ಶೆಟ್ಟಿ ಗ್ಯಾಂಗ್ ಬಿಟ್ಟು ಕನ್ನಡದ ಕೆಲವರಿಗೆ ಮಾತ್ರ ಮದುವೆ ಆಹ್ವಾನ ನೀಡಿದ ರಶ್ಮಿಕಾ – Kannada News | Rashmika Mandanna invites a few people from Kannada Film Industry

ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ. ಆದರೆ ಈಗ ಮದುವೆಯ ಸಂದರ್ಭದಲ್ಲಿ ಶೆಟ್ಟಿ ಗ್ಯಾಂಗ್​ ಅನ್ನು ಅವರು ಮರೆತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಆಹ್ವಾನವನ್ನು ಕನ್ನಡ ಚಿತ್ರರಂಗದ ಕೆಲವೇ ಕೆಲವು ಮಂದಿಗೆ ಮಾತ್ರ ನೀಡಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರು ಮದುವೆ ಆಗುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರು ಈ ಮದುವೆಗೆ ಹಾಜರಿ ಹಾಕುತ್ತಿದ್ದಾರೆ. ಇನ್ನು ಯಾರೆಲ್ಲ ಮದುವೆಗೆ ಬರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

10ನೇ ತರಗತಿ ಬೋರ್ಡ್ ಎಕ್ಸಾಂ ಬರೆಯುತ್ತಿದ್ದ ಬಾಲಕಿಗೆ ಹೆರಿಗೆ; ಆಕೆ ಗರ್ಭಿಣಿಯೆಂದೇ ಗೊತ್ತಿರಲಿಲ್ಲ! – Kannada News | Class 10 student delivered a Baby at exam centre in Madhya Pradesh family unaware of pregnancy

ಧಾರ್, ಫೆಬ್ರವರಿ 25: ಈಗಿನ ಕಾಲದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಇರುವುದರಿಂದ ಅವರ ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಲಭ್ಯವಿರುತ್ತದೆ. ತಮಗೆ ಬೇಕಾದ ಎಲ್ಲ ವಿಷಯವನ್ನೂ ಮಕ್ಕಳು ಮೊಬೈಲಿನಿಂದಲೇ ತಿಳಿದುಕೊಳ್ಳುತ್ತಾರೆ. ಹೀಗಿದ್ದರೂ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾನು ಗರ್ಭಿಣಿಯಾದ (Pregnant) ವಿಷಯ ಮುಚ್ಚಿಟ್ಟು ಮಗುವನ್ನು ಹೆತ್ತಿದ್ದಾಳೆ. ಬೋರ್ಡ್ ಎಕ್ಸಾಂ ಬರೆಯುವಾಗ ಪರೀಕ್ಷಾ ಕೇಂದ್ರದಲ್ಲಿಯೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ! ಎಸ್​ಎಸ್​ಎಲ್​ಸಿ ಓದುವ ಹುಡುಗಿಗೆ ತನ್ನ ದೇಹದಲ್ಲಾದ ಬದಲಾವಣೆಗಳು ಗೊತ್ತಾಗಲಿಲ್ಲವೇ? ಹೆರಿಗೆಯ ಸಮಯ ಬಂದರೂ ಆಕೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದೇಕೆ? ಆಕೆ ತನ್ನ ತಂದೆ-ತಾಯಿಯಿಂದ ತಾನು ಗರ್ಭಿಣಿಯಾದ ವಿಷಯ ಮುಚ್ಚಿಟ್ಟಿದ್ದೇಕೆ? ಆಕೆ ಗರ್ಭಿಣಿಯಾಗಲು ಕಾರಣ ಯಾರು? ಎಂಬ ಹಲವು ಪ್ರಶ್ನೆಗಳು ಈ ಘಟನೆಯ ಬಳಿಕ ಎದ್ದಿವೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕೈಗಾರಿಕಾ ಪ್ರದೇಶವಾದ ಪಿತಾಂಪುರದಲ್ಲಿ ಮಂಗಳವಾರ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದಾಗ 10ನೇ ತರಗತಿಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವುದು ತೀವ್ರ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ವಿದ್ಯಾವಂತೆಯಾದ ಬಾಲಕಿ ತಾನು ಗರ್ಭಿಣಿಯಾದರೂ ಆ ವಿಷಯ ಮುಚ್ಚಿಟ್ಟಿದ್ದೇಕೆ? ಮೊದಲೇ ಹೇಳಿದ್ದರೆ ಇಷ್ಟು ಚಿಕ್ಕ ವಯಸ್ಸಿಗೆ ತಾಯಿಯಾಗುವ ಅಪಾಯ ತಪ್ಪಿಸಬಹುದಿತ್ತು, ಆ ಮಗುವಿನ ತಂದೆ ಯಾರು ಎಂಬಿತ್ಯಾದಿ ಪ್ರಶ್ನೆಗಳೆದ್ದಿವೆ.

ಇದನ್ನೂ ಓದಿ: ಧರ್ಮಗುರುವಿನಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಮಗು ಹುಟ್ಟೋವರೆಗೂ ಗರ್ಭಿಣಿಯಾದ ವಿಷಯವೇ ಗೊತ್ತಾಗಲಿಲ್ಲ!

ಮಧ್ಯಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪರೀಕ್ಷೆಗಳ ಕೇಂದ್ರವಾದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಗಣಿತ ಪತ್ರಿಕೆ ಬರೆಯಲು ಹಾಜರಾಗಿದ್ದ ಬಾಲಕಿ ಒಂದೂವರೆ ಗಂಟೆ ಪರೀಕ್ಷೆ ಬರೆದಿದ್ದಳು. ಆದರೆ, ಆಗ ಇದ್ದಕ್ಕಿದ್ದಂತೆ ಆಕೆಗೆ ಹೊಟ್ಟೆನೋವು ಜೋರಾಗಿತ್ತು. ಹೀಗಾಗಿ, ಪರೀಕ್ಷೆಯ ಮಧ್ಯದಲ್ಲಿ ಆಕೆ ಬಾತ್​ರೂಂಗೆ ಹೋಗಲು ಅನುಮತಿ ಕೇಳಿದ್ದಳು. ವಿಪರೀತ ಹೊಟ್ಟೆನೋವಿದ್ದುದರಿಂದ ಆಕೆಗೆ ಬಾತ್​ರೂಂಗೆ ಹೋಗಲು ಅನುಮತಿ ನೀಡಲಾಗಿತ್ತು. ಅದಾದ ಕೆಲವೇ ನಿಮಿಷಗಳಲ್ಲಿ ಬಾತ್​ರೂಂನಿಂದ ಮಗು ಅಳುವ ಶಬ್ದ ಕೇಳಿತ್ತು.

ಆಕೆ ಬಾತ್​​ರೂಂಗೆ ಹೋದಾಗ ಅಲ್ಲೇ ಆಕೆಗೆ ಹೆರಿಗೆಯಾಗಿದೆ. ಟಾಯ್ಲೆಟ್​​ನಲ್ಲೇ ಆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಅಳುವ ಶಬ್ದ ಕೇಳಿದ್ದರಿಂದ ಶಿಕ್ಷಕಿ ಟಾಯ್ಲೆಟ್ ಒಳಗೆ ಹೋಗಿ ನೋಡಿದರು. ಅಲ್ಲಿ ಆ ಬಾಲಕಿ ಹಾಗೂ ರಕ್ತ ಮೆತ್ತಿಕೊಂಡಿದ್ದ ಮಗುವನ್ನು ಕಂಡು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ವಿಷಯ ತಿಳಿಸಿದರು.

