Honeymoon Murder: ಏಳು ವರ್ಷಗಳ ಹಿಂದೆ ಮೊದಲ ಭೇಟಿ, 2024ರಲ್ಲಿ ಒಂದಾದ್ರು, 1 ವರ್ಷದ ನಂತರ ಇಬ್ಬರೂ ಸೇರಿ ಕೊಲೆ ಮಾಡಿದ್ರು – Kannada News | Rajasthan Honeymoon Murder: Wife and her Lover Arrested for Husband’s Brutal Killing

ಜೈಪುರ, ಫೆಬ್ರವರಿ 09: ಏಳು ವರ್ಷಗಳ ಹಿಂದೆ ಆಕಸ್ಮಿಕವಾಗಿ ಆಗಿದ್ದ ಭೇಟಿ ಇಂದು ಇಬ್ಬರೂ ಸೇರಿ ಒಂದು ಕೊಲೆಯನ್ನೇ ಮಾಡುವ ಹಂತಕ್ಕೆ ಬಂದು ತಲುಪಿದೆ. ಜನವರಿ 30ರಂದು ರಾಜಸ್ಥಾನದಲ್ಲಿ ನವ ವಿವಾಹಿತ ಮಹಿಳೆಯೊಬ್ಬರು ತನ್ನ ಮದುವೆ(Marriage)ಯಾಗಿ ಮೂರೇ ತಿಂಗಳಿಗೆ ಪ್ರಿಯಕರನ ಜತೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದಳು. ಆರೋಪಿ 23 ವರ್ಷದ ಅಂಜಲಿ, 25 ವರ್ಷದ ಸಂಜಯ್ ಅವರನ್ನು ತಾನು ವೇಟರ್ ಆಗಿ ಕೆಲಸ ಮಾಡುತ್ತಿದ್ದ ಸಮಾರಂಭವೊಂದರಲ್ಲಿ ಭೇಟಿಯಾದಳು. ಮೊದಲು ಆರಂಭವಾದ ಮಾತು ಕತೆ ನಂತರ ಆತ ಮೊಬೈಲ್ ಸಂಖ್ಯೆಯನ್ನು ಕೊಡುವವರೆಗೆ ಬಂದಿತ್ತು. ಆದರೆ ಆ ಸಮಯದಲ್ಲಿ ಅಂಜಲಿ ಬಳಿ ಮೊಬೈಲ್ ಫೋನ್ ಇರಲಿಲ್ಲ, ಇಬ್ಬರೂ ಸಂಪರ್ಕ ಕಳೆದುಕೊಂಡರು.

2024ರಲ್ಲಿ ಅಂಜಲಿ ಕೊನೆಗೂ ಫೋನ್ ಖರೀದಿಸಿ ಆಕೆ ಸಂಜಯ್ ಜತೆ ಮತ್ತೆ ಸಂಪರ್ಕಕ್ಕೆ ಬಂದಳು, ಕ್ರಮೇಣವಾಗಿ ಅವರ ನಡುವೆ ಮಾತುಕತೆ ಹೆಚ್ಚಾಗಿತ್ತು. ಆದರೆ ಆಕೆಯ ಕುಟುಂಬದವರ ಪ್ಲ್ಯಾನ್ ಬೇರೆಯೇ ಇತ್ತು. ಸಂಜಯ್ ಜತೆ ಸಂಬಂಧ ಹೊಂದಿದ್ದಾಳೆಂದು ತಿಳಿದ ಬಳಿಕವೂ ಬೇರೆ ವರನನ್ನು ನೋಡಿ ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು.
ಅಕ್ಟೋಬರ್ 30, 2025ರಂದು ಅಂಜಲಿಯ ಕುಟುಂಬ ರಾವ್ಲಾದ ಎಂಕಾ ಪದವೀಧರ ಆಶಿಶ್ ಕುಮಾರ್ ಅವರೊಂದಿಗೆ ವಿವಾಹ ಏರ್ಪಡಿಸಿದ್ದರು. ಅಂಜಲಿ ಬಿಕಾಂ ಪದವೀಧರೆಯಾಗಿದ್ದಾರೆ. ಮದುವೆಯ ನಂತರ ಅವರು ರಾವ್ಲಾಗೆ ತೆರಳಿದ್ದರು, ಆದರೆ ಆಕೆಯ ಮನಸ್ಸಿಗೆ ಸಮಾಧಾನವಿರಲಿಲ್ಲ.

