ ಮಧ್ಯದಲ್ಲಿ ಆಕೆ ಬಾತ್​ರೂಂಗೆ ಹೋಗಲು ಅನುಮತಿ ಕೇಳಿದ್ದಳು. ವಿಪರೀತ ಹೊಟ್ಟೆನೋವಿದ್ದುದರಿಂದ ಆಕೆಗೆ ಬಾತ್​ರೂಂಗೆ ಹೋಗಲು ಅನುಮತಿ ನೀಡಲಾಗಿತ್ತು. ಅದಾದ ಕೆಲವೇ ನಿಮಿಷಗಳಲ್ಲಿ ಬಾತ್​ರೂಂನಿಂದ ಮಗು ಅಳುವ ಶಬ್ದ ಕೇಳಿತ್ತು.

ಆಕೆ ಬಾತ್​​ರೂಂಗೆ ಹೋದಾಗ ಅಲ್ಲೇ ಆಕೆಗೆ ಹೆರಿಗೆಯಾಗಿದೆ. ಟಾಯ್ಲೆಟ್​​ನಲ್ಲೇ ಆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಅಳುವ ಶಬ್ದ ಕೇಳಿದ್ದರಿಂದ ಶಿಕ್ಷಕಿ ಟಾಯ್ಲೆಟ್ ಒಳಗೆ ಹೋಗಿ ನೋಡಿದರು. ಅಲ್ಲಿ ಆ ಬಾಲಕಿ ಹಾಗೂ ರಕ್ತ ಮೆತ್ತಿಕೊಂಡಿದ್ದ ಮಗುವನ್ನು ಕಂಡು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ವಿಷಯ ತಿಳಿಸಿದರು.

ಇದನ್ನೂ ಓದಿ: ಹೆರಿಗೆಯ ನಂತರ ಮುಟ್ಟು ವಿಳಂಬವಾಗುವುದು ಅಪಾಯಕಾರಿಯೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು?

ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯು ತಕ್ಷಣ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ಮಾಹಿತಿ ನೀಡಿತು. ಆ ವಿದ್ಯಾರ್ಥಿನಿ ಮತ್ತು ಆಕೆಯ ನವಜಾತ ಶಿಶುವನ್ನು ಪಿತಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದರು. ಪ್ರಸ್ತುತ ತಾಯಿ ಹಾಗೂ ಮಗುವನ್ನು ಅಬ್ಸರ್ವೇಷನ್​​ನಲ್ಲಿಡಲಾಗಿದೆ.

ಈ ಘಟನೆಯು ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕೇಂದ್ರದ ಸಿಬ್ಬಂದಿಯಲ್ಲಿ ಭಯವನ್ನುಂಟುಮಾಡಿದೆ. ವಿಚಿತ್ರವೆಂದರೆ, ಆ ಬಾಲಕಿ ಗರ್ಭಿಣಿಯಾದ ವಿಷಯ ಆಕೆಯ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ, ಮಗಳಿಗೆ ಹೆರಿಗೆಯಾಗಿದೆ ಎಂಬ ವಿಷಯ ತಿಳಿದು ಅವರು ಶಾಕ್ ಆಗಿದ್ದಾರೆ. ಆದರೆ, 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಆಕೆ ಈ ವಿಷಯವನ್ನು ಮನೆಯವರಿಂದ, ಶಾಲೆಯವರಿಂದ ಹೇಗೆ ಮುಚ್ಚಿಟ್ಟಳು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಸದ್ಯದ ಪೊಲೀಸ್ ತನಿಖೆಯ ಪ್ರಕಾರ, ಆ ಅಪ್ರಾಪ್ತ ಬಾಲಕಿ ಕಳೆದ 2 ವರ್ಷಗಳಿಂದ ಯುವಕನೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬುದು ಗೊತ್ತಾಗಿದೆ. ಕಳೆದ ವರ್ಷದಿಂದ ಆಕೆ ಆತನೊಂದಿಗೆ ಪದೇ ಪದೇ ದೈಹಿಕ ಸಂಬಂಧ ಹೊಂದಿದ್ದಳು. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಾಳೆ. ಆಕೆ ಈ ವಿಷಯವನ್ನು ಮನೆಯವರ ಬಳಿ ಹೇಳಿರಲಿಲ್ಲ. ಆರೋಪಿಯನ್ನು ಗುರುತಿಸಲಾಗಿದೆ. ಅವನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಚಿತ್ರ ಸಮಸ್ಯೆಗೆ ನಲುಗಿದ ಕುಟುಂಬ: ಇದಕ್ಕಿಂದಂತೆ ರಕ್ತ ಜಿನುಗುವುದು, ಚಿನ್ನ ಮಾಯ, ಬಟ್ಟೆಗಳಿಗೆ ಬೆಂಕಿ – Kannada News | Vijayapura Family’s 16 Year Mystery: Unexplained Wounds, Fires and Disappearing Gold

ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿImage Credit source: tv9 kannada

ವಿಜಯಪುರ, ಫೆಬ್ರವರಿ 25: ಒಂದು ಕಾಲದಲ್ಲಿ ಆ ಕುಟುಂಬದಲ್ಲಿ (family) ಸಂತಸ ಮನೆ ಮಾಡಿತ್ತು. ಆದರೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ, ಕಳೆದ 16 ವರ್ಷಗಳಿಂದ ಇಡೀ ಕುಟುಂಬ ನರಕಯಾತನೆ ಅನುಭವಿಸುತ್ತಿದೆ.  ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದೆ. ಓರ್ವ ಪುತ್ರ ಅಕಾಲಿಕ ಮರಣ ಹೊಂದಿದರೆ, ಇಬ್ಬರಿಗೆ ವಿಚಿತ್ರ ಸಮಸ್ಯೆಗಳು (mysterious problems) ಎದುರಾಗುತ್ತಿವೆ. ಕಂಡಕಂಡ ದೇವಸ್ಥಾನಗಳನ್ನು ಸುತ್ತಿದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಇದನ್ನು ಬಾನಾಮತಿ ಎನ್ನಬೇಕೋ, ಬೇರೆ ವಿಚಿತ್ರ ಸಮಸ್ಯೆ ಎನ್ನಬೇಕೋ ಗೊತ್ತಿಲ್ಲ, ಒಟ್ಟಿನಲ್ಲಿ ಕುಟುಂಬ ನಲುಗಿ ಹೋಗಿದೆ.

ವಿಚಿತ್ರ ಸಮಸ್ಯೆಗೆ ತುತ್ತಾದ ಇಡೀ ಕುಟುಂಬ

ತಮ್ಮಾರಾಯ ಪಾಟೀಲ್ ಹಾಗೂ ಗಂಗೂಬಾಯಿ ದಂಪತಿಗೆ ಬಸವರಾಜ ಹಾಗೂ ಸುನೀಲ ಎಂಬ ಇಬ್ಬರು ಗಂಡು ಹಾಗೂ ಸುಜಾತಾ, ಸುವರ್ಣಾ, ಸುನೀತಾ ಎಂಬ ಮೂವರು ಹೆಣ್ಣು ಮಕ್ಕಳು. ಇವರಲ್ಲಿ ಸುನೀಲ್ ಪಾಟೀಲ್ ಹಾಗೂ ಸುನೀತಾಗೆ ವಿಚಿತ್ರ ಸಮಸ್ಯೆಗೆ ತುತ್ತಾಗಿದ್ದಾರೆ. ಇವರಿಬ್ಬರು ಬಾಲ್ಯದಿಂದಲೇ ಸಮಸ್ಯೆ ಅನುಭವಿಸುತ್ತಿದ್ದು, ನರಕಯಾತನೆ ಪಡುತ್ತಿದ್ದಾರೆ. ಮೂಲತಃ ಚಡಚಣ ತಾಲೂಕಿನ ಉಮರಾಣಿ ಗ್ರಾಮದವರು. ಸುನೀಲ್​ ಹಾಗೂ ಸುನೀತಾ ಪ್ರಾಥಮಿಕ ಶಾಲೆಗೆ ಹೋಗುತ್ತಿರೋವಾಗ ಇವರ ಮೈಮೇಲೆ ತನ್ನಿಂದ ತಾನೇ ಗಾಯಗಳಾಗಿ ರಕ್ತ ಸೋರಲು ಆರಂಭವಾಗುತ್ತಿತ್ತು. ಇವರ ಬಟ್ಟೆಬರೆಗಳಿಗೆ ತನ್ನಿಂದ ತಾನೇ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗುತ್ತಿತ್ತು.