ಇದನ್ನೂ ಓದಿ: ಹೆರಿಗೆಯ ನಂತರ ಮುಟ್ಟು ವಿಳಂಬವಾಗುವುದು ಅಪಾಯಕಾರಿಯೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು?

ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯು ತಕ್ಷಣ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ಮಾಹಿತಿ ನೀಡಿತು. ಆ ವಿದ್ಯಾರ್ಥಿನಿ ಮತ್ತು ಆಕೆಯ ನವಜಾತ ಶಿಶುವನ್ನು ಪಿತಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದರು. ಪ್ರಸ್ತುತ ತಾಯಿ ಹಾಗೂ ಮಗುವನ್ನು ಅಬ್ಸರ್ವೇಷನ್​​ನಲ್ಲಿಡಲಾಗಿದೆ.

ಈ ಘಟನೆಯು ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕೇಂದ್ರದ ಸಿಬ್ಬಂದಿಯಲ್ಲಿ ಭಯವನ್ನುಂಟುಮಾಡಿದೆ. ವಿಚಿತ್ರವೆಂದರೆ, ಆ ಬಾಲಕಿ ಗರ್ಭಿಣಿಯಾದ ವಿಷಯ ಆಕೆಯ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ, ಮಗಳಿಗೆ ಹೆರಿಗೆಯಾಗಿದೆ ಎಂಬ ವಿಷಯ ತಿಳಿದು ಅವರು ಶಾಕ್ ಆಗಿದ್ದಾರೆ. ಆದರೆ, 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಆಕೆ ಈ ವಿಷಯವನ್ನು ಮನೆಯವರಿಂದ, ಶಾಲೆಯವರಿಂದ ಹೇಗೆ ಮುಚ್ಚಿಟ್ಟಳು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಸದ್ಯದ ಪೊಲೀಸ್ ತನಿಖೆಯ ಪ್ರಕಾರ, ಆ ಅಪ್ರಾಪ್ತ ಬಾಲಕಿ ಕಳೆದ 2 ವರ್ಷಗಳಿಂದ ಯುವಕನೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬುದು ಗೊತ್ತಾಗಿದೆ. ಕಳೆದ ವರ್ಷದಿಂದ ಆಕೆ ಆತನೊಂದಿಗೆ ಪದೇ ಪದೇ ದೈಹಿಕ ಸಂಬಂಧ ಹೊಂದಿದ್ದಳು. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಾಳೆ. ಆಕೆ ಈ ವಿಷಯವನ್ನು ಮನೆಯವರ ಬಳಿ ಹೇಳಿರಲಿಲ್ಲ. ಆರೋಪಿಯನ್ನು ಗುರುತಿಸಲಾಗಿದೆ. ಅವನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಚಿತ್ರ ಸಮಸ್ಯೆಗೆ ನಲುಗಿದ ಕುಟುಂಬ: ಇದಕ್ಕಿಂದಂತೆ ರಕ್ತ ಜಿನುಗುವುದು, ಚಿನ್ನ ಮಾಯ, ಬಟ್ಟೆಗಳಿಗೆ ಬೆಂಕಿ – Kannada News | Vijayapura Family’s 16 Year Mystery: Unexplained Wounds, Fires and Disappearing Gold

ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿImage Credit source: tv9 kannada

ವಿಜಯಪುರ, ಫೆಬ್ರವರಿ 25: ಒಂದು ಕಾಲದಲ್ಲಿ ಆ ಕುಟುಂಬದಲ್ಲಿ (family) ಸಂತಸ ಮನೆ ಮಾಡಿತ್ತು. ಆದರೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ, ಕಳೆದ 16 ವರ್ಷಗಳಿಂದ ಇಡೀ ಕುಟುಂಬ ನರಕಯಾತನೆ ಅನುಭವಿಸುತ್ತಿದೆ.  ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದೆ. ಓರ್ವ ಪುತ್ರ ಅಕಾಲಿಕ ಮರಣ ಹೊಂದಿದರೆ, ಇಬ್ಬರಿಗೆ ವಿಚಿತ್ರ ಸಮಸ್ಯೆಗಳು (mysterious problems) ಎದುರಾಗುತ್ತಿವೆ. ಕಂಡಕಂಡ ದೇವಸ್ಥಾನಗಳನ್ನು ಸುತ್ತಿದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಇದನ್ನು ಬಾನಾಮತಿ ಎನ್ನಬೇಕೋ, ಬೇರೆ ವಿಚಿತ್ರ ಸಮಸ್ಯೆ ಎನ್ನಬೇಕೋ ಗೊತ್ತಿಲ್ಲ, ಒಟ್ಟಿನಲ್ಲಿ ಕುಟುಂಬ ನಲುಗಿ ಹೋಗಿದೆ.

ವಿಚಿತ್ರ ಸಮಸ್ಯೆಗೆ ತುತ್ತಾದ ಇಡೀ ಕುಟುಂಬ

ತಮ್ಮಾರಾಯ ಪಾಟೀಲ್ ಹಾಗೂ ಗಂಗೂಬಾಯಿ ದಂಪತಿಗೆ ಬಸವರಾಜ ಹಾಗೂ ಸುನೀಲ ಎಂಬ ಇಬ್ಬರು ಗಂಡು ಹಾಗೂ ಸುಜಾತಾ, ಸುವರ್ಣಾ, ಸುನೀತಾ ಎಂಬ ಮೂವರು ಹೆಣ್ಣು ಮಕ್ಕಳು. ಇವರಲ್ಲಿ ಸುನೀಲ್ ಪಾಟೀಲ್ ಹಾಗೂ ಸುನೀತಾಗೆ ವಿಚಿತ್ರ ಸಮಸ್ಯೆಗೆ ತುತ್ತಾಗಿದ್ದಾರೆ. ಇವರಿಬ್ಬರು ಬಾಲ್ಯದಿಂದಲೇ ಸಮಸ್ಯೆ ಅನುಭವಿಸುತ್ತಿದ್ದು, ನರಕಯಾತನೆ ಪಡುತ್ತಿದ್ದಾರೆ. ಮೂಲತಃ ಚಡಚಣ ತಾಲೂಕಿನ ಉಮರಾಣಿ ಗ್ರಾಮದವರು. ಸುನೀಲ್​ ಹಾಗೂ ಸುನೀತಾ ಪ್ರಾಥಮಿಕ ಶಾಲೆಗೆ ಹೋಗುತ್ತಿರೋವಾಗ ಇವರ ಮೈಮೇಲೆ ತನ್ನಿಂದ ತಾನೇ ಗಾಯಗಳಾಗಿ ರಕ್ತ ಸೋರಲು ಆರಂಭವಾಗುತ್ತಿತ್ತು. ಇವರ ಬಟ್ಟೆಬರೆಗಳಿಗೆ ತನ್ನಿಂದ ತಾನೇ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗುತ್ತಿತ್ತು.

