All posts by nagaraj11081993

ಹವಾಮಾನ ವರದಿ: ವಾರಾಂತ್ಯಕ್ಕೆ ಬೆಂಗಳೂರಲ್ಲಿ ವರುಣನ ಅಬ್ಬರ, ಮೇ 17ರ ವರೆಗೆ ರಾಜ್ಯದ ವಿವಿಧೆಡೆ ಮಳೆ – Kannada News | Karnataka Weather Update: Heavy Rainfall Likely in Bengaluru May 15–17

ಮಡಿಕೇರಿಯಲ್ಲಿ ಸುರಿದ ಮಳೆImage Credit source: Tv9 Kannada

ಬೆಂಗಳೂರು, ಮೇ 14: ಈ ವಾರಾಂತ್ಯದಲ್ಲಿ ಮುಂಗಾರು ಪೂರ್ವ ಮಳೆಯ ಚಟುವಟಿಕೆ ಬೆಂಗಳೂರಲ್ಲಿ (Bengaluru) ಹೆಚ್ಚುವ ಸಾಧ್ಯತೆ ಇದ್ದು, ಮೇ 15ರಿಂದ 17ರವರೆಗೆ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಕಳೆದ ಸುಮಾರು ಒಂದು ವಾರದದಿಂದ ಬಿಸಿಲಿನ ಬೇಗೆಗೆ ತತ್ತರಿಸಿರುವ ನಗರದ ಜನತೆಗೆ ವರುಣ ತಂಪೆರೆಯಲಿದ್ದಾನೆ ಎಂದು ಹವಾಮಾನ ವೀಕ್ಷಣಾ ಕೇಂದ್ರಗಳು ಮಾಹಿತಿ ನೀಡಿವೆ.

ಮುಖ್ಯಾಂಶಗಳು

  • ವಾರಾಂತ್ಯದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆ ಹೆಚ್ಚಳ
  • ಮೇ 15ರಿಂದ 17ರವರೆಗೆ ಬೆಂಗಳೂರಿನಲ್ಲಿ ಮಳೆಯ ಸಾಧ್ಯತೆ
  • ರಾಜ್ಯದ ಹಲವೆಡೆ ಮಳೆ ಸಾಧ್ಯತೆ ಎಂದ ಹವಾಮಾನ ಇಲಾಖೆ

ಏಪ್ರಿಲ್ 30ರಂದು ಬೆಂಗಳೂರಿನಲ್ಲಿ ಸುಮಾರು 111 ಮಿ.ಮೀ ಮಳೆಯಾಗಿತ್ತು. ಇದರಿಂದ ನಗರದ ಹಲವೆಡೆ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿತ್ತು. ಆದರೆ ಬಳಿಕ ಮಳೆಯ ಚಟುವಟಿಕೆ ಗಣನೀಯವಾಗಿ ಕುಂಠಿತಗೊಂಡಿತ್ತು. ಮಾಹಿತಿ ಪ್ರಕಾರ, ಮೇ ಮೊದಲ 13 ದಿನಗಳಲ್ಲಿ ಬೆಂಗಳೂರು ನಗರ ವೀಕ್ಷಣಾಲಯದಲ್ಲಿ ಕೇವಲ 31 ಮಿ.ಮೀ ಮಳೆಯಾಗಿದ್ದು, HAL ವೀಕ್ಷಣಾಲಯದಲ್ಲಿ ಮಾಸಿಕ ಸರಾಸರಿ ಕೇವಲ 8.2 ಮಿ.ಮೀ ಮಳೆಯಾಗಿದೆ. ಮಳೆಯ ಕೊರತೆಯ ಕಾರಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನ ಮತ್ತೆ ಏರಿಕೆಯಾಗಿದೆ. ಈ ನಡುವೆ ಹವಾಮಾನ ಇಲಾಖೆ ಉತ್ತಮ ಮಳೆಯ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಬೆಳಗಾವಿ, ಚಿಕ್ಕಮಗಳೂರು ಸೇರಿ ಕರ್ನಾಟಕದ ಹಲವೆಡೆ ಭಾರಿ ಮಳೆ; ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ

ರಾಜ್ಯದ ಹಲವೆಡೆಯೂ ಮಳೆಯ ಎಚ್ಚರಿಕೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಕೂಡ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಿದೆ. ಮೇ 16ರವರೆಗೆ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕರಾವಳಿ ಕರ್ನಾಟಕದಲ್ಲಿಯೂ ಮೇ 17ರವರೆಗೆ ಮಿಂಚು-ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:32 pm, Thu, 14 May 26

Source link

ಸ್ಮಾರ್ಟ್ ವಾಚ್ ನಂಬಿ ಎದೆ ನೋವು ನಿರ್ಲಕ್ಷ್ಯ ಮಾಡಿದ್ರಾ ನಟ ದಿಲೀಪ್ ರಾಜ್? – Kannada News | Dileep Raj reportedly ignored Chest Pain after Heart Rate shows normal in Smartwatch

ನಟ ದಿಲೀಪ್ ರಾಜ್ (Dileep Raj) ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಹಾಗಿದ್ದರೂ ಕೂಡ ಅವರು ಹೃದಯಾಘಾತದಿಂದ ನಿಧನರಾದರು. ಮೇ 13ರಂದು ದಿಲೀಪ್ ರಾಜ್ ಅವರ ಮರಣದ ಸುದ್ದಿ ಕೇಳಿ ಎಲ್ಲರಿಗೂ ಆಘಾತ ಆಯಿತು. ಫಿಟ್ ಆಗಿದ್ದ ಅವರು 47ನೇ ವಯಸ್ಸಿಗೆ ಕೊನೆಯುಸಿರು ಎಳೆದಿದ್ದು ನೋವಿನ ಸಂಗತಿ. ಮೇ 12ರ ರಾತ್ರಿಯೇ ದಿಲೀಪ್ ರಾಜ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಸ್ಮಾರ್ಟ್ ವಾಚ್ (Smartwatch) ನಂಬಿ ಅವರು ತಪ್ಪು ಮಾಡಿದರು ಎನ್ನಲಾಗಿದೆ.

