Headlines

ಇನ್ನಷ್ಟು ಕುಸಿತ ಕಾಣುತ್ತಾ ಚಿನ್ನದ ದರ; ಎಲ್ಲಿಯವರೆಗೆ ಇಳಿಯಬಹುದು ಬಂಗಾರದ ಬೆಲೆ? – Kannada News | Gold rates may come down drastically to Rs 10,000, know the probable reasons for this decline

ನವದೆಹಲಿ, ಫೆಬ್ರುವರಿ 17: ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ತಿಂಗಳು (ಜನವರಿ) ಯದ್ವಾತದ್ವಾ ಏರಿಕೆ ಕಂಡಿವೆ. ಈ ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಕಡಿವಾಣವೇ ಇಲ್ಲ ಎನ್ನುವಂತೆ ನಾಗಾಲೋಟ ನಡೆದಿತ್ತು. ಈಗ ಏರಿದಷ್ಟೇ ವೇಗವಾಗಿ ಕುಸಿತವೂ ಆಗುತ್ತಿದೆ. ಬೆಲೆ ಏರಿದಷ್ಟೂ ಕಂಗಾಲಾದ ಜನಸಾಮಾನ್ಯರು, ದುಬಾರಿ ಬೆಲೆಯಲ್ಲೂ ಆಭರಣ ಖರೀದಿಸಲು ಮುಗಿಬಿದ್ದದ್ದು ವಿಪರ್ಯಾಸ ಎನಿಸಿತ್ತು. ಸದ್ಯ ಚಿನ್ನದ ಬೆಲೆ (Gold Rate) ಇಳಿಕೆ ಆಗುತ್ತಿರುವುದು ಬಹಳಷ್ಟು ಭಾರತೀಯ ಜನಸಾಮಾನ್ಯರಿಗೆ ಉಸಿರು ಸಿಕ್ಕಂತಾಗಿದೆ. ಜನವರಿ 29ರಂದು ಚಿನ್ನ ಮತ್ತು…

Read More

ಮೀನಿನ ವಾಸನೆ ತೊಡೆದು ಹಾಕಲು ಈ ಕ್ಲೀನಿಂಗ್‌ ಟಿಪ್ಸ್‌ ಫಾಲೋ ಮಾಡಿ – Kannada News | To prevent bad smell of fish, clean it using this method

ನಾನ್‌ ವೆಜ್‌ ಪ್ರಿಯರಿಗೆ ಅದರಲ್ಲೂ ಕರಾವಳಿ ಭಾಗದವರಿಗೆ ಸಮುದ್ರಾಹಾರವಾಗಿರುವ ಮೀನು (fish) ಅಂದ್ರೆ ಸಖತ್‌ ಇಷ್ಟ. ಮೀನು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಆರೋಗ್ಯಕರ. ಹೌದು ಮೀನು ಹೆಚ್ಚು ಪೌಷ್ಟಿಕಾಂಶದ ಗಣಿಯಾಗಿದ್ದು, ಇದು ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ವಿಟಮಿನ್‌ ಡಿ, ಒಮೆಗಾ-3 ಕೊಬ್ಬಿನಾಮ್ಲವಿದ್ದು ,  ಇದು ಹೃದಯದ ಆರೋಗ್ಯಕ್ಕೆ, ಸ್ಮರಣ ಶಕ್ತಿಯನ್ನು ಹೆಚ್ಚಿಸಲು, ಕೂದಲಿನ ಆರೋಗ್ಯ, ಕಣ್ಣುಗಳು ಮತ್ತು ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ.  ಅಲ್ಲದೆ ಇದಯ ಸಕ್ಕರೆ ಮತ್ತು ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಣದಲ್ಲಿಡುತ್ತದೆ,…