ಇದನ್ನೂ ಓದಿ: ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ

ಚಿನ್ನಾಭರಣಗಳು ಇಟ್ಟಲ್ಲಿಯೇ ಮಾಯವಾಗಿ ಹೋಗಿವೆ. ಅಮಾವಾಸ್ಯೆ ಹಾಗೂ ಹುಣ್ಣಿಮೆಯ ವೇಳೆ ಈ ರೀತಿ ಆಗುತ್ತಿತ್ತು. ಇದೇ ಚಿಂತೆಯಲ್ಲಿ ಇವರ ಹಿರಿಯ ಪುತ್ರ ಬಸವರಾಜ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಬೇಸತ್ತು, ತಮ್ಮೂರು ಉಮರಾಣಿ ಬಿಟ್ಟು ವಿಜಯಪುರ ನಗರದಲ್ಲಿ ಮನೆ ಮಾಡಿದರೂ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆಯಂತೆ. ಬಳಿಕ ಸುನೀಲನ ತಾಯಿಯ ತವರೂರು ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ಸೋದರ ಮಾವನ ಮನೆಗೆ ಬಂದರೂ ಈ ವಿಚಿತ್ರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಹೊರತು ಕಡಿಮೆ ಆಗಿಲ್ಲ. ಸೋದರಳಿಯ ಹಾಗೂ ಸೋದರ ಸೊಸೆಯ ಸಮಸ್ಯೆಯಿಂದ ಇಡೀ ಕುಟುಂಬ ಕಣ್ಣೀರು ಹಾಕುವಂತಾಗಿದೆ.

ಕಳೆದ 16 ವರ್ಷಗಳಿಂದ ಪಾಟೀಲ್​ ಕುಟುಂಬದವರಿಗೆ ವಿಚಿತ್ರ ಕಾಟ ಮುಂದುವರೆದಿದೆ. ಆರಂಭದಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ವೇಳೆ ಮಾತ್ರ ಸುನೀತಾ ಹಾಗೂ ಸುನೀಲ್​​ಗೆ ದೇಹದ ಮೇಲೆ ತನ್ನಿಂದ ತಾನೇ ಗಾಯಗಳಾಗುವುದು, ರಕ್ತ ಸುರಿಯುವುದಾಗುತ್ತಿತ್ತು. ಹಣೆ, ಕೈ, ಎದೆ ಭಾಗ, ಹೊಟ್ಟೆ, ಬೆನ್ನು, ತೊಡೆ ಹಾಗೂ ಕಾಲುಗಳ ಮೇಲೆ ಗಾಯಗಳಾಗಿ ರಕ್ತ ಸುರಿಯುತ್ತದೆ.

ಬ್ಲೇಡ್​ನಿಂದ ಹರಿದಂತೆ ಗಾಯಗಳಾಗುತ್ತವೆ. ಉರ್ದು ಭಾಷೆಯನ್ನು ಹೋಲುವ ಗುರುತುಗಳು, ಅಂಕಿಗಳು, ಅರ್ಧ ಚಂದ್ರ ನಕ್ಷತ್ರದ ಗುರುತು ಹೋಲುವ ಚಿತ್ರಗಳು ರಕ್ತದಲ್ಲೇ ಮೂಡುತ್ತವೆ. ಕಳೆದ ಮೂರು ದಿನಗಳ ಹಿಂದೆ ಸುನೀಲ್​ ಕಿವಿಯಲ್ಲಿ ರಕ್ತ ಸುರಿದು ಕೇಳದಂತಾಗಿವೆ. ಅದಕ್ಕೂ ಮುನ್ನ ಸುನೀಲ್​ ಹಾಗೂ ಸುನೀತಾಗೆ ಸೇರಿದ ವಸ್ತುಗಳಿಗೆ ಬೆಂಕಿ ಬಿದ್ದು ಎಲ್ಲವೂ ಸುಟ್ಟು ಕರಕಲಾಗಿವೆ. ತನ್ನಿಂದ ತಾನೇ ಬೆಂಕಿ ಹೊತ್ತಿ ಉರಿದು ಹೋಗಿವೆ. 250 ರಿಂದ 300 ಗ್ರಾಂ ಚಿನ್ನಾಭರಣ ಸಹ ಇಟ್ಟಲ್ಲಿಯೇ ಮಾಯವಾಗಿವೆಯಂತೆ.

ನಮ್ಮ ಸಮಸ್ಯೆ ಯಾರಾದರೂ ಬಗೆಹರಿಸಿ: ಕಣ್ಣೀರಿಟ್ಟ ತಾಯಿ

ಈ ಸಮಸ್ಯೆಯಿಂದಾಗಿ ಸುನೀತಾಗೆ ಇನ್ನು ಮದುವೆ ಆಗಿಲ್ಲ. ಸುನೀಲ್​ ಮದುವೆಯಾಗಿದ್ದರೂ ಸಂಸಾರ ಮಾಡಲಾಗುತ್ತಿಲ್ಲ. ತಮ್ಮ ಕುಟುಂಬಕ್ಕೆ ಬಂದ ಈ ವಿಚಿತ್ರ ಸಮಸ್ಯೆಗೆ ಪಾಟೀಲ್ ಕುಟುಂಬ ಕಂಡಕಂಡ ದೇವಸ್ಥಾನಗಳನ್ನು ಸುತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ. ತಂತ್ರ ಮಂತ್ರಗಳನ್ನು ಮಾಡಿಸಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ನಮ್ಮ ಸಮಸ್ಯೆಗೆ ಪರಿಹಾರವೇ ಇಲ್ವಾ? ಈ ಸಮಸ್ಯೆಯನ್ನು ಯಾರಾದರೂ ಬಗೆಹರಿಸಿ ಎಂದು ಸುನೀಲ್​ ತಾಯಿ ಗಂಗೂಬಾಯಿ ಪಾಟೀಲ್​ ಕಣ್ಣೀರು ಹಾಕಿದರು.

ಇದನ್ನೂ ಓದಿ: ವಿಜಯಪುರ: 56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!

ಕೇಳಲು ವಿಚಿತ್ರವಾದರು ಸಹ ಇಡೀ ಕುಟುಂಬ ಮಾತ್ರ ವಿಚಿತ್ರ ಸಮಸ್ಯೆಗೆ ತುತ್ತಾಗಿ ಬಳಲಿ ಬೆಂಡಾಗಿದೆ. ತಮಗೆ ಒದಗಿರುವ ಸಂಕಷ್ಟ ದೂರಾದರೆ ಸಾಕು ಎಂದು ಇಡೀ ಕುಟುಂಬ ರೋಧಿಸುತ್ತಿದೆ. ಮೇಲ್ನೋಟಕ್ಕೆ ವಾಮಾಚಾರವಾಗಿರುವ ರೀತಿ ಕಂಡುಬಂದಿದೆ. ಜೊತೆಗೆ ಬೇರೆ ಏನಾದರೂ ಸಮಸ್ಯೆ ಇದ್ದರೂ ಇರಬಹುದು ಎನ್ನಲಾಗುತ್ತಿದೆ. ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ZIM: ಭಾರತ- ಜಿಂಬಾಬ್ವೆ ನಡುವಿನ ನಿರ್ಣಾಯಕ ಪಂದ್ಯ ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ಆರಂಭ? – Kannada News | T20 World Cup Super 8: India vs Zimbabwe Match Date, Time and Live Streaming