ರಾವ್ಲಾದಲ್ಲಿ ಗಂಡನ ಮನೆ ಸಾದುಲ್ಶಹರ್‌ನಲ್ಲಿರುವ ಅವರ ಹುಟ್ಟೂರು ನಡುವಿನ 225 ಕಿಲೋಮೀಟರ್ ಅಂತರವಿತ್ತು. ಅದು ಆಕೆಗೆ ತಲೆನೋವಾಗಿ ಪರಿಣಮಿಸಿತ್ತು. ಆಕೆ ಸಂಜಯ್ ಜತೆ ಸಂಪರ್ಕದಲ್ಲಿದ್ದಳು. ಕೊಲೆಗೆ ಸುಮಾರು 16 ದಿನಗಳ ಮೊದಲು ಅಂಜಲಿ ತನ್ನ ಹೆತ್ತವರ ಮನೆಗೆ ಭೇಟಿ ನೀಡಿದ್ದಳು. ಪೊಲೀಸರ ಪ್ರಕಾರ, ಆ ಸಮಯದಲ್ಲಿ ಆಕೆ ಸಂಜಯ್ ಜತೆ ಸೇರಿ ಪತಿ ಆಶಿಶ್​ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.

ಮತ್ತಷ್ಟು ಓದಿ: ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ತಾಳಿ ಕಟ್ಟುವ ಶುಭ ವೇಳೆ ನಡೆದಿದ್ದೇನು?

ಮದುವೆಯ ನಂತರ ಅವರು ನೇರವಾಗಿ ಭೇಟಿಯಾಗದಿದ್ದರೂ , ಆಗಾಗ ವಾಟ್ಸಾಪ್​ನಲ್ಲಿ ಕರೆ ಮಾಡಿ ಮಾತನಾಡುತ್ತಿದ್ದರು. ಕೊಲೆಯಾದ ದಿನ ಇಬ್ಬರೂ 5 ರಿಂದ 7 ಬಾರಿ ಮಾತನಾಡಿದ್ದರು. ಜನವರಿ 30 ರ ರಾತ್ರಿ, ಊಟದ ನಂತರ, ಅಂಜಲಿ ತನ್ನ ಪತಿಯನ್ನು ತನ್ನೊಂದಿಗೆ ವಾಕ್ ಮಾಡಲು ಹೋಗುವಂತೆ ಕೇಳಿಕೊಂಡಳು. ನಂತರ ಅವರು ಇರುವ ಸ್ಥಳದ ಬಗ್ಗೆ ಸಂಜಯ್‌ಗೆ ದೂರವಾಣಿ ಮೂಲಕ ತಿಳಿಸಿದ್ದಳು.