Read More

Video: ಕೆಲಸದ ನಡುವೆ ಬಿಡುವಿನ ಸಮಯವನ್ನು ಓದಿಗಾಗಿ ಬಳಸಿಕೊಂಡ ಮಹಿಳಾ ಬಸ್ ಕಂಡಕ್ಟರ್ – Kannada News | Woman bus conductor uses free time between work to study

ಕೆಲವರಿಗೆ ಓದಲು ಬೇಕಾದ ಎಲ್ಲಾ ಸವಲತ್ತುಗಳಿದ್ದರೂ ಆದರೆ ಓದುವ ಮನಸ್ಸಿರುವುದಿಲ್ಲ. ಇನ್ನು ಕೆಲವರು ಓದುವ ಮನಸ್ಸಿದ್ದರೂ ಸಣ್ಣ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಗೆ ಹೆಗಲು ಕೊಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಮಾತ್ಇರ ಹಾಗೆಯೇ ಇರುತ್ತದೆ ಎನ್ನುವುದಕ್ಕೆ ಈ ಮಹಿಳಾ ಬಸ್ ಕಂಡಕ್ಟರ್ (Woman bus conductor) ಸಾಕ್ಷಿ.ಕರ್ತವ್ಯದ ನಡುವೆ ಅಧ್ಯಯನದಲ್ಲಿ ನಿರತರಾಗಿದ್ದ ಮಹಿಳಾ ಬಸ್ ಕಂಡಕ್ಟರ್‌ರನ್ನು ಪ್ರಯಾಣಿಕರೊಬ್ಬರು (passenger) ಗಮನಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ತಮಗಾದ ಈ ವಿಶೇಷ ಅನುಭವವನ್ನು…

Read More

ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ದಾಖಲೆಯ ಮಟ್ಟಕ್ಕೆ ಇಳಿಕೆ; ಮುಂಬೈನಲ್ಲಿ ಪ್ರಲ್ಹಾದ್ ಜೋಶಿ ಹೇಳಿಕೆ – Kannada News | Union Minister Pralhad Joshi Addressed at the Mumbai Climate Week

ಮುಂಬೈ, ಫೆಬ್ರವರಿ 17: ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ ಕಂಡಿದೆ. 279 ರೂ. ದರದೊಂದಿಗೆ ಭಾರತ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಘೋಷಿಸಿದ್ದಾರೆ. ಮುಂಬೈಯಲ್ಲಿ ಇಂದು ಆಯೋಜಿಸಿದ್ದ “ಹವಾಮಾನ ಸಪ್ತಾಹ 2026” ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ 279 ರೂ….

Read More

ಮನೆಗಾಗಿ ಕಾಯುತ್ತಿದ್ದ ಕೋಗಿಲು ನಿವಾಸಿಗಳಿಗೆ ಬಿಗ್ ಶಾಕ್: ಸಿಡಿದೆದ್ದ ಹೋರಾಟ ಸಮಿತಿ – Kannada News | Kogilu layout Slum Residents Union Protest Warns to Government For denied New House

ಬೆಂಗಳೂರು, (ಫೆಬ್ರವರಿ 17): ಕೋಗಿಲು ಲೇಔಟ್​​ (Kogilu layout) ನಿರಾಶ್ರಿತರು ಮನೆಗಾಗಿ ಕಾಯುತ್ತಿದ್ದರು. ಆದರೆ ಇದೀಗ ಮನೆ ಸಿಗುವುದು ಡೌಟ್​​ ಎನ್ನಲಾಗುತ್ತಿದೆ. ಯಾರಿಗೂ ಮನೆ ಕೊಡಕ್ಕೆ ಆಗಲ್ಲ ಅಂತ ಸಿಎಂ ಸಿದ್ದರಾಮಯ್ಯಗೆ ಅಧಿಕಾರಿಗಳು ತಿಳಿಸಿರುವ ಬಗ್ಗೆ ಮಾಹತಿ ಲಭ್ಯವಾಗಿದೆ. ಹೀಗಾಗಿ ಮನೆಗಾಗಿ ಕಾಯುತ್ತಿರುವ ಕೋಗಿಲು ಲೇಔಟ್​​ ನಿರಾಶ್ರಿತರಿಗೆ ಆಘಾತ ಎದುರಾಗಿದೆ. ಹೀಗಾಗಿ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ. ಈ ಬಗ್ಗೆ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಸಂಚಾಲಕಿ ಗೌರಮ್ಮ…