2026 ರ ಟಿ20 ವಿಶ್ವಕಪ್‌ನ (T20 World Cup) ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿತು. ಈ ಸೋಲಿನಿಂದ ಟೀಂ ಇಂಡಿಯಾ ಸೆಮಿಫೈನಲ್ ತಲುಪುವುದು ಕಷ್ಟಕರವಾಗಿದೆ. ಹೀಗಾಗಿ ಟೀಂ ಇಂಡಿಯಾ ಸೆಮಿಫೈನಲ್‌ಗೇರಬೇಕೆಂದರೆ ಉಳಿದಿರುವ ಎರಡೂ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆಲ್ಲಬೇಕಿದೆ. ಟೀಂ ಇಂಡಿಯಾ ತನ್ನ ಎರಡನೇ ಸೂಪರ್ 8 ಪಂದ್ಯವನ್ನು ಜಿಂಬಾಬ್ವೆ (India vs Zimbabwe) ವಿರುದ್ಧ ಆಡುತ್ತಿದೆ. ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿರುವ ಜಿಂಬಾಬ್ವೆ ತಂಡವನ್ನು ಟೀಂ ಇಂಡಿಯಾ ಕಡಿಮೆ ಅಂದಾಜು ಮಾಡುವಂತಿಲ್ಲ. ಟೀಂ ಇಂಡಿಯಾ ಸಾಂಘಿಕ ಪ್ರದರ್ಶನ ನೀಡಿದರೆ ಮಾತ್ರ ಮುಂದಿನ ಸುತ್ತಿಗೆ ತನ್ನ ಕನಸನ್ನು ಜೀವಂತವಾಗಿರಿಸಿಕೊಳ್ಳಬಹುದು. ಇಲ್ಲದಿದ್ದರೆ, ತಂಡದ ಪಯಣ ಸೂಪರ್ 8 ಸುತ್ತಿನಲ್ಲೇ ಕೊನೆಗೊಳ್ಳಬಹುದು.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಫೆಬ್ರವರಿ 26 ರಂದು ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಜಿಂಬಾಬ್ವೆ ನಡುವಿನ ಸೂಪರ್ 8 ಪಂದ್ಯವನ್ನು ನಾವು ಸ್ಟಾರ್ ಸ್ಪೋರ್ಟ್ಸ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್​ಸ್ಟಾರ್​ನಲ್ಲೂ ಪಂದ್ಯವನ್ನು ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ.

ಜಿಂಬಾಬ್ವೆ: ಸಿಕಂದರ್ ರಝಾ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ಗ್ರೇಮ್ ಕ್ರೀಮರ್, ಬ್ರಾಡ್ಲಿ ಇವಾನ್ಸ್, ಕ್ಲೈವ್ ಮದಂಡೆ, ಟಿನೊಟೆಂಡಾ ಮಪೋಸಾ, ತಡಿವಾನಾಶೆ ಮರುಮಾನಿ, ವೆಲ್ಲಿಂಗ್ಟನ್ ಮಸಕಡ್ಜಾ, ಟೋನಿ ಮುನ್ಯೊಂಗಾ, ತಶಿಂಗಾ ಮುಸೆಕಿವಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗರಾವ, ಬ್ರೆಂಡನ್ ಟೇಲರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಭಾರತ Vs ಕೆನಡಾ; ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಹೋಲಿಸಿದ ಭಾರತೀಯ ಮಹಿಳೆ – Kannada News | Indian woman admires work culture in Canada

ಕೈಯಲ್ಲೊಂದು ಉದ್ಯೋಗ (employment) ಇದ್ರೆ ಮಾತ್ರ ಗೌರವ. ಆದರೆ ಕಾರ್ಪೋರೇಟ್, ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಗ್ಯಾರಂಟಿ ಇರಲ್ಲ. ಯಾವಾಗ ಬೇಕಾದ್ರೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಹುದು. ಆದರೆ ಕೆನಾಡದಲ್ಲಿ (Canada) ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ಭಾರತ ಹಾಗೂ ಕೆನಡಾದ ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಹೋಲಿಸಿ ಮಾತನಾಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

@unfiltered.anshikaa ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅನ್ಶಿಕಾರವರು ನಂಬಿಕೆ ಆಧಾರಿತ ಕಚೇರಿ ವಾತಾವರಣ ಇಲ್ಲಿದೆ. ಆದರೆ, ತಾನು ಭಾರತದಲ್ಲಿದ್ದಾಗ ಕಾರ್ಪೊರೇಟ್ ಕೆಲಸ ಮಾಡಲು ಇಷ್ಟಪಡುತ್ತಿರಲಿಲ್ಲ. ಕೆನಡಾಕ್ಕೆ ತೆರಳಿದ ನಂತರ ತನ್ನ ಅಭಿಪ್ರಾಯ ಬದಲಾಯಿತು. ಎಲ್ಲರೂ ಬೆಳಿಗ್ಗೆ 9 ಗಂಟೆಗೆ ಕಚೇರಿಗೆ ಬರುತ್ತಾರೆ. ನಾವೆಲ್ಲರೂ ಮಾಡುವ ಮೊದಲ ಕೆಲಸವೆಂದರೆ ಒಂದು ಕಪ್ ಕಾಫಿ ಕುಡಿಯುವುದು. ಸಮಯಕ್ಕೆ ಸರಿಯಾಗಿ ಪಂಚ್ ಮಾಡುವುದಿಲ್ಲ. ಆದ್ದರಿಂದ ನೀವು 10 ನಿಮಿಷ, 15 ನಿಮಿಷ ತಡವಾದರೂ, ಯಾರೂ ನಿಮ್ಮನ್ನು ಪ್ರಶ್ನಿಸುವುದಿಲ್ಲ. ತಡವಾದರೆ ನೆಪಗಳನ್ನು ನೀಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ದಿನನಿತ್ಯದ ಕೆಲಸಗಳನ್ನು ಚರ್ಚಿಸಲು ಟೀಮ್ ಗಳು ಬೆಳಿಗ್ಗೆ 10 ಗಂಟೆಗೆ ಸಭೆ ನಡೆಸುತ್ತವೆ. ಮನಸ್ಥಿತಿಯನ್ನು ಹಗುರಗೊಳಿಸಲು ರಸಪ್ರಶ್ನೆಗಳು ಮತ್ತು ಸಾಂದರ್ಭಿಕ ಸಂಭಾಷಣೆಗಳು ಇರುತ್ತದೆ. ಮ್ಯಾನೇಜರ್ ನಿಮ್ಮ್ ಡೆಸ್ಕ್ ಸುತ್ತಲೂ ಸುಳಿದಾಡುವುದಿಲ್ಲ ಅಥವಾ ಉದ್ಯೋಗಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದಿಲ್ಲ. ಅವರು ನಿಮ್ಮನ್ನು ನಂಬುತ್ತಾರೆ. ನೀವು ವಯಸ್ಕರೆಂದು ಅವರಿಗೆ ತಿಳಿದಿದೆ. ನಿಮಗೆ ಯಾವುದೇ ಕೆಲಸವನ್ನು ವಹಿಸಿಕೊಟ್ಟರೂ, ನೀವು ಅದನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು. ಉದ್ಯೋಗಿಗಳ ಸಣ್ಣ ನಿದ್ರೆಯನ್ನು ಸಹ ಮಾಡಬಹುದು. ಇಲ್ಲಿನ ವಾತಾವರಣ ತುಂಬಾ ಹಗುರವಾಗಿದೆ. ಕಾರ್ಪೊರೇಟ್ ಎಲ್ಲೆಡೆ ವಿಷಕಾರಿಯಲ್ಲ ಎಂದು ನಾನು ಭಾವಿಸುತ್ತೇನೆ ಎಂದು ವಿವರಿಸಿರುವುದನ್ನು ನೋಡಬಹುದು.