ಸಂಜಯ್, ತನ್ನ ಇಬ್ಬರು ಸಹಚರರಾದ ರೋಹಿತ್ ಅಲಿಯಾಸ್ ರಾಕಿ ಮತ್ತು ಬಾದಲ್ ಅಲಿಯಾಸ್ ಸಿದ್ಧಾರ್ಥ್ ಜೊತೆ ಪೊದೆಗಳಲ್ಲಿ ಅಡಗಿ ಕಾಯುತ್ತಿದ್ದರು. ಅಂಜಲಿ ತನ್ನ ಪತಿಯೊಂದಿಗೆ ಸ್ಥಳಕ್ಕೆ ಬಂದ ತಕ್ಷಣ ಅವರಿಗೆ ಸಂಕೇತ ನೀಡಿದ್ದಳು, ಗುಂಪು ಆಶಿಶ್ ಮೇಲೆ ಹೊಂಚು ಹಾಕಿ, ಕೋಲುಗಳಿಂದ ಪದೇ ಪದೇ ಹೊಡೆದರು, ಆಶಿಶ್ ಕೆಳಗೆ ಬಿದ್ದಾಗ ಆರೋಪಿಗಳು ಮಫ್ಲರ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಘಟನೆಯನ್ನು ದರೋಡೆ ಎಂದು ಬಿಂಬಿಸಲು ಅಂಜಲಿ ತನ್ನ ಕಿವಿಯೋಲೆ ಮತ್ತು ಆಶಿಶ್​ನ ಮೊಬೈಲ್ ಅನ್ನು ದಾಳಿಕೋರರಿಗೆ ಕೊಟ್ಟಿದ್ದಾಳೆ. ಆಕೆಯೂ ಪ್ರಜ್ಞೆ ಕಳೆದುಕೊಂಡವಳಂತೆ ರಸ್ತೆಯಲ್ಲಿ ಮಲಗಿದ್ದಳು.

ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಶಿಶ್ ತಲೆಯ ಹಿಂಭಾಗದಲ್ಲಿ ತೀವ್ರವಾದ ಗಾಯಗಳಾಗಿದ್ದು, ಕತ್ತು ಹಿಸುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು.ಈಗ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ವ್ಯಕ್ತಿಗಳನ್ನು 5 ದಿನಗಳ ಕಾಲ ವಶಕ್ಕೆ ಪಡೆಯಲಾಗಿದ್ದು, ಅಂಜಲಿಯನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆದು ನಂತರ ಬಿಕಾನೇರ್ ಜೈಲಿಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:09 am, Mon, 9 February 26

Source link

ಭರ್ಜರಿ ಚೇಸಿಂಗ್… ವಿಶ್ವಕಪ್​​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ನೇಪಾಳ – Kannada News | Nepal Team Created New World Record in T20 World Cup 2026

ಟಿ20 ವಿಶ್ವಕಪ್​​ನಲ್ಲಿ ನೇಪಾಳ ತಂಡವು ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಇಂಗ್ಲೆಂಡ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​​ನ 5ನೇ ಮ್ಯಾಚ್​​ನಲ್ಲಿ ನೇಪಾಳ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.

Source link

‘ಅದಕ್ಕೆ ದೊಡ್ಡೋರು ಅನ್ನೋದು’; ಸುದೀಪ್ ಬಗ್ಗೆ ಧನ್ವೀರ್ ಮೆಚ್ಚುಗೆ – Kannada News | Dhanveer Happy about Kichcha Sudeep Appreciation in Darshan matter

ಚಿತ್ರರಂಗ ಒಟ್ಟಾಗಿ ಸಾಗಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಇದಕ್ಕೆ ಪ್ರತಿಕೂಲವಾಗಿ ಘಟನೆಗಳು ನಡೆದಿದ್ದೇ ಹೆಚ್ಚು. ದರ್ಶನ್ ಬಗ್ಗೆ ಸುದೀಪ್ ಅವರು ಸದಾ ಮೆಚ್ಚುಗೆ ಸೂಚಿಸಿ ಮಾತನಾಡುತ್ತಾರೆ. ಆದರೆ, ಇಬ್ಬರ ಅಭಿಮಾನಿಗಳ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾತನಾಡಿದ್ದ ಸುದೀಪ್ (Sudeep) ಅವರು, ದರ್ಶನ್ ಆಪ್ತ ಧನ್ವೀರ್ ಬಗ್ಗೆ ಮಾತನಾಡಿದ್ದರು. ಈ ವಿಷಯಕ್ಕೆ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ.