Read More

Samudrika Shastra: ನಿಮ್ಮ ಅಂಗೈಯಲ್ಲಿ ಈ ವಿಶೇಷ ರೇಖೆ ಇದೆಯೇ? ಹಾಗಿದ್ರೆ ಹಣಕ್ಕೆಂದೂ ಕೊರತೆಯಾಗದು! – Kannada News | Palmistry and Wealth: Decode Financial Success from Your Hand Lines

ಭಾರತೀಯ ಜ್ಯೋತಿಷ್ಯ ಪರಂಪರೆಯಲ್ಲಿ “ಹಸ್ತಸಾಮುದ್ರಿಕ ಶಾಸ್ತ್ರ” ಎಂದು ಕರೆಯಲ್ಪಡುವ ಈ ವಿದ್ಯೆ, ಕೈಯಲ್ಲಿನ ರೇಖೆಗಳು ಮತ್ತು ಚಿಹ್ನೆಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಭಾಗ್ಯ ಮತ್ತು ಆರ್ಥಿಕ ಸ್ಥಿತಿಯನ್ನು ವಿವರಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿನ ಮೂರು ಮುಖ್ಯ ರೇಖೆಗಳು ಆರ್ಥಿಕ ಪ್ರಗತಿಯೊಂದಿಗೆ ಸಂಬಂಧ ಹೊಂದಿವೆ .ಸೂರ್ಯ ರೇಖೆ, ವಿಧಿ ರೇಖೆ ಮತ್ತು ಸಂಪತ್ತಿಗೆ ಸಂಬಂಧಿಸಿದ ಕೆಲವು ವಿಶೇಷ ಚಿಹ್ನೆಗಳು. ಆದರೆ ಮೊದಲು ಯಾವ ಕೈಯನ್ನು ನೋಡಬೇಕು? ಒಂದು ಮುಖ್ಯ ಪ್ರಶ್ನೆ ಮೂಡುತ್ತದೆ. ಶಾಸ್ತ್ರಗಳ ಪ್ರಕಾರ, ಬಲಗೈ…

Read More

Video: ಅಪಘಾತದಿಂದ ಯುವಕ-ಯುವತಿ ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಾರದ ಆಂಬುಲೆನ್ಸ್ – Kannada News | Vapasandra accident exposes emergency service failure public saves lives

ಚಿಕ್ಕಬಳ್ಳಾಪುರ, ಫೆ.17: ಜಿಲ್ಲೆಯ ವಾಪಸಂದ್ರ ಬಳಿ ಇಂದು (ಫೆ.17) ನಡೆದ ಭೀಕರ ರಸ್ತೆ ಅಪಘಾತವೊಂದು ತುರ್ತು ಸೇವೆಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಅಪಘಾತವಾಗಿ ಗಂಟೆ ಕಳೆದರೂ ಆಂಬುಲೆನ್ಸ್ ಮತ್ತು ಪೊಲೀಸರು ಸ್ಥಳಕ್ಕೆ ಬಂದಿಲ್ಲ. ಕೊನೆಗೆ ಸಾರ್ವಜನಿಕರೇ ಮಾನವೀಯತೆ ಮೆರೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಈಶಾ ಫೌಂಡೇಷನ್‌ನಿಂದ ಬೆಂಗಳೂರು ಕಡೆಗೆ ಕೆಎ 05 ಎಲ್‌ವಿ 9152 ಸಂಖ್ಯೆಯ ಬೈಕ್‌ನಲ್ಲಿ ಯುವಕ ಮತ್ತು ಯುವತಿ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೈಲುಗಲ್ಲಿಗೆ ವೇಗವಾಗಿ ಬಂದು ಡಿಕ್ಕಿ…