ಇದನ್ನೂ ಓದಿ: 2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ದಯವಿಟ್ಟು ಒಂದೇ ಎಂದು ಭಾವಿಸಬೇಡಿ. ಅದು ಕಂಪನಿ ಹಾಗೂ ಅಲ್ಲಿನ ಮ್ಯಾನೇಜರ್ ರನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ದೇಸಿ ಅಲ್ಲದ ಮ್ಯಾನೇಜರ್ ನಿಜವಾಗಿಯೂ ಒಳ್ಳೆಯವರಾಗಿರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಳೆದ 10 ವರ್ಷಗಳಿಂದ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ, ನಾನು ಇದನ್ನು ಬೆಂಬಲಿಸಬಲ್ಲೆ. ದೇಸಿ ಮ್ಯಾನೇಜರನ್ನು ಹೊಂದಿರುವ ಕಂಪನಿಗಳನ್ನು ಯಾವುದೇ ಬೆಲೆ ತೆತ್ತಾದರೂ ತಪ್ಪಿಸುವುದು ಮುಖ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಸರ ಕಾಳಜಿಯ ಕನ್ನಡ ಸಿನಿಮಾ ‘ವಿಸ್ಪರ್ಸ್ ಆಫ್ ದಿ ರಿವರ್’ ಸದ್ಯದಲ್ಲೇ ರಿಲೀಸ್ – Kannada News | Whispers of the River Kannada movie to be released on OTT soon

ಒಂದು ಅಪರೂಪದ ಸಾಮಾಜಿಕ ಚಿತ್ರವಾಗಿ ‘ವಿಸ್ಪರ್ಸ್ ಆಫ್ ದಿ ರಿವರ್’ (Whispers of the River) ಸಿನಿಮಾ ಮೂಡಿಬಂದಿದೆ. ಕನ್ನಡ ಚಿತ್ರರಂಗದಲ್ಲಿ ತರಹೇವಾರಿ ಸಿನಿಮಾಗಳು ಬರುತ್ತಿವೆ. ಲವ್, ಕ್ರೈಮ್, ಸಸ್ಪನ್ಸ್, ಹಾರರ್ ಹೀಗೆ ಅನೇಕ ಪ್ರಕಾರದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಎಲ್ಲಾ ಸಿನಿಮಾಗಳ ನಡುವೆ ವಿಭಿನ್ನ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ‘ವಿಸ್ಪರ್ಸ್ ಆಫ್ ದಿ ರಿವರ್’ ಸಿನಿಮಾ ಸಿದ್ಧವಾಗಿದೆ. ಕೆ. ಪ್ರಭಾಕರನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

ಈ ಸಿನಿಮಾದಲ್ಲಿ ಮಂಜುನಾಥ್ ಪೈ ಅವರು ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ನಟನೆ ಜೊತೆಗೆ ಮಂಜುನಾಥ್ ಪೈ ಅವರೇ ಚಿತ್ರಕಥೆಯನ್ನು ಬರೆದಿದ್ದಾರೆ. ಈ ಸಿನಿಮಾವನ್ನು ಸ್ನೇಹಿತರಾದ ರಾಧಾಕೃಷ್ಣ ಪೈ, ಶ್ರೀರಾಮ್ ಸಿ, ವಿವೇಕ್ ವಿನ್ಸೆಂಟ್ ಸೇರಿ ‘ಮೀನಾಸ್ ಸ್ಟುಡಿಯೋ’ ಬ್ಯಾನರ್ ಮೂಲಕ ನಿರ್ಮಿಸಿದ್ದಾರೆ. ರೈತರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವೃತ್ತಿಪರರು, ಸಿನಿಮಾ ತಂತ್ರಜ್ಞರು ಮತ್ತು ನಾಟಕ ಕಲಾವಿದರೆಲ್ಲರು ಒಟ್ಟಿಗೆ ಸೇರಿ ಈ ಸಿನಿಮಾವನ್ನು ರೂಪಿಸಿದ್ದಾರೆ.

ನದಿಗಳೊಂದಿಗೆ ನಮ್ಮ ಸಂಬಂಧವನ್ನು ಮರುಪರಿಶೀಲಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ನದಿಗಳನ್ನು ಉಳಿಸುವ ಬಗ್ಗೆ ಭಾವನಾತ್ಮಕವಾಗಿ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಇತ್ತೀಚೆಗೆ ಬಿಡುಗಡೆ ಆಗಿರುವ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋಗಳಲ್ಲಿ ಸಿನಿ ಗಣ್ಯರು ಹಾಗೂ ಪ್ರೇಕ್ಷಕರಿಂದ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎಂದು ಚಿತ್ರತಂಡ ಹೇಳಿದೆ.

‘ವಿಸ್ಪರ್ಸ್ ಆಫ್ ದಿ ರಿವರ್’ ಸಿನಿಮಾದ ಬಗ್ಗೆ ಹೇಳುವುದಾರೆ, ಕೃಷಿಗೆ ಸಂಬಂಧಿತ ವ್ಯವಹಾರವನ್ನು ವಿಸ್ತರಿಸುವ ಕನಸನ್ನು ಹೊಂದಿರುವ ಮಗ ಕೆಲಸ ಬಿಟ್ಟು ಊರಿಗೆ ಮರಳುತ್ತಾನೆ. ಆದರೆ ತಂದೆ-ಮಗನ ನಡುವಿನ ವಿಭಿನ್ನ ದೃಷ್ಟಿಕೋನಗಳು ಸಂಘರ್ಷಕ್ಕೆ ಕಾರಣವಾಗುತ್ತವೆ. ಬಳಿಕ ಮಗ ಮಣ್ಣು, ನದಿ ಹಾಗೂ ಮೂಲ ಮೌಲ್ಯಗಳೊಂದಿಗೆ ಬಾಂಧವ್ಯ ಬೆಳಸಿಕೊಳ್ಳುತ್ತಾನೆ. ಹೀಗೆ ಸಾಗುತ್ತದೆ ಕಥೆ.

ಇದನ್ನೂ ಓದಿ: ಫಿಲ್ಮ್​ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್​ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ

ಈ ಸಿನಿಮಾಗೆ ರೋಹಿತ್ ಪೂಜಾರಿ ಸಂಗೀತ ನೀಡಿದ್ದಾರೆ. ಕೆ. ಸತ್ಯರಾಜ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶಬಾನಾ, ಕಾಂತಾರ ಖ್ಯಾತಿಯ ಪ್ರಭಾಕರ್ ಕುಂದರ್ ಮತ್ತು ದಿ. ಪ್ರಭಾಕರ್ ಕಲ್ಯಾಣಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಒಟಿಟಿ ಮೂಲಕ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

T20 World Cup: ಜಿಂಬಾಬ್ವೆ ವಿರುದ್ಧ ಆಡ್ತಾರಾ ರಿಂಕು ಸಿಂಗ್? ಕೋಚ್ ಹೇಳಿದ್ದೇನು? – Kannada News | Rinku Singh’s T20 World Cup Return: India vs Zimbabwe Match and Playing 11 Status

ರಿಂಕು ಸಿಂಗ್ ತಂಡಕ್ಕೆ ಸೇರಿದರೆ, ಕೋಚ್ ಸೀತಾಂಶು ಕೊಟಕ್ ಭರವಸೆ ನೀಡಿದಂತೆ, ಅವರು ಜಿಂಬಾಬ್ವೆ ವಿರುದ್ಧ ಆಡುವುದು ಖಚಿತ. ಆದಾಗ್ಯೂ ರಿಂಕು ಸಿಂಗ್ ಮನೆಗೆ ಮರಳಿರುವ ಕಾರಣ, ಚೆನ್ನೈನಲ್ಲಿ ಹೆಚ್ಚಿನ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ರಿಂಕು ತಂಡ ಸೇರಿದರೂ ಅವರನ್ನು ಪ್ಲೇಯಿಂಗ್​ 11ನಿಂದ ಹೊರಗಿಡುವ ಸಾಧ್ಯತೆಗಳು ಹೆಚ್ಚಿವೆ.