ಎದೆ ನೋವು ಕಾಣಿಸಿಕೊಂಡಿದ್ದರಿಂದ ತಮ್ಮ ಹೃದಯಬಡಿತ ಹೇಗಿದೆ ಎಂಬುದನ್ನು ಸ್ಮಾರ್ಟ್ ವಾಚ್ ಮೂಲಕ ದಿಲೀಪ್ ರಾಜ್ ಅವರು ನೋಡಿಕೊಂಡಿದ್ದರು. ಅದರಲ್ಲಿ ಎಲ್ಲವೂ ನಾರ್ಮಲ್ ಎಂದು ತೋರಿಸಿದ್ದರಿಂದ ಅವರು ಸುಮ್ಮನಾಗಿದ್ದಾರೆ. ಮೇ 13ರ ಬೆಳಗ್ಗೆ ವೈದ್ಯರ ಅಪಾಯಿಂಟ್​ಮೆಂಟ್ ತೆಗೆದುಕೊಂಡಿದ್ದರು. ಆದರೆ ಚೆಕಪ್ ಮಾಡಿಸುವುದರೊಳಗೆ ಅವರಿಗೆ ತೀವ್ರ ಹೃದಯಾಘಾತ ಆಯಿತು.

ದಿಲೀಪ್ ರಾಜ್ ಅವರು ಹಾರ್ಟ್ ಬೀಟ್ ಸರಿಯಾಗಿದೆ ಎಂದು ಸ್ಮಾರ್ಟ್ ವಾಚ್ ತೋರಿಸಿದ್ದನ್ನು ನಂಬಿಕೊಂಡು ಸುಮ್ಮನಾಗುವ ಬದಲು, ರಾತ್ರಿಯೇ ವೈದ್ಯರ ಬಳಿ ಹೋಗಿದ್ದರೆ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತಿತ್ತು. ಆದರೆ ಅವರು ನಿರ್ಲಕ್ಷ್ಯ ಮಾಡಿದರು. ಅದು ಅವರ ಪ್ರಾಣಕ್ಕೆ ಮುಳುವಾಯಿತು. ದಿಲೀಪ್ ರಾಜ್ ಅಗಲಿಕೆಯಿಂದ ಅವರ ಕುಟುಂಬಕ್ಕೆ ತೀವ್ರ ನೋವಾಗಿದೆ.

ಆರೋಗ್ಯದ ಕಾಳಜಿ ಇರುವ ಅನೇಕರು ಸ್ಮಾರ್ಟ್ ವಾಚ್ ಬಳಸುತ್ತಾರೆ. ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕ ಮಟ್ಟ, ನಿದ್ರೆಯ ಅವಧಿ, ದೈಹಿಕ ಚುಟುವಟಿಕೆಗಳ ಲೆಕ್ಕ, ದೇಹದ ಉಷ್ಣಾಂಶ ಸೇರಿದಂತೆ ಹಲವು ಬಗೆಯ ಮಾಹಿತಿಯನ್ನು ಸ್ಮಾರ್ಟ್ ವಾಚ್​ಗಳು ನೀಡುತ್ತವೆ. ಆದರೆ ಅವುಗಳು ತೋರಿಸುವ ಮಾಹಿತಿಯನ್ನು ಎಷ್ಟರಮಟ್ಟಿಗೆ ನಂಬಬೇಕು ಎಂಬ ಚರ್ಚೆ ಈಗ ಜೋರಾಗಿದೆ.

ಇದನ್ನೂ ಓದಿ: ‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್

ಕಿರುತೆರೆ ಮತ್ತು ಸಿನಿಮಾಗಳಲ್ಲಿ ದಿಲೀಪ್ ರಾಜ್ ಅವರು ಫೇಮಸ್ ಆಗಿದ್ದರು. ನಟನೆ ಮಾತ್ರವಲ್ಲದೇ ಡಬ್ಬಿಂಗ್ ಕಲಾವಿದನಾಗಿ, ಧಾರಾವಾಹಿ ನಿರ್ಮಾಪಕನಾಗಿ ಅವರು ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂಬ ಅಪಾರ ಕನಸು ಕಟ್ಟಿಕೊಂಡಿದ್ದ ಅವರು ಈಗ ಬಾರದ ಲೋಕಕ್ಕೆ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಮಾದರಿಯಲ್ಲಿ ಬಾಂಡ್ ವಿತರಕರ ಜಾಲ ಬೆಳೆಸಲು ಸೆಬಿ ಸಜ್ಜು – Kannada News | SEBI Plans Bond Distributor Model to Boost Retail Investment in Debt Market

ಮುಂಬೈ, ಮೇ 14: ಷೇರು ಮಾರುಕಟ್ಟೆಯಂತೆ ಬಾಂಡ್ (ಸಾಲಪತ್ರ) ಮಾರುಕಟ್ಟೆಯಲ್ಲೂ ಸಾಮಾನ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡುವಂತೆ ಉತ್ತೇಜಿಸಲು ಸೆಕ್ಯೂರಿಟೀಸ್ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಮಹತ್ವದ ಕ್ರಮಕ್ಕೆ ಮುಂದಾಗಿದೆ. ಮ್ಯೂಚುವಲ್ ಫಂಡ್ ವಿತರಕರ ಮಾದರಿಯಲ್ಲೇ ‘ಬಾಂಡ್ ವಿತರಕರಿಗಾಗಿ’ (Bond Distributors) ಪ್ರತ್ಯೇಕ ವಿಭಾಗವೊಂದನ್ನು ಸೃಷ್ಟಿಸಲು ಸೆಬಿ ಯೋಜಿಸುತ್ತಿದೆ.