Read More

ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ – Kannada News | French President Emmanuel Macron meets PM Narendra Modi at Mumbai’s Lok Bhavan with a hug

ಮುಂಬೈ, ಫೆಬ್ರವರಿ 17: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) 3 ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಸೋಮವಾರ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಬರಮಾಡಿಕೊಂಡರು. ಇಂದು ಪ್ರಧಾನಿ ಮೋದಿ ಮುಂಬೈನ ಲೋಕ ಭವನದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದಾರೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

Bengaluru: ಬಾಡಿಗೆ ಮನೆ ಹುಡುಕಲು ಹೋದಾಗ ಕಳ್ಳತನ ನಡೆಸಿ ಸಿಕ್ಕಿಬಿದ್ದ ಫೋಟೋಗ್ರಾಫರ್​​ – Kannada News | Bengaluru Photographer Arrested for 55 Lakh Gold Theft During Rental House Search

ಬೆಂಗಳೂರು, ಫೆಬ್ರವರಿ 17: ಬಾಡಿಗೆ ಮನೆ ಹುಡುಕಲು ಹೋದ ವ್ಯಕ್ತಿಯೊಬ್ಬ 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ಕಳ್ಳತನ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್​ ಆಗಿರುವ ವೈಟ್ ಫೀಲ್ಡ್ ನಿವಾಸಿ ಕಿರಣ್​​ ಬಂಧಿತ ಆರೋಪಿಯಾಗಿದ್ದು, ಮಲೆಮಹದೇಶ್ವರನ ದರ್ಶನ ಮಾಡಿ ಹಿಂದಿರುಗಿದ್ದ ಆರೋಪಿಯನ್ನು ಪೊಲೀಸರು ಲಾಕ್​​ ಮಾಡಿದ್ದಾರೆ. ಫೋಟೋ ಸ್ಟುಡಿಯೋ ನಡೆಸುತ್ತಿದ್ದ ಕಿರಣ್​, ಕೋವಿಡ್​​ ವೇಳೆ ನಷ್ಟ ಉಂಟಾದ ಕಾರಣ ಅದನ್ನು ಮುಚ್ಚಿದ್ದ. ಕ್ಯಾಮರಾ ಇದ್ದ ಕಾರಣ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಂಬಿ…

Read More

ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ – Kannada News | Prathyusha death case: Court verdict after 23 years

‘ಸ್ನೇಹಮಂಟೆ ಇದೆರ’, ‘ರಾಯುಡು’, ‘ಕಲಸುಕೋವಾಲನಿ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ (Cinema) ಆಗಿನ ಸ್ಟಾರ್ ನಟರುಗಳ ಜೊತೆಗೆ ನಾಯಕಿಯಾಗಿ ನಟಿಸಿದ್ದ ನಟಿ ಪ್ರತ್ಯುಷ, ಸ್ಟಾರ್ ನಟಿಯಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ 2002ರ ಫೆಬ್ರವರಿ 22 ರಂದು ನಟಿ ಅನುಮಾನಾಸ್ಪದವಾಗಿ ನಿಧನ ಹೊಂದಿದರು. ಅವರ ಸಾವು ಆಗ ಅವಿಭಜಿತ ಆಂಧ್ರ ಪ್ರದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ 24 ವರ್ಷಗಳ ಬಳಿಕ ನಟಿಯ ಸಾವಿನ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಪ್ರತ್ಯುಷ ಸಾವಿನ ಪ್ರಕರಣದಲ್ಲಿ ನಟಿಯ ಗೆಳೆಯನಾಗಿದ್ದ ಸಿದ್ಧಾರ್ಥ್ ರೆಡ್ಡಿ…

Read More