Source link

ಸಿಜೆ ರಾಯ್ ಮಾದರಿಯಲ್ಲಿ ಮತ್ತೋರ್ವ ಆತ್ಮಹತ್ಯೆ: ಐಟಿಗೆ ಹೆದರಿದ್ರಾ ಬಿಬಿಎಂಪಿ ನಿವೃತ್ತ ಚೀಫ್ ಇಂಜಿನಿಯರ್? – Kannada News | BBMP retired chief engineer parameshwarayya Commits Suicide In Bengaluru Like CJ roy

ಬೆಂಗಳೂರು, (ಫೆಬ್ರವರಿ 25): ಐಟಿ ಅಧಿಕಾರಿಗಳ ದಾಳಿ (IT Raid) ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಬಲಿ ಪಡೆದಿದೆ. ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವಾಗಲೇ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಐಟಿ ದಾಳಿಯಿಂದ ಖಿನ್ನತೆಗೊಳಗಾಗಿ ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ (BBMP retired Chief Engineer) ಪರಮೇಶ್ವರಯ್ಯ ಅವರು ಇಂದು (ಫೆಬ್ರವರಿ 25) ಬೆಳ್ಳಂಬೆಳಗ್ಗೆ ಕೋರಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಕ್ರಮ ಆಸ್ತಿ ಸಂಬಂಧ ಸಿಸಿಬಿಯಲ್ಲಿ ದಾಖಲಾಗಿರುವ ಎಫ್​​ಐಆರ್​​​ ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಿಬಿಎಂಪಿಯ ಮಹಾದೇವಪುರ ವಲಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಮೇಶ್ವರಯ್ಯ (ಪರಮೇಶ್ವರ್), ಕೋರಮಂಗಲದಲ್ಲಿ ವಾಸವಿದ್ದರು. ಕಳೆದ 20 ದಿನಗಳ ಹಿಂದೆಯಷ್ಟೇ ಇವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ದಾಳಿಯ ನಂತರ ಪರಮೇಶ್ವರಯ್ಯ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಿಜೆ ರಾಯ್‌ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!

ಪರಮೇಶ್ವರಯ್ಯ ಮನೆ ಮೇಲೆ ಐಟಿ ದಾಳಿಯಾಗಿತ್ತು

2021ರಲ್ಲಿ ಗುತ್ತಿಗೆದಾರ ಅನಿಲ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಆ ವೇಳೆ BBMP ಗುತ್ತಿಗೆದಾರ ಅನಿಲ್ ನಿವಾಸದಲ್ಲಿ ಸೂಟ್ಕೇಸ್‌ನಲ್ಲಿ 3 ಲಾಕರ್‌ ಕೀ 1.35 ಲಕ್ಷ ನಗದು, 275.98 ಗ್ರಾಂ ಚಿನ್ನಾಭರಣ ಪತ್ತೆಯಾಗಿತ್ತು. ಅಲ್ಲದೇ ಹಲವು ಜಮೀನು, ಸೈಟ್ ದಾಖಲಾತಿ ಪತ್ತೆಯಾಗಿದ್ದವು. ಬಳಿಕ ಅನಿಲ್ ಕುಮಾರ್ ನನ್ನು ವಿಚಾರಣೆಗೊಳಪಡಿಸಿದಾಗ ಬಿಬಿಎಂಪಿ ಮಹದೇವಪುರ ವ್ಯಾಪ್ತಿಯ ಮುಖ್ಯ ಇಂಜಿನಿಯರ್ ಆಗಿದ್ದ ಪರಮೇಶ್ವರಯ್ಯ ಅವರು ಹೆಸರು ಹೇಳಿದ್ದರು. ಇದೆಲ್ಲವೂ ಪರಮೇಶ್ವರಯ್ಯಗೆ ಸೇರಿದ್ದು ಎಂದು ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ 2021ರ ಡಿಸೆಂಬರ್ 4ರಂದು ಪರಮೇಶ್ವರಯ್ಯ ಮನೆ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪರಮೇಶ್ವರಯ್ಯ ಈ ವೇಳೆ ಸೂಟ್ಕೇಸ್‌ ತನ್ನದೇ ಎಂದು ಒಪ್ಪಿಕೊಂಡಿದ್ದರು. ಬಳಿಕ 2021ರ ಡಿಸೆಂಬರ್ 6ರಂದು ಬ್ಯಾಂಕ್ ಲಾಕರ್‌ಗಳಲ್ಲಿ ಪರಿಶೀಲಿಸಿದ್ದ ಐಟಿ ಅಧಿಕಾರಿಗಳಿಗೆ 3 ಬ್ಯಾಂಕ್ ಲಾಕರ್‌ಗಳಲ್ಲಿ 86.35 ಲಕ್ಷ ರೂ. ನಗದು ಸಹ ಪತ್ತೆಯಾಗಿತ್ತು. ಲಾಕರ್ ಜಿ.ಕಿಶೋರ್ ನಾಯ್ಡು ಎಂಬುವವರ ಹೆಸರಲ್ಲಿ ಇತ್ತು. ಲಾಕರ್ ಕೀ ಪರಮೇಶ್ವರಯ್ಯ ಪತ್ನಿ ಮಹಾಲಕ್ಷ್ಮೀ ಹೆಸರಿನಲ್ಲಿತ್ತು.