ಮುಂಬೈನಲ್ಲಿ ನಡೆದ ಎಫ್​ಐಸಿಸಿಐ (FICCI) ಹಣಕಾಸು ಉತ್ಪನ್ನಗಳ ವಿತರಣಾ ಶೃಂಗಸಭೆಯಲ್ಲಿ ಮಾತನಾಡಿದ ಸೆಬಿಯ ಪೂರ್ಣಾವಧಿ ಸದಸ್ಯ ಅಮರ್ಜೀತ್ ಸಿಂಗ್, ಈ ಕುರಿತು ಮಾಹಿತಿ ನೀಡಿದರು. ಆ ಪ್ರಕಾರ, ಮ್ಯೂಚುವಲ್ ಫಂಡ್ ವಿತರಕರಂತೆಯೇ, ಈ ಹೊಸ ಬಾಂಡ್ ವಿತರಕರು ಕೂಡ ಸಾಮಾನ್ಯ ಹೂಡಿಕೆದಾರರಿಗೆ ಕೆವೈಸಿ (KYC) ಪ್ರಕ್ರಿಯೆ, ದಾಖಲಾತಿ ಮತ್ತು ವ್ಯವಹಾರಗಳನ್ನು ನಡೆಸಲು ಸಹಾಯ ಮಾಡಲಿದ್ದಾರೆ.

ಪ್ರಸ್ತುತ ಡೆಟ್ ಮಾರ್ಕೆಟ್ ಅಥವಾ ಸಾಲಪತ್ರಗಳ ಮಾರುಕಟ್ಟೆಯಲ್ಲಿ ಸಾಂಸ್ಥಿಕ ಹೂಡಿಕೆದಾರರದ್ದೇ ಮೇಲುಗೈ ಇದೆ. ಸಾಮಾನ್ಯ ಜನರಿಗೆ ಈ ಮಾರುಕಟ್ಟೆಯನ್ನು ತಲುಪುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ.

ಇದನ್ನೂ ಓದಿ: ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ

ಇತ್ತೀಚಿನ ವರ್ಷಗಳಲ್ಲಿ ಡೆಟ್ ಆಧಾರಿತ ಮ್ಯೂಚುವಲ್ ಫಂಡ್‌ಗಳ ಮೇಲಿನ ತೆರಿಗೆ ನಿಯಮಗಳು ಬದಲಾಗಿರುವುದರಿಂದ, ಚಿಲ್ಲರೆ ಹೂಡಿಕೆದಾರರು ಈ ಕಡೆಗೆ ಬರಲು ಹಿಂಜರಿಯುತ್ತಿದ್ದಾರೆ. ಇದನ್ನು ಸರಿಪಡಿಸಲು ಸುಲಭ ಹೂಡಿಕೆ ಮಾರ್ಗಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ ಎಂದು ಅಮರ್ಜೀತ್ ಸಿಂಗ್ ವಿವರಿಸಿದರು.

ವಿತರಕರ ಪಾತ್ರದ ಬಗ್ಗೆ ಎಚ್ಚರಿಕೆ

ವಿತರಕರ ಸಂಖ್ಯೆ ಹೆಚ್ಚಾದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಪ್ಪು ಮಾಹಿತಿ ಹರಡುವ ಸಾಧ್ಯತೆಯ ಬಗ್ಗೆಯೂ ಅಮರ್ಜೀತ್ ಸಿಂಗ್ ಎಚ್ಚರಿಸಿದ್ದಾರೆ. “ಮಾರುಕಟ್ಟೆಯಲ್ಲಿನ ಹೂಡಿಕೆಯು ಸಾಮಾಜಿಕ ಮಾಧ್ಯಮಗಳ ಟ್ರೆಂಡ್ ಅಥವಾ ಪ್ರಭಾವದಿಂದ ನಡೆಯಬಾರದು. ಬದಲಿಗೆ ಸರಿಯಾದ ಮಾಹಿತಿ ಮತ್ತು ದೀರ್ಘಕಾಲದ ಯೋಜನೆಯ ಆಧಾರದ ಮೇಲೆ ನಡೆಯಬೇಕು” ಎಂದು ಅವರು ತಿಳಿಸಿದರು.

ಅಲ್ಲದೆ, ಹಣಕಾಸು ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯ ಬಗ್ಗೆಯೂ ಅವರು ಮಾತನಾಡಿದ್ದು, ಕಂಪನಿಗಳು ತಮ್ಮ ತಾಂತ್ರಿಕ ಸಾಮರ್ಥ್ಯವನ್ನು ಅತಿಶಯೋಕ್ತಿಯಾಗಿ ಬಿಂಬಿಸಬಾರದು (AI Washing) ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ?

ಮಾರುಕಟ್ಟೆ ಚಿತ್ರಣ ಹೇಗಿದೆ?

ಮಾರ್ಚ್ 2026ರ ವೇಳೆಗೆ ಭಾರತದ ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟು ಆಸ್ತಿ ಮೌಲ್ಯ 91 ಟ್ರಿಲಿಯನ್ ರೂಪಾಯಿ ತಲುಪಿದೆ. ಅಂದರೆ ಇದರಲ್ಲಿ ಮಾಡಲಾಗಿರುವ ಹೂಡಿಕೆಯ ಮೊತ್ತ ಇಷ್ಟಿದೆ. ಇದರಲ್ಲಿ ಶೇ. 54ರಷ್ಟು ಹೂಡಿಕೆಗಳು ವಿತರಕರ ಮೂಲಕವೇ ನಡೆಯುತ್ತಿವೆ. ಈಗ ಇದೇ ಯಶಸ್ಸನ್ನು ಬಾಂಡ್ ಮಾರುಕಟ್ಟೆಯಲ್ಲೂ ಮರುಕಳಿಸಲು ಸೆಬಿ ಸನ್ನದ್ಧವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಮುದ್ರದ ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ಪಾಲಿಗೆ ದೇವರಾದ ಕ್ರಿಕೆಟ್​​ ಆಡುತ್ತಿದ್ದ ಯುವಕರು – Kannada News | Karwar Youths Heroically Rescue Two Drowning Tourists at Rabindranath Tagore Beach