ಇದನ್ನೂ ಓದಿ: ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ

ಚಿನ್ನಾಭರಣಗಳು ಇಟ್ಟಲ್ಲಿಯೇ ಮಾಯವಾಗಿ ಹೋಗಿವೆ. ಅಮಾವಾಸ್ಯೆ ಹಾಗೂ ಹುಣ್ಣಿಮೆಯ ವೇಳೆ ಈ ರೀತಿ ಆಗುತ್ತಿತ್ತು. ಇದೇ ಚಿಂತೆಯಲ್ಲಿ ಇವರ ಹಿರಿಯ ಪುತ್ರ ಬಸವರಾಜ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಬೇಸತ್ತು, ತಮ್ಮೂರು ಉಮರಾಣಿ ಬಿಟ್ಟು ವಿಜಯಪುರ ನಗರದಲ್ಲಿ ಮನೆ ಮಾಡಿದರೂ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆಯಂತೆ. ಬಳಿಕ ಸುನೀಲನ ತಾಯಿಯ ತವರೂರು ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ಸೋದರ ಮಾವನ ಮನೆಗೆ ಬಂದರೂ ಈ ವಿಚಿತ್ರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಹೊರತು ಕಡಿಮೆ ಆಗಿಲ್ಲ. ಸೋದರಳಿಯ ಹಾಗೂ ಸೋದರ ಸೊಸೆಯ ಸಮಸ್ಯೆಯಿಂದ ಇಡೀ ಕುಟುಂಬ ಕಣ್ಣೀರು ಹಾಕುವಂತಾಗಿದೆ.

ಕಳೆದ 16 ವರ್ಷಗಳಿಂದ ಪಾಟೀಲ್​ ಕುಟುಂಬದವರಿಗೆ ವಿಚಿತ್ರ ಕಾಟ ಮುಂದುವರೆದಿದೆ. ಆರಂಭದಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ವೇಳೆ ಮಾತ್ರ ಸುನೀತಾ ಹಾಗೂ ಸುನೀಲ್​​ಗೆ ದೇಹದ ಮೇಲೆ ತನ್ನಿಂದ ತಾನೇ ಗಾಯಗಳಾಗುವುದು, ರಕ್ತ ಸುರಿಯುವುದಾಗುತ್ತಿತ್ತು. ಹಣೆ, ಕೈ, ಎದೆ ಭಾಗ, ಹೊಟ್ಟೆ, ಬೆನ್ನು, ತೊಡೆ ಹಾಗೂ ಕಾಲುಗಳ ಮೇಲೆ ಗಾಯಗಳಾಗಿ ರಕ್ತ ಸುರಿಯುತ್ತದೆ.

ಬ್ಲೇಡ್​ನಿಂದ ಹರಿದಂತೆ ಗಾಯಗಳಾಗುತ್ತವೆ. ಉರ್ದು ಭಾಷೆಯನ್ನು ಹೋಲುವ ಗುರುತುಗಳು, ಅಂಕಿಗಳು, ಅರ್ಧ ಚಂದ್ರ ನಕ್ಷತ್ರದ ಗುರುತು ಹೋಲುವ ಚಿತ್ರಗಳು ರಕ್ತದಲ್ಲೇ ಮೂಡುತ್ತವೆ. ಕಳೆದ ಮೂರು ದಿನಗಳ ಹಿಂದೆ ಸುನೀಲ್​ ಕಿವಿಯಲ್ಲಿ ರಕ್ತ ಸುರಿದು ಕೇಳದಂತಾಗಿವೆ. ಅದಕ್ಕೂ ಮುನ್ನ ಸುನೀಲ್​ ಹಾಗೂ ಸುನೀತಾಗೆ ಸೇರಿದ ವಸ್ತುಗಳಿಗೆ ಬೆಂಕಿ ಬಿದ್ದು ಎಲ್ಲವೂ ಸುಟ್ಟು ಕರಕಲಾಗಿವೆ. ತನ್ನಿಂದ ತಾನೇ ಬೆಂಕಿ ಹೊತ್ತಿ ಉರಿದು ಹೋಗಿವೆ. 250 ರಿಂದ 300 ಗ್ರಾಂ ಚಿನ್ನಾಭರಣ ಸಹ ಇಟ್ಟಲ್ಲಿಯೇ ಮಾಯವಾಗಿವೆಯಂತೆ.