ತನಿಖೆಗೆ ಹೆದರಿ ಪರಮೇಶ್ವರಯ್ಯ ಆತ್ಮಹತ್ಯೆ ಶಂಕೆ

ಇನ್ನು 2012ರಲ್ಲಿ ಪರಮೇಶ್ವರಯ್ಯ ಆಸ್ತಿ ಮೌಲ್ಯ 29.64 ಲಕ್ಷ ರೂ. ಇತ್ತು. ಆದ್ರೆ, 2021ರಲ್ಲಿ ಪರಮೇಶ್ವರಯ್ಯ ಆಸ್ತಿ ಮೌಲ್ಯ 5.85 ಕೋಟಿಗೆ ಹೆಚ್ಚಳವಾಗಿತ್ತು. ಬೆಂಗಳೂರು, ತುಮಕೂರಿನಲ್ಲಿ ನಿವೇಶನ, ಕೋರಮಂಗಲದಲ್ಲಿ ಸೈಟ್, ಮನೆ, ಅಪಾರ್ಟ್‌ಮೆಂಟ್‌ ಹೊಂದಿದ್ದರು. ನಂತರ ಐಟಿ ಅಧಿಕಾರಿಗಳ ತನಿಖೆಯಲ್ಲಿ ಪರಮೇಶ್ವರಯ್ಯ ಭ್ರಷ್ಟಾಚಾರ ಮಾಡಿರುವುದು ಪತ್ತೆಯಾಗಿತ್ತು. ಹೀಗಾಗಿ ಸಿಸಿಬಿಯಲ್ಲಿ 2026ರ ಜನವರಿ 30ರಂದು ಎಫ್ಐಆರ್ ದಾಖಲಾಗಿತ್ತು. ಇದರಿಂದ ಖಿನ್ನತೆಗೊಳಗಾಗಿ ಪರಮೇಶ್ವರಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪರಮೇಶ್ವರಯ್ಯ ಅವರ ಈ ಸಾವು ಇತ್ತೀಚೆಗಷ್ಟೇ ನಡೆದಿದ್ದ ಖ್ಯಾತ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವನ್ನು ನೆನಪಿಸುತ್ತಿದೆ. ಸಿಜೆ ರಾಯ್ ಕೂಡ IT ಅಧಿಕಾರಿಗಳು ನಡೆಸಿದ್ದ ಸತತ ದಾಳಿ ಮತ್ತು ವಿಚಾರಣೆಗೆ ಹೆದರಿ ಮಾನಸಿಕವಾಗಿ ಜರ್ಜರಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪರಮೇಶ್ವರಯ್ಯ ಅದೇ ರೀತಿ ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ ಬೇಹುಗಾರಿಕೆ ನೀಡಿದ ಮಾಹಿತಿಯಿಂದ ಬೆಚ್ಚಿಬಿದ್ದಿದ್ದರು ಆ್ಯಪಲ್ ಸಿಇಒ ಟಿಮ್ ಕುಕ್ – Kannada News | Apple CEO Tim Cook was shocked when CIA alerted on possible invasion of Taiwan by China

ವಾಷಿಂಗ್ಟನ್, ಫೆಬ್ರುವರಿ 25: ಸುಮಾರು 2 ವರ್ಷದ ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ತಯಾರಿಕೆಗೆ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. 100 ಬಿಲಿಯನ್ ಡಾಲರ್ ಎಂದರೆ ಸುಮಾರು 9 ಲಕ್ಷ ಕೋಟಿ ರೂ. ಆ್ಯಪಲ್ ಕಂಪನಿಯ ಈ ನಿರ್ಧಾರ ಸಾಧಾರಣದ್ದಾಗಿರಲಿಲ್ಲ. ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಅಂಟೇ ಬೇಡ ಎಂದು ಸುಮ್ಮನ್ನಿದ್ದ ಆ್ಯಪಲ್ ದಿಢೀರನೇ ನಿರ್ಧಾರ ಬದಲಿಸಿದ್ದ ಆಶ್ಚರ್ಯಪಡಬೇಕಾದ ಸಂಗತಿ. ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಟಿಮ್ ಕುಕ್ ಒಳಗಾಗಿರಬಹುದು ಎನ್ನುವುದಕ್ಕೆ ಆಗಿನ್ನೂ ಟ್ರಂಪ್ ಅಧ್ಯಕ್ಷರಾಗಿರಲಿಲ್ಲ. ಹಾಗಿದ್ದರೆ ಆ್ಯಪಲ್ ಕಂಪನಿಯ ಆ ನಿರ್ಧಾರಕ್ಕೆ ಏನು ಕಾರಣ? ವರದಿಗಳ ಪ್ರಕಾರ, ರಹಸ್ಯ ಸಭೆಯೊಂದರಲ್ಲಿ ಟಿಮ್ ಕುಕ್​ಗೆ ಸಿಐಎ ಹೇಳಿದ ಸಂಗತಿಯೊಂದು ಇದಕ್ಕೆ ಕಾರಣ ಎನ್ನಲಾಗಿದೆ.

ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ಮ್ಯಾನುಫ್ಯಾಕ್ಚರಿಂಗ್ ಮಾಡುವುದಾಗಿ ಘೋಷಣೆ ಮಾಡುವ ಸ್ವಲ್ಪ ಮೊದಲು, 2023ರ ಮಧ್ಯಭಾಗದಲ್ಲಿ ಕೆಲ ಪ್ರಮುಖ ಟೆಕ್ ಕಂಪನಿಗಳ ಸಿಇಒಗಳ ಜೊತೆ ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ರಹಸ್ಯ ಸಭೆ ನಡೆಸಿತ್ತು. ಆ್ಯಪಲ್ ಸಿಇಒ ಟಿಮ್ ಕುಕ್, ಎನ್​ವಿಡಿಯಾದ ಜೆನ್ಸೆನ್ ಹುವಾಂಗ್, ಎಎಂಡಿಯ ಲಿಸಾ ಸು ಅವರು ಈ ಸಭೆಯಲ್ಲಿ ಇದ್ದರು. ಕ್ವಾಲ್​ಕಾಮ್​ನ ಕ್ರಿಸ್ಟಿಯಾನೋ ಅಮೋನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಚೀನಾ 2027ರಲ್ಲಿ ತೈವಾನ್ ಅನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಸಿಐಎ ಅಧಿಕಾರಿಗಳು ಆ ಸಭೆಯಲ್ಲಿ ಬಿಚ್ಚಿಟ್ಟಿದ್ದರು.

ಇದನ್ನೂ ಓದಿ: ‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್

ಗುಪ್ತಚರರು ನೀಡಿದ ಈ ಮಾಹಿತಿಯು ಅಮೆರಿಕದ ಟೆಕ್ ಕಂಪನಿಗಳ ಜಂಘಾಬಲ ಉಡುಗುವಂತೆ ಮಾಡಿತ್ತು. ವಿಶ್ವದ ಅತಿಮೌಲ್ಯದ ಮತ್ತು ಅತಿಶಕ್ತಿಶಾಲಿ ಚಿಪ್​ಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಶೇ. 90ರಷ್ಟು ನಡೆಯುವುದು ತೈವಾನ್​ನಲ್ಲೇ. ಅದೇನಾದರೂ ಚೀನಾ ವಶವಾಗಿ ಹೋದರೆ ಚಿಪ್ ಸಪ್ಲೈ ಚೈನ್ ಬಂದ್ ಆದಂತೆಯೇ. ವಿಶ್ವದ ಟೆಕ್ ಸಾಮ್ರಾಜ್ಯದ ಅಧಿಪತಿಯಾಗಿ ಮುಂದುವರಿಯಲು ಅಮೆರಿಕಕ್ಕೆ ಸಾಧ್ಯವಾಗದೇ ಹೋಗುವ ಭಯ.