ಕಾರವಾರ, ಮೇ 14: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ಈಜಲೆಂದು ಸಮುದ್ರಕ್ಕೆ ಇಳಿದಿದ್ದ ಇಬ್ಬರು ಪ್ರವಾಸಿಗರು, ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಲ್ಲಿ ಮುಳುಗಲು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ, ಕಡಲತೀರದಲ್ಲಿ ಕ್ರಿಕೆಟ್ ಆಡುತ್ತಿದ್ದ ಐವರು ಯುವಕರು ಪ್ರವಾಸಿಗರು ಮುಳುಗುತ್ತಿರುವುದನ್ನು ಗಮನಿಸಿ ತಕ್ಷಣ ಅವರ ಸಹಾಯಕ್ಕೆ ಧಾವಿಸಿದ್ದಾರೆ. ಗೌತಮ್ ಬಾನಾವಳಿ, ಸಾಯಿನಾಥ್, ವಿಘ್ನೇಶ್, ಅಮನ್ ಮತ್ತು ಅಜಯ್ ಎಂಬ ಯುವಕರು ಅಪಾಯದಲ್ಲಿದ್ದ ಪ್ರವಾಸಿಗರನ್ನು ಸುರಕ್ಷಿತವಾಗಿ ನೀರಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | 3 people dead over 25 injured in Madhya Pradesh Dewas firecracker factory blast

ನವದೆಹಲಿ, ಮೇ 14: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭಾರೀ ಸ್ಫೋಟ (Blast) ಸಂಭವಿಸಿದೆ. ದೇವಾಸ್‌ನ ಟೋಂಕ್ ಕಲಾನ್ ಪ್ರದೇಶದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಉಂಟಾದ ಸ್ಫೋಟದಲ್ಲಿ ಧೀರಜ್, ಸನ್ನಿ ಮತ್ತು ಸುಮಿತ್ ಎಂಬ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ, ಇತರ 25 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 13 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಸ್ಫೋಟದ ಪರಿಣಾಮದಿಂದ ದೇಹದ ಭಾಗಗಳು 20-25 ಅಡಿ ದೂರದಲ್ಲಿ ಹಾರಿಬಿದ್ದಿವೆ. ಇದರಿಂದ ಅನೇಕ ಕಾರ್ಮಿಕರಿಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಪಟಾಕಿ ಕಾರ್ಖಾನೆಯಲ್ಲಿ 200ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ಸಮಯದಲ್ಲಿ 15-25 ಕಾರ್ಮಿಕರು ಘಟಕದೊಳಗೆ ಇದ್ದರು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮಗೆ ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಸರ್ಕಾರದ ವಿರುದ್ಧ ಪ್ರಲ್ಹಾದ್​ ಜೋಶಿ ಕಿಡಿ

ಬೆಂಗಳೂರು, ಮೇ 14: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್​​ಗೆ ಮತ್ತೆ ಅವಕಾಶ ನೀಡಿರುವುದಕ್ಕೆ ಬಿಜೆಪಿ ಕೆರಳಿ ಕೆಂಡವಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನ ತೀವ್ರವಾಗಿ ಖಂಡಿಸಿದೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್​​​​​ ಜೋಶಿ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನಿಮಗೆ ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ತುಷ್ಠಿಕರಣದ ರಾಜಕಾರಣ ಮಾಡಿರುವವರನ್ನು ಜನರು ಮನೆಗೆ ಕಳುಹಿಸಿದ್ದಾರೆ ಎಂದರು. ದೇಶದಲ್ಲಿ ಈಗಲೂ ಶೇಕಡಾ 80ರಷ್ಟು ಹಿಂದೂಗಳಿದ್ದಾರೆ. ಓಲೈಕೆ ರಾಜಕಾರಣದಿಂದ TMC, DMK ಮನೆಗೆ ಹೋಗಿವೆ. ಕಾಂಗ್ರೆಸ್ ಸ್ಥಿತಿ ಈಗ ಹೇಗಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಹಿಜಾಬ್ ಧರಿಸುವ ಬಗ್ಗೆ ಪ್ರಕರಣ ಕೋರ್ಟ್​ನಲ್ಲಿದೆ. ಕೂಡಲೇ ನಿಮ್ಮ ಆದೇಶ ಹಿಂಪಡೆಯಿರಿ ಎಂದು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು, ಎದುರಾದ ಆತಂಕವೇನು?

ಬೆಂಗಳೂರು, (ಮೇ 14): ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ದಟ್ಟವಾಗಿದೆ. ಚುನಾವಣೆ ಮುಂದೂಡಿಕೆಗೆ ಸಕಾರಣಗಳೊಂದಿಗೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಇದರ ನಡುವೆ ಇದೀಗ ಕರ್ನಾಟಕದಲ್ಲೂ ಸಹ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ ದಿನಾಂಕ ನಿಗದಿಯಾಗಿದೆ. ಹೀಗಾಗಿ ಜಿಬಿಎ ಚುನಾವಣೆಗೆ ಎಸ್​ಐಆರ್​ ಅಡ್ಡಿಯಾಗುವ ಆತಂಕ ಎದುರಾಗಿದೆ.

SIR ಪ್ರಕ್ರಿಯೆಗೆ ಹೆಚ್ಚಿನ ಆಡಳಿತ ಸಿಬ್ಬಂದಿ, ಅಧಿಕಾರಿಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ಜಿಬಿಎ ಚುನಾವಣೆಗೆ ಸಿಬ್ಬಂದಿ ವರ್ಗದ ಕೊರತೆ ಎದುರಾಗುವ ಸಾಧ್ಯೆಗಳಿವೆ. ಈ ಹಿನ್ನೆಲೆಯಲ್ಲಿ ಜಿಬಿಎ ಚುನಾವಣೆ ಮುಂದೂಡಿಕೆಗೆ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದಿಂದಲೇ ಕೋರ್ಟ್​ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: Karnataka SIR: ಕರ್ನಾಟಕದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಎಂದಿನಿಂದ? ಹೇಗೆಲ್ಲಾ ನಡೆಯುತ್ತೆ? ಇಲ್ಲಿದೆ ವಿವರ

Source link

ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ – Kannada News | India to Secure Critical Minerals: Russia Partnership for Lithium & Rare Earths Supply