ನಮ್ಮ ಸಮಸ್ಯೆ ಯಾರಾದರೂ ಬಗೆಹರಿಸಿ: ಕಣ್ಣೀರಿಟ್ಟ ತಾಯಿ

ಈ ಸಮಸ್ಯೆಯಿಂದಾಗಿ ಸುನೀತಾಗೆ ಇನ್ನು ಮದುವೆ ಆಗಿಲ್ಲ. ಸುನೀಲ್​ ಮದುವೆಯಾಗಿದ್ದರೂ ಸಂಸಾರ ಮಾಡಲಾಗುತ್ತಿಲ್ಲ. ತಮ್ಮ ಕುಟುಂಬಕ್ಕೆ ಬಂದ ಈ ವಿಚಿತ್ರ ಸಮಸ್ಯೆಗೆ ಪಾಟೀಲ್ ಕುಟುಂಬ ಕಂಡಕಂಡ ದೇವಸ್ಥಾನಗಳನ್ನು ಸುತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ. ತಂತ್ರ ಮಂತ್ರಗಳನ್ನು ಮಾಡಿಸಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ನಮ್ಮ ಸಮಸ್ಯೆಗೆ ಪರಿಹಾರವೇ ಇಲ್ವಾ? ಈ ಸಮಸ್ಯೆಯನ್ನು ಯಾರಾದರೂ ಬಗೆಹರಿಸಿ ಎಂದು ಸುನೀಲ್​ ತಾಯಿ ಗಂಗೂಬಾಯಿ ಪಾಟೀಲ್​ ಕಣ್ಣೀರು ಹಾಕಿದರು.

ಇದನ್ನೂ ಓದಿ: ವಿಜಯಪುರ: 56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!

ಕೇಳಲು ವಿಚಿತ್ರವಾದರು ಸಹ ಇಡೀ ಕುಟುಂಬ ಮಾತ್ರ ವಿಚಿತ್ರ ಸಮಸ್ಯೆಗೆ ತುತ್ತಾಗಿ ಬಳಲಿ ಬೆಂಡಾಗಿದೆ. ತಮಗೆ ಒದಗಿರುವ ಸಂಕಷ್ಟ ದೂರಾದರೆ ಸಾಕು ಎಂದು ಇಡೀ ಕುಟುಂಬ ರೋಧಿಸುತ್ತಿದೆ. ಮೇಲ್ನೋಟಕ್ಕೆ ವಾಮಾಚಾರವಾಗಿರುವ ರೀತಿ ಕಂಡುಬಂದಿದೆ. ಜೊತೆಗೆ ಬೇರೆ ಏನಾದರೂ ಸಮಸ್ಯೆ ಇದ್ದರೂ ಇರಬಹುದು ಎನ್ನಲಾಗುತ್ತಿದೆ. ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ZIM: ಭಾರತ- ಜಿಂಬಾಬ್ವೆ ನಡುವಿನ ನಿರ್ಣಾಯಕ ಪಂದ್ಯ ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ಆರಂಭ? – Kannada News | T20 World Cup Super 8: India vs Zimbabwe Match Date, Time and Live Streaming