ಆ್ಯಪಲ್ ಸಿಇಒ ಟಿಮ್ ಕುಕ್ ಅಕ್ಷರಶಃ ಕಂಗಾಲಾಗಿದ್ದರು. ತೈವಾನ್​ನ ಟಿಎಸ್​ಎಂಸಿ (TSMC) ಕಂಪನಿಯು ಆ್ಯಪಲ್​ನ ಎಲ್ಲಾ ಉತ್ಪನ್ನಗಳಿಗೆ ಬೇಕಾದ ವಿಶೇಷ ವಿನ್ಯಾಸದ ಚಿಪ್​ಗಳನ್ನು ತಯಾರಿಸುತ್ತದೆ. ತೈವಾನ್ ಅನ್ನು ಚೀನಾ ಆಕ್ರಮಿಸಿಕೊಂಡರೆ ಆ್ಯಪಲ್ ಕಂಪನಿಯ ಬ್ಯುಸಿನೆಸ್ ಎಲ್ಲವೂ ಚೀನಾ ಮರ್ಜಿಗೆ ಬೀಳಬೇಕಾಗುತ್ತದೆ. ಹೀಗಾಗಿ, ಆ್ಯಪಲ್ ಕಂಪನಿ ಅಮೆರಿಕದೊಳಗೆಯೇ ಚಿಪ್ ತಯಾರಿಕೆಯ ಘಟಕಗಳನ್ನು ಸ್ಥಾಪಿಸಲು ಬಂಡವಾಳ ಹಾಕುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಮನೆಯಂಗಳಕ್ಕೆ ಹಾವುಗಳು ಬರಬಾರದೆಂದರೆ, ಈ ಗಿಡವನ್ನು ನೆಡಿ – Kannada News | To keep snakes away from your home, plant Indian Snakeroot

ಬೇಸಿಗೆ ಕಾಲದಲ್ಲಿ ಹಾವುಗಳ (snakes) ಕಾಟ ಸಿಕ್ಕಾಪಟ್ಟೆ ಇರುತ್ತದೆ. ಬಿಸಿಲಿನ ತಾಪ ತಾಳಲಾರದೆ ಬಿಲದಿಂದ ಹೊರಬರುವ ಹಾವುಗಳು ತಂಪಾದ ಸ್ಥಳಗಳನ್ನು ಹುಡುಕುತ್ತಾ ಪೊದೆ, ಮನೆಯಂಗಳದಲ್ಲಿರುವ ಮರಗಿಡಗಳ ಬಳಿ ಬರುತ್ತವೆ. ಮನೆಯೊಳಗೆ ಸಹ ಪ್ರವೇಶಿಸುತ್ತವೆ. ಕೆಲವರ ಮನೆಗಳಲ್ಲಂತೂ ಬೇಸಿಗೆಯಲ್ಲಿ ಹಾವುಗಳ ಸಮಸ್ಯೆ ತೀರಾ ಸಾಮಾನ್ಯವಾಗಿರುತ್ತವೆ. ಇದು ಕಚ್ಚಿದರೆ ಏನಪ್ಪಾ ಗತಿ ಎಂದು ಹಲವರು ಹಾವುಗಳನ್ನು ಕಂಡರೆ ಭಯಪಟ್ಟುಕೊಳ್ಳುತ್ತಾರೆ. ಅದಕ್ಕಾಗಿ ತಮ್ಮನ್ನು ತಾವು ಹಾವುಗಳಿಂದ  ರಕ್ಷಿಸಿಕೊಳ್ಳಲು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಇವುಗಳ ಜೊತೆಗೆ ಸರ್ಪಗಂಧದ ಗಿಡವನ್ನು ಮನೆ ಬಾಗಿಲಿನಲ್ಲಿ ನೆಡುವುದರಿಂದಲೂ ಹಾವುಗಳು ಮನೆ ಬಳಿ ಬಾರದಂತೆ ತಡೆಯಬಹುದು. ಈ ಒಂದು ಗಿಡ ಹಾವುಗಳು ಓಡಿಸಲು ತುಂಬಾನೇ ಪರಿಣಾಮಕಾರಿ. ಅದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಹಾವುಗಳ ಕಾಟದಿಂದ ಮುಕ್ತಿ ಪಡೆಯಲು ಸರ್ಪಗಂಧ ಸಸ್ಯ ನೆಡಿ:

ಹಾವುಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಂಗಳದಲ್ಲಿ ಸರ್ಪಗಂಧ ಗಿಡವನ್ನು ನೆಡುವುದು ತುಂಬಾನೇ ಒಳ್ಳೆಯದು.  ಅಪಾರ ಪ್ರಮಾಣದ ಔಷಧೀಯ ಗುಣಗಳನ್ನು ಹೊಂದಿರುವ ಈ ಗಿಡ ಮೆಣಸು, ಹಸಿರು ಮೆಣಸಿನಕಾಯಿ ಮಾದರಿಯ ಕಟುವಾದ ವಾಸನೆಯನ್ನು ಹೊರಸೂಸುತ್ತವೆ,  ಈ ವಾಸನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡುತ್ತದೆ. ಇದನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾವುಗಳಿಗೆ ಮಾತ್ರವಲ್ಲ ಈ ಸಸ್ಯ ಎಲ್ಲಾ ಸರೀಸೃಪಗಳ ಶತ್ರು. ಆದ್ದರಿಂದ ಹಾವುಗಳು ಬರಬಾರದೆಂದರೆ ಮನೆ ಸುತ್ತಮುತ್ತಲೂ ಸರ್ಪಗಂಧದ ಸಸ್ಯವನ್ನು ನೆಡಿ.

ಇದನ್ನೂ ಓದಿ: ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವ ತಪ್ಪನ್ನು ಮಾಡಲೇಬೇಡಿ

ಇದಲ್ಲದೆ ಸರ್ಪಗಂಧ ಸಸ್ಯದ ಬೇರುಗಳನ್ನು ಮನೆಯ ಮುಂದೆ ಇಟ್ಟರೆ ಅಥವಾ ಕಿಟಕಿ, ಬಾಗಿಲುಗಳ ಬಳಿ ಕಟ್ಟಿದರೆ, ಹಾವುಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು. ಈ ಸಸ್ಯದ ಬೇರುಗಳಿಂದ ಹೊರಹೊಮ್ಮುವ ಬಲವಾದ ವಾಸನೆಯು ಹಾವುಗಳು ಬರುವುದನ್ನು ತಡೆಯುತ್ತದೆ. ಜೊತೆಗೆ ಸರ್ಪಗಂಧದ ಬೀಜಗಳು ಸಹ ಹಾವುಗಳನ್ನು ಓಡಿಸುವಲ್ಲಿ ಪರಿಣಾಮಕಾರಿ. ಈ ಬೀಜಗಳು ಆಲ್ಕಲಾಯ್ಡ್‌ಗಳು, ರೆಸರ್ಪೈನ್, ಸರ್ಪೆಂಟೈನ್ ಮತ್ತು ಅಜ್ಮಲೈಸಿನ್ ನಂತಹ ಔಷಧೀಯ ಗುಣಗಳನ್ನು ಹಾಗೂ ಬಲವಾದ ವಾಸನೆಯನ್ನು ಹೊಂದಿದ್ದು, ಇವು ಹಾವುಗಳು ಬಾರದಂತೆ ತಡೆಯುತ್ತವೆ.

ಸರ್ಪಗಂಧ ಸಸ್ಯ ಮಾತ್ರವಲ್ಲ ಚೆಂಡುಹೂವಿನ ಗಿಡ,  ತುಳಸಿ ಗಿಡ, ಲೆಮನ್‌ ಗ್ರಾಸ್‌ ಸಸ್ಯಗಳನ್ನು ನೆಡುವ ಮೂಲಕವೂ ಹಾವುಗಳು ಮನೆ ಸುತ್ತಮುತ್ತ ಸುಳಿಯದಂತೆ ನೋಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version