ನವದೆಹಲಿ, ಮೇ 14: ಭಾರತ ಮತ್ತು ರಷ್ಯಾ ದೇಶಗಳು ‘ಪ್ರಮುಖ ಖನಿಜಗಳ’ (Critical Minerals) ಪೂರೈಕೆ ಮತ್ತು ತಂತ್ರಜ್ಞಾನ ಹಂಚಿಕೆಗೆ ಸಂಬಂಧಿಸಿದಂತೆ ಮಹತ್ವದ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿವೆ. ಇಂಧನ ಪರಿವರ್ತನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯಗತ್ಯವಾಗಿರುವ ಲಿಥಿಯಂ ಮತ್ತು ಅಪರೂಪದ ಭೂ ಖನಿಜಗಳ (Rare Earth Elements) ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಅಂತಿಮ ಹಂತಗಳ ಮಾತುಕತೆಯಲ್ಲಿರುವ ಈ ಒಪ್ಪಂದವು ಕೇವಲ ಖನಿಜಗಳ ಖರೀದಿಗಷ್ಟೇ ಸೀಮಿತವಾಗಿರದೆ, ಖನಿಜಗಳ ಅನ್ವೇಷಣೆ, ಹೊರತೆಗೆಯುವಿಕೆ ಮತ್ತು ಸುಧಾರಿತ ಸಂಸ್ಕರಣಾ ತಂತ್ರಜ್ಞಾನದಲ್ಲಿ ಸಹಯೋಗವನ್ನು ಒಳಗೊಂಡಿದೆ.

ಲಿಥಿಯಂ ಮತ್ತು ರೇರ್ ಅರ್ಥ್ ವಸ್ತುಳ ಮಹತ್ವ

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಲಿಥಿಯಂ ಬೇಕು. ಯುದ್ಧೋಪಕರಣಗಳು ಹಾಗೂ ಎಲೆಕ್ಟ್ರಾನಿಕ್ಸ್, ಸೋಲಾರ್ ಕ್ಷೇತ್ರಕ್ಕೆ ವಿರಳ ಖನಿಜಗಳು ಅಗತ್ಯ ಇದೆ. ಈ ವಸ್ತುಗಳ ಪೂರೈಕೆ ಪಡೆಯಲು ಭಾರತ ಈ ಒಪ್ಪಂದದ ಮೂಲಕ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ?

ಭಾರತ ಮತ್ತು ಚೀನಾ, ಉಭಯ ದೇಶಗಳ ಸರ್ಕಾರಗಳು ಖಾಸಗಿ ಮತ್ತು ಸಾರ್ವಜನಿಕ ವಲಯದ ಕಂಪನಿಗಳು ಪರಸ್ಪರರ ಗಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹ ನೀಡಲಿವೆ. ಈಗಾಗಲೇ ಭಾರತವು ಒಪ್ಪಂದದ ಕರಡು ಪ್ರತಿಯನ್ನು ರಷ್ಯಾಕ್ಕೆ ಹಂಚಿಕೊಂಡಿದ್ದು, ಮುಂದಿನ ಎರಡು ತಿಂಗಳೊಳಗೆ ಅಧಿಕೃತವಾಗಿ ಸಹಿ ಬೀಳುವ ನಿರೀಕ್ಷೆಯಿದೆ.

ಚೀನಾ ಮೇಲಿನ ಅವಲಂಬನೆ ತಗ್ಗಿಸುವ ಗುರಿ

ಜಾಗತಿಕವಾಗಿ ಪ್ರಮುಖ ಖನಿಜಗಳ ಪೂರೈಕೆ ಮತ್ತು ಸಂಸ್ಕರಣೆಯಲ್ಲಿ ಚೀನಾ ಪ್ರಸ್ತುತ ಪ್ರಾಬಲ್ಯ ಸಾಧಿಸಿದೆ. ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಕಾರ್ಯತಂತ್ರದ ಹೆಜ್ಜೆ ಇರಿಸಿದೆ. ಈಗಾಗಲೇ ಅರ್ಜೆಂಟೀನಾ, ಆಸ್ಟ್ರೇಲಿಯಾ ಮತ್ತು ಜಪಾನ್‌ನೊಂದಿಗೆ ಭಾರತ ಇಂತಹ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಈಗ ರಷ್ಯಾ ಈ ಪಟ್ಟಿಗೆ ಸೇರುತ್ತಿದೆ.

ರಷ್ಯಾದಲ್ಲಿನ ಖನಿಜ ಸಂಪತ್ತು ಮತ್ತು ಭಾರತದ ಆಸಕ್ತಿ

ರಷ್ಯಾವು ವಿಶ್ವದ ಅತಿದೊಡ್ಡ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ರಷ್ಯಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ಪ್ರಕಾರ, ಅಲ್ಲಿ ಸುಮಾರು 2.85 ಕೋಟಿ ಮೆಟ್ರಿಕ್ ಟನ್ ಅಪರೂಪದ ಖನಿಜಗಳ ನಿಕ್ಷೇಪವಿದೆ. ರಷ್ಯಾದ ಸರ್ಕಾರಿ ಸ್ವಾಮ್ಯದ ಪರಮಾಣು ಸಂಸ್ಥೆ ‘ರೋಸಾಟಮ್’ (Rosatom) ಜೊತೆಗೆ ತಂತ್ರಜ್ಞಾನ ಸಹಯೋಗ ಪಡೆಯಲು ಭಾರತ ಉತ್ಸುಕವಾಗಿದೆ.