2026 ರ ಟಿ20 ವಿಶ್ವಕಪ್‌ನ (T20 World Cup) ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿತು. ಈ ಸೋಲಿನಿಂದ ಟೀಂ ಇಂಡಿಯಾ ಸೆಮಿಫೈನಲ್ ತಲುಪುವುದು ಕಷ್ಟಕರವಾಗಿದೆ. ಹೀಗಾಗಿ ಟೀಂ ಇಂಡಿಯಾ ಸೆಮಿಫೈನಲ್‌ಗೇರಬೇಕೆಂದರೆ ಉಳಿದಿರುವ ಎರಡೂ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆಲ್ಲಬೇಕಿದೆ. ಟೀಂ ಇಂಡಿಯಾ ತನ್ನ ಎರಡನೇ ಸೂಪರ್ 8 ಪಂದ್ಯವನ್ನು ಜಿಂಬಾಬ್ವೆ (India vs Zimbabwe) ವಿರುದ್ಧ ಆಡುತ್ತಿದೆ. ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿರುವ ಜಿಂಬಾಬ್ವೆ ತಂಡವನ್ನು ಟೀಂ ಇಂಡಿಯಾ ಕಡಿಮೆ ಅಂದಾಜು ಮಾಡುವಂತಿಲ್ಲ. ಟೀಂ ಇಂಡಿಯಾ ಸಾಂಘಿಕ ಪ್ರದರ್ಶನ ನೀಡಿದರೆ ಮಾತ್ರ ಮುಂದಿನ ಸುತ್ತಿಗೆ ತನ್ನ ಕನಸನ್ನು ಜೀವಂತವಾಗಿರಿಸಿಕೊಳ್ಳಬಹುದು. ಇಲ್ಲದಿದ್ದರೆ, ತಂಡದ ಪಯಣ ಸೂಪರ್ 8 ಸುತ್ತಿನಲ್ಲೇ ಕೊನೆಗೊಳ್ಳಬಹುದು.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಫೆಬ್ರವರಿ 26 ರಂದು ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯವನ್ನು ನಾವು ಸ್ಟಾರ್ ಸ್ಪೋರ್ಟ್ಸ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್​ಸ್ಟಾರ್​ನಲ್ಲೂ ಪಂದ್ಯವನ್ನು ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ.

ಜಿಂಬಾಬ್ವೆ: ಸಿಕಂದರ್ ರಝಾ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ಗ್ರೇಮ್ ಕ್ರೀಮರ್, ಬ್ರಾಡ್ಲಿ ಇವಾನ್ಸ್, ಕ್ಲೈವ್ ಮದಂಡೆ, ಟಿನೊಟೆಂಡಾ ಮಪೋಸಾ, ತಡಿವಾನಾಶೆ ಮರುಮಾನಿ, ವೆಲ್ಲಿಂಗ್ಟನ್ ಮಸಕಡ್ಜಾ, ಟೋನಿ ಮುನ್ಯೊಂಗಾ, ತಶಿಂಗಾ ಮುಸೆಕಿವಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗರಾವ, ಬ್ರೆಂಡನ್ ಟೇಲರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಭಾರತ Vs ಕೆನಡಾ; ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಹೋಲಿಸಿದ ಭಾರತೀಯ ಮಹಿಳೆ – Kannada News | Indian woman admires work culture in Canada

ಕೈಯಲ್ಲೊಂದು ಉದ್ಯೋಗ (employment) ಇದ್ರೆ ಮಾತ್ರ ಗೌರವ. ಆದರೆ ಕಾರ್ಪೋರೇಟ್, ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಗ್ಯಾರಂಟಿ ಇರಲ್ಲ. ಯಾವಾಗ ಬೇಕಾದ್ರೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಹುದು. ಆದರೆ ಕೆನಾಡದಲ್ಲಿ (Canada) ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ಭಾರತ ಹಾಗೂ ಕೆನಡಾದ ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಹೋಲಿಸಿ ಮಾತನಾಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