ಇದನ್ನೂ ಓದಿ: ಇಂಧನ ಕಡಿಮೆ ಬಳಸಿ ಎನ್ನುತ್ತಿರೋದು ಮೋದಿ ಮಾತ್ರವಲ್ಲ, ವಿವಿಧ ದೇಶಗಳು ಜಾರಿಗೊಳಿಸಿರುವ ಸಂಗತಿಗಳೇ

2023 ರಲ್ಲಿ ಭಾರತ ಸರ್ಕಾರವು ಲಿಥಿಯಂ ಸೇರಿದಂತೆ 20 ಕ್ಕೂ ಹೆಚ್ಚು ಖನಿಜಗಳನ್ನು ದೇಶದ ಆರ್ಥಿಕ ಭದ್ರತೆ ಮತ್ತು ಇಂಧನ ಪರಿವರ್ತನೆಗೆ ‘ಅತ್ಯಗತ್ಯ’ ಎಂದು ಗುರುತಿಸಿತ್ತು. ಮಾಲಿ (Mali) ದೇಶದಲ್ಲಿ ರಷ್ಯಾದ ಕಂಪನಿ ಕೈಗೊಂಡಿದ್ದ ಲಿಥಿಯಂ ಯೋಜನೆಯಿಂದ ಹಿಂದೆ ಸರಿದಿದ್ದ ಭಾರತ, ಈಗ ರಷ್ಯಾ ಜೊತೆಗಿನ ಈ ನೇರ ಒಪ್ಪಂದದ ಮೂಲಕ ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಡುಗಡೆ ಆಗಲಿಲ್ಲ ‘ಕರುಪ್ಪು’ ಸಿನಿಮಾ, ಕಣ್ಣೀರು ಹಾಕಿದ ನಿರ್ದೇಶಕ ಬಾಲಾಜಿ – Kannada News | Suriya’s Karuppu movie release cancel director cried and asked apology

ಸೂರ್ಯ (Suriya), ತ್ರಿಷಾ ಕೃಷ್ಣನ್ (Trisha Krishnan) ನಟನೆಯ ಬಹುನಿರೀಕ್ಷಿತ ‘ಕರುಪ್ಪು’ ಸಿನಿಮಾ ಇಂದು (ಮೇ 14) ಬಿಡುಗಡೆ ಆಗಬೇಕಿತ್ತು. ಸೂರ್ಯ ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡಲು ಕಾದಿದ್ದರು, ಆದರೆ ಸಿನಿಮಾ ಬಿಡುಗಡೆ ಆಗಲಿಲ್ಲ. ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಸಿನಿಮಾ ಬಿಡುಗಡೆ ವಿಳಂಬ ಆಗಿದೆ. ಚಿತ್ರತಂಡವು ಬೆಳಿಗ್ಗೆ 9 ಗಂಟೆಯ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿತ್ತು. ಮತ್ತು ಉಳಿದ ಪ್ರದರ್ಶನಗಳು ನಿಗದಿತ ಸಮಯಕ್ಕೆ ನಡೆಯಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಳಿಕ ಮಧ್ಯಾಹ್ನದ ಪ್ರದರ್ಶನಗಳು ಕೂಡ ರದ್ದಾದವು. ಇದು ಅಭಿಮಾನಿಗಳನ್ನು ಕೆರಳಿಸಿತು, ಚಿತ್ರತಂಡದ ವಿರುದ್ಧ ಟೀಕೆ ಸಹ ವ್ಯಕ್ತವಾಯ್ತು. ಇದೀಗ ಸಿನಿಮಾದ ನಿರ್ದೇಶಕ ಆರ್​​ಜೆ ಬಾಲಾಜಿ ಸಿನಿಮಾ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ ಜೊತೆಗೆ ಕಣ್ಣೀರು ಹಾಕಿದ್ದಾರೆ.

ಆರ್​​ಜೆ ಬಾಲಾಜಿ, ಕಾರಿನಲ್ಲಿ ಕುಳಿತು ವಿಡಿಯೋ ಒಂದನ್ನು ಮಾಡಿದ್ದಾರೆ, ವಿಡಿಯೋನಲ್ಲಿ ಮಾತನಾಡುತ್ತಾ, ‘ನಾನು ನನ್ನ ಕಾರಿನಿಂದ ನಿಮಗೆ ಮತ್ತೊಂದು ಅಪ್‌ಡೇಟ್ ನೀಡುತ್ತಿದ್ದೇನೆ. ಇದು ಕೊನೆಯ ಅಪ್‌ಡೇಟ್ ಆಗಿರಲಿ ಎಂದು ಆಶಿಸುತ್ತೇನೆ. ಎಲ್ಲಾ ಅಭಿಮಾನಿಗಳಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಹೀಗಾಗಬಾರದಿತ್ತು. ತಮಿಳುನಾಡು, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಸಿನಿಮಾ ನೋಡಲು ನೀವು ದೂರದ ಊರುಗಳಿಂದ ಚಿತ್ರಮಂದಿರಗಳಿಗೆ ಬಂದಿರುತ್ತೀರಿ. ಇದು ನಡೆಯಬಾರದಿತ್ತು, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.

ಮಾತು ಮುಂದುವರಿಸುತ್ತಾ ಭಾವುಕರಾದ ಅವರು, ‘ಜನರು ತಮ್ಮ ಜೀವನದ ಚಿಂತೆಗಳನ್ನು ಮರೆಯಲು ಸಿನಿಮಾ ನೋಡುತ್ತಾರೆ. ಸಿನಿಮಾ ನೋಡಲು ಸಾಧ್ಯವಾಗದ ಕಾರಣ ಮನನೊಂದಿರುವ ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ. ನಾನು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ. ‘ಕರುಪ್ಪು’ ಸಿನಿಮಾ ಮೇ 14 ರಂದು ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆಗುತ್ತದೆ ಎಂದು ನಾನು ನಂಬಿದ್ದೆ. ನನಗೆ ಈಗಲೂ ಭರವಸೆ ಇದೆ. ನನಗೆ ನೋವಾಗುತ್ತಿದೆ, ಅದಕ್ಕೇ ಕಣ್ಣೀರು ಬರುತ್ತಿದೆ. ಇಂದು ಸಂಜೆ 6 ಗಂಟೆಗೆ ಚಿತ್ರವನ್ನು ಬಿಡುಗಡೆ ಮಾಡಲು ಎಲ್ಲರೂ ಶ್ರಮಿಸುತ್ತಿದ್ದಾರೆ’ ಎಂದಿದ್ದಾರೆ. ಈ ವೇಳೆ ಬಾಲಾಜಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ವಿಶೇಷ ದಿನದ ಸೀರೆಗೆ ‘ಪ್ರೀತಿ’ಯ ಕ್ಯಾಪ್ಶನ್ ಕೊಟ್ಟ ತ್ರಿಷಾ ಕೃಷ್ಣನ್

ಬಾಲಾಜಿ ಈ ಪೋಸ್ಟ್ ಹಾಕಿದ ಬೆನ್ನಲ್ಲೇ ನಟ ದುಲ್ಕರ್ ಸಲ್ಮಾನ್ ಬೆಂಬಲ ಸೂಚಿಸಿದ್ದು, ‘ಎಲ್ಲವೂ ಒಳ್ಳೆಯದೇ ಆಗುತ್ತದೆ ಸಹೋದರ, ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ. ದುಲ್ಕರ್ ಸಲ್ಮಾನ್ ಮಾತ್ರವೇ ಅಲ್ಲದೆ ಇನ್ನೂ ಹಲವರು ಬಾಲಾಜಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ನಿರ್ದೇಶಿಸಿರುವ ಬಾಲಾಜಿ ಸ್ವತಃ ತಮಿಳಿನ ಜನಪ್ರಿಯ ಹಾಸ್ಯ ನಟರಾಗಿದ್ದು, ಬಹಳ ಕಷ್ಟಪಟ್ಟು ಸಿನಿಮಾಗಳಿಗೆ ಬಂದವರು. ಹಾಗಾಗಿ ಅವರಿಗೆ ಸಾಕಷ್ಟು ಬೆಂಬಲ, ಸಿಂಪತಿ ಸಹ ದೊರೆತಿದೆ.

ಭಾರಿ ಪ್ರಮಾಣದ ಅಡ್ವಾನ್ಸ್ ಬುಕಿಂಗ್ ಆಗಿದ್ದರೂ ಸಹ, ಚಿತ್ರದ ಹಣಕಾಸುದಾರರು ಮತ್ತು ನಿರ್ಮಾಣ ಸಂಸ್ಥೆಯ ನಡುವಿನ ಬಗೆಹರಿಯದ ಆರ್ಥಿಕ ವಿವಾದದ ಕಾರಣದಿಂದಾಗಿ ಭಾರತ ಮತ್ತು ವಿದೇಶಗಳ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳನ್ನು ನಿಲ್ಲಿಸಲು ಒತ್ತಾಯಿಸಲಾಯಿತು. ವರದಿಗಳ ಪ್ರಕಾರ, ನಿರ್ಮಾಣ ಸಂಸ್ಥೆಯು 50 ಕೋಟಿಗೂ ಹೆಚ್ಚು ಸಾಲವನ್ನು ಹೊಂದಿದ್ದು, ಇದರಿಂದ ಉಂಟಾದ ಹಣಕಾಸಿನ ಬಿಕ್ಕಟ್ಟಿನ ಕಾರಣ ಚಿತ್ರಮಂದಿರ ಮಾಲೀಕರು ಬುಕಿಂಗ್ ನಿಲ್ಲಿಸಿ ಪ್ರೀಮಿಯರ್ ಶೋಗಳನ್ನು ರದ್ದುಗೊಳಿಸಿದ್ದಾರೆ. ಸದ್ಯ ಚಿತ್ರತಂಡವು ಈ ಸಮಸ್ಯೆಯನ್ನು ಬಗೆಹರಿಸಿ ಭಾರತ ಮತ್ತು ಅಮೆರಿಕದಾದ್ಯಂತ ಇಂದು ಸಂಜೆ 6 ಗಂಟೆಯ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:40 pm, Thu, 14 May 26

Source link

ಇರಾನ್​ ನಟಿಗೆ ಮೆಸೇಜ್ ಮಾಡಿದ್ದಕ್ಕೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​ಗೆ ಹೆಂಡತಿಯಿಂದ ಕಪಾಳಮೋಕ್ಷ! ಹಳೆಯ ವಿಡಿಯೋ ವೈರಲ್ – Kannada News | French president Macrons Wife Slapped him Over Flirty message With Iranian Actor Old Video Viral

ಪ್ಯಾರಿಸ್, ಮೇ 14: ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕಳೆದ ವರ್ಷ ಹೆಂಡತಿಯ ಜೊತೆಗಿನ ವಿದೇಶ ಪ್ರವಾಸದ ಸಮಯದಲ್ಲಿ ಮುಜುಗರಕ್ಕೀಡಾಗಿದ್ದರು. ವಿಮಾನದಿಂದ ಇಳಿಯುವಾಗಲೇ ಮ್ಯಾಕ್ರನ್ (Emmanuel Macron) ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ತನ್ನ ಗಂಡನಿಗೆ ಕಪಾಳಮೋಕ್ಷ ಮಾಡಿದ್ದರು. ಅದಕ್ಕೆ ಕಾರಣವೇನೆಂಬುದು ಬಯಲಾಗಿದೆ. ಬಿಡುಗಡೆಯಾಗಿರುವ ಹೊಸ ಪುಸ್ತಕದ ಪ್ರಕಾರ, ಫ್ರೆಂಚ್ ಅಧ್ಯಕ್ಷ ಮತ್ತು ಇರಾನ್ ಮೂಲದ ನಟಿ ಗೋಲ್‌ಶಿಫ್ಟೆಹ್ ಫರಹಾನಿ ನಡುವೆ ನಡೆದ ಚಾಟ್ ಅನ್ನು ನೋಡಿದ್ದ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಕಳೆದ ವರ್ಷ ವಿದೇಶಿ ಪ್ರವಾಸದ ಸಮಯದಲ್ಲಿ ವಿಮಾನದಿಂದ ಇಳಿಯುವಾಗ ಪತಿ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ತಳ್ಳಿ ಕೆನ್ನೆಗೆ ಹೊಡೆದಿದ್ದರು.

ಕಳೆದ ವರ್ಷ ದಂಪತಿಯ ವಿಯೆಟ್ನಾಂ ಭೇಟಿಯ ಸಂದರ್ಭದಲ್ಲಿ ನಡೆದ ಘಟನೆಯು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿತು. ಇದು ದಂಪತಿಗಳ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಆದರೆ, ತಮಾಷೆಯಿಂದ ಆ ರೀತಿ ಮಾಡಿದ್ದು ಎಂದು ಮ್ಯಾಕ್ರನ್ ದಂಪತಿ ಆ ವದಂತಿಗೆ ತೆರೆ ಎಳೆದಿದ್ದರು. ಇದೀಗ ಆ ಹಳೆಯ ವಿಡಿಯೋ ಮತ್ತೆ ಚರ್ಚೆಗೆ ಬಂದಿದೆ.