@unfiltered.anshikaa ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅನ್ಶಿಕಾರವರು ನಂಬಿಕೆ ಆಧಾರಿತ ಕಚೇರಿ ವಾತಾವರಣ ಇಲ್ಲಿದೆ. ಆದರೆ, ತಾನು ಭಾರತದಲ್ಲಿದ್ದಾಗ ಕಾರ್ಪೊರೇಟ್ ಕೆಲಸ ಮಾಡಲು ಇಷ್ಟಪಡುತ್ತಿರಲಿಲ್ಲ. ಕೆನಡಾಕ್ಕೆ ತೆರಳಿದ ನಂತರ ತನ್ನ ಅಭಿಪ್ರಾಯ ಬದಲಾಯಿತು. ಎಲ್ಲರೂ ಬೆಳಿಗ್ಗೆ 9 ಗಂಟೆಗೆ ಕಚೇರಿಗೆ ಬರುತ್ತಾರೆ. ನಾವೆಲ್ಲರೂ ಮಾಡುವ ಮೊದಲ ಕೆಲಸವೆಂದರೆ ಒಂದು ಕಪ್ ಕಾಫಿ ಕುಡಿಯುವುದು. ಸಮಯಕ್ಕೆ ಸರಿಯಾಗಿ ಪಂಚ್ ಮಾಡುವುದಿಲ್ಲ. ಆದ್ದರಿಂದ ನೀವು 10 ನಿಮಿಷ, 15 ನಿಮಿಷ ತಡವಾದರೂ, ಯಾರೂ ನಿಮ್ಮನ್ನು ಪ್ರಶ್ನಿಸುವುದಿಲ್ಲ. ತಡವಾದರೆ ನೆಪಗಳನ್ನು ನೀಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ದಿನನಿತ್ಯದ ಕೆಲಸಗಳನ್ನು ಚರ್ಚಿಸಲು ಟೀಮ್ ಗಳು ಬೆಳಿಗ್ಗೆ 10 ಗಂಟೆಗೆ ಸಭೆ ನಡೆಸುತ್ತವೆ. ಮನಸ್ಥಿತಿಯನ್ನು ಹಗುರಗೊಳಿಸಲು ರಸಪ್ರಶ್ನೆಗಳು ಮತ್ತು ಸಾಂದರ್ಭಿಕ ಸಂಭಾಷಣೆಗಳು ಇರುತ್ತದೆ. ಮ್ಯಾನೇಜರ್ ನಿಮ್ಮ್ ಡೆಸ್ಕ್ ಸುತ್ತಲೂ ಸುಳಿದಾಡುವುದಿಲ್ಲ ಅಥವಾ ಉದ್ಯೋಗಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದಿಲ್ಲ. ಅವರು ನಿಮ್ಮನ್ನು ನಂಬುತ್ತಾರೆ. ನೀವು ವಯಸ್ಕರೆಂದು ಅವರಿಗೆ ತಿಳಿದಿದೆ. ನಿಮಗೆ ಯಾವುದೇ ಕೆಲಸವನ್ನು ವಹಿಸಿಕೊಟ್ಟರೂ, ನೀವು ಅದನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು. ಉದ್ಯೋಗಿಗಳ ಸಣ್ಣ ನಿದ್ರೆಯನ್ನು ಸಹ ಮಾಡಬಹುದು. ಇಲ್ಲಿನ ವಾತಾವರಣ ತುಂಬಾ ಹಗುರವಾಗಿದೆ. ಕಾರ್ಪೊರೇಟ್ ಎಲ್ಲೆಡೆ ವಿಷಕಾರಿಯಲ್ಲ ಎಂದು ನಾನು ಭಾವಿಸುತ್ತೇನೆ ಎಂದು ವಿವರಿಸಿರುವುದನ್ನು ನೋಡಬಹುದು.

ಇದನ್ನೂ ಓದಿ: 2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ದಯವಿಟ್ಟು ಒಂದೇ ಎಂದು ಭಾವಿಸಬೇಡಿ. ಅದು ಕಂಪನಿ ಹಾಗೂ ಅಲ್ಲಿನ ಮ್ಯಾನೇಜರ್ ರನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ದೇಸಿ ಅಲ್ಲದ ಮ್ಯಾನೇಜರ್ ನಿಜವಾಗಿಯೂ ಒಳ್ಳೆಯವರಾಗಿರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಳೆದ 10 ವರ್ಷಗಳಿಂದ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ, ನಾನು ಇದನ್ನು ಬೆಂಬಲಿಸಬಲ್ಲೆ. ದೇಸಿ ಮ್ಯಾನೇಜರನ್ನು ಹೊಂದಿರುವ ಕಂಪನಿಗಳನ್ನು ಯಾವುದೇ ಬೆಲೆ ತೆತ್ತಾದರೂ ತಪ್ಪಿಸುವುದು ಮುಖ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version