Macron With Iran Actress

ಫ್ರೆಂಚ್ ಪತ್ರಕರ್ತರಾದ ಫ್ಲೋರಿಯನ್ ಟರ್ಡಿಫ್ ಅವರ “ಪರ್ಫೆಕ್ಟ್ ಕಪಲ್ (ಪರಿಪೂರ್ಣ ಜೋಡಿ)” ಎಂಬ ಹೊಸ ಪುಸ್ತಕದಲ್ಲಿ ಈ ಬಗ್ಗೆ ಬರೆಯಲಾಗಿದೆ. ಮ್ಯಾಕ್ರನ್ ಮತ್ತು ಇರಾನ್ ನಟಿ ಫರಾಹಾನಿ ಹಲವಾರು ತಿಂಗಳಿಂದ ಸಂಪರ್ಕದಲ್ಲಿದ್ದರು. ಅವರಿಗೆ ಫ್ಲರ್ಟಿಂಗ್ ಮೆಸೇಜ್ ಮಾಡುತ್ತಿದ್ದರು. ನೀನು ಬಹಳ ಸುಂದರವಾಗಿದ್ದೀಯ ಎಂದು ಮ್ಯಾಕ್ರನ್ ಚಾಟ್ ಮಾಡಿದ್ದನ್ನು ಅವರ ಪತ್ನಿ ನೋಡಿದ್ದರು. ಇದೇ ಕಾರಣಕ್ಕೆ ಅವರು ಕೋಪದಿಂದ ಗಂಡನಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ಪುಸ್ತಕದಲ್ಲಿ ಟಾರ್ಡಿಫ್ ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

ಬುಧವಾರ ಬಿಡುಗಡೆಯಾದ ಈ ಪುಸ್ತಕ ಇರಾನ್-ಫ್ರೆಂಚ್ ನಟಿಯ ನಡುವಿನ ಫೋನ್ ಚಾಟ್ ಅನ್ನು ನೋಡಿದ್ದ ಬ್ರಿಗಿಟ್ಟೆ ಕೋಪಗೊಂಡಿದ್ದರು ಎಂದು ತಿಳಿಸಲಾಗಿದೆ. ಒಂದು ಮೆಸೇಜ್​ನಲ್ಲಿ ಫರಾಹಾನಿ ಮ್ಯಾಕ್ರನ್‌ಗೆ “ನೀವು ಬಹಳ ಹ್ಯಾಂಡ್ಸಮ್ ಆಗಿದ್ದೀರಿ” ಎಂದು ಹೇಳಿದ್ದರು. ಮ್ಯಾಕ್ರನ್ ಕೂಡ ಫರಹಾನಿಗೆ “ನೀವು ತುಂಬಾ ಸುಂದರವಾಗಿದ್ದೀರಿ” ಎಂದು ಹೇಳಿದ್ದರು. ಇದೇ ಅವರಿಬ್ಬರ ನಡುವೆ ಮುನಿಸಿಗೆ ಕಾರಣವಾಗಿತ್ತು.

ಕಳೆದ ವರ್ಷ ಮೇ ತಿಂಗಳಲ್ಲಿ ವಿಯೆಟ್ನಾಂನ ಹನೋಯ್‌ನಲ್ಲಿ ದಂಪತಿ ತಮ್ಮ ವಿಮಾನವನ್ನು ಇಳಿಯಲು ಸಿದ್ಧರಾಗುವ ಮೊದಲು ಬ್ರಿಗಿಟ್ಟೆ ತನ್ನ ಪತಿಯ ಫೋನ್‌ನಲ್ಲಿ ಫರಾಹಾನಿಯಿಂದ ಸಂದೇಶವನ್ನು ಓದಿದ್ದರು. ಇದೇ ಕಾರಣಕ್ಕೆ ಕೋಪಗೊಂಡ ಅವರು ವಿಮಾನದಿಂದ ಇಳಿಯುವ ಮೊದಲು ಗಂಡನ ಕೆನ್ನೆಗೆ ಹೊಡೆದಿದ್ದರು. ಕೊನೆಗೆ ಇಬ್ಬರೂ ಒಳಗೆ ಹೋಗಿ ಸ್ವಲ್ಪ ಸಮಯದ ಬಳಿಕ ನಗುತ್ತಾ ಮಾಧ್ಯಮಗಳಿಗೆ ಕೈ ಬೀಸುತ್ತಾ ವಿಮಾನವನ್ನು ಇಳಿದಿದ್ದರು. ಈ ಘಟನೆಯ ಹಿಂದಿನ ಕಾರಣ ಇದೀಗ ಬಯಲಾದಂತಾಗಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಆದರೆ, ನಟಿ ಫರಾಹಾನಿ ಮ್ಯಾಕ್ರನ್ ಜೊತೆಗಿನ ಸಂಬಂಧದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಗೋಲ್ಶಿಫ್ತೆಹ್ ಫರಹಾನಿ ಇರಾನ್ ಮತ್ತು ಫ್ರೆಂಚ್ ನಟಿ. ಹಲವಾರು ಪ್ರಸಿದ್ಧ ಚಲನಚಿತ್ರಗಳಲ್ಲಿನ ಅಭಿನಯದ ಮೂಲಕ ಜನಪ್ರಿಯರಾಗಿದ್ದಾರೆ. ಅವರು ಇರಾನ್‌ನಲ್ಲಿ ಇಸ್ಲಾಮಿಸ್ಟ್ ಆಡಳಿತದ ತೀವ್ರ ಟೀಕಾಕಾರರೂ ಆಗಿದ್ದಾರೆ. ಫರಾಹಾನಿ ಮತ್ತು ಮ್ಯಾಕ್ರನ್ ನಡುವಿನ ಆಪ್ತ ಸಂಬಂಧ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link