ವಿನಯ್ ಹಾಗೂ ಧನ್ವೀರ್ ಪೋಸ್ಟ್ ಹಾಕಿಕೊಂಡು ಕಿರಿಕ್ ಮಾಡಿಕೊಂಡ ಬಗ್ಗೆ ಸುದೀಪ್ ಮಾತನಾಡಿದ್ದರು. ‘ನನಗೆ ಧನ್ವೀರ್ ಹಾಗೂ ವಿನಯ್ ಇಬ್ಬರೂ ಒಂದೇ. ಅವರಿಬ್ಬರೂ ಚಿತ್ರರಂಗದ ಯಂಗ್​ಸ್ಟರ್ಸ್​. ಧನ್ವೀರ್​​ನ ನಾನು ನೋಡಿದ್ದೇನೆ. ಅವರು ಆ ಹೀರೋ ಜೊತೆ ಓಡಾಡೋದು ನೋಡಿದ್ದೇನೆ. ಏನೇ ಆದರೂ ಆ ಹೀರೋ ಜೊತೆ ನಿಲ್ಲುತ್ತೇನೆ ಎಂಬ ನೀಯತ್ತು ಇದೆಯಲ್ಲ ಅದು ಬೇಕು’ ಎಂದಿದ್ದರು ಕಿಚ್ಚ.

ಈ ವಿಷಯವಾಗಿ ಧನ್ವೀರ್ ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಊ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಾನು ಆ ವಿಡಿಯೋ ನೋಡಿದೆ. ದೊಡ್ಡವರು ಎಂಬುದು ಹೇಳೋದು ಇದಕ್ಕೆ. ಅವರಿಗೆ ಎಲ್ಲವೂ ಗೊತ್ತಿರುತ್ತದೆ. ಅದಕ್ಕೆ ಅವರು ದೊಡ್ಡ ಮಾತು ಆಡ್ತಾರೆ’ ಎಂದರು ಧನ್ವೀರ್.

ಇದೇ ವೇಳೆ ವಿನಯ್ ಗೌಡಗೆ ಟಾಂಗ್ ಕೂಡ ಕೊಟ್ಟಿದ್ದಾರೆ. ‘ಆಗದೆ ಇದ್ದವರು ಎಲ್ಲೋ ಕುಳಿತುಕೊಂಡು ಮಾತನಾಡ್ತಾರೆ’ ಎಂದಿದ್ದಾರೆ. ‘ದೊಡ್ಡವರು ಮಾತನಾಡೋದು ಕೇಳಿ ನಮಗೆ ಖುಷಿ ಆಯ್ತು’ ಎಂದು ಧನ್ವೀರ್ ಹೇಳಿದ್ದಾರೆ.

ಇದನ್ನೂ ಓದಿ: ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್

ಸುದೀಪ್​​ಗೆ ಅನೇಕ ಯುವ ಹೀರೋಗಳು ನೀಯತ್ತು ತೋರಿಸುತ್ತಾರೆ. ಈ ನೀಯತ್ತು ಸುದೀಪ್​​ಗೆ ಇಷ್ಟ. ಬೇರೆ ನಟರಿಗೂ ಯುವ ಹೀರೋಗಳು ನೀಯತ್ತು ತೋರಿಸುತ್ತಾರೆ ಎಂದರೆ ಅದು ಹೆಮ್ಮೆ ಪಡೋ ವಿಷಯವೇ ಸರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ? – Kannada News | Daily Devotional: The Divine Parijatha, Benefits of Growing This Auspicious Plant Near Your Home

ಬೆಂಗಳೂರು, ಫೆಬ್ರುವರಿ​ 09: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ?ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯ ಹತ್ತಿರ ಸಣ್ಣ ಪುಟ್ಟ ಗಿಡಗಳನ್ನು ಬೆಳೆಸುವುದು ಸಾಮಾನ್ಯ. ಆದರೆ ಕೆಲವು ಗಿಡಗಳು ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ವಿಶೇಷ ಮಹತ್ವವನ್ನು ಹೊಂದಿವೆ. ಅವುಗಳಲ್ಲಿ ಪಾರಿಜಾತ ಗಿಡವು ಅತಿ ಪ್ರಮುಖವಾದುದು. ಪಾರಿಜಾತವನ್ನು ದೇವಲೋಕದ ಗಿಡ ಎಂದು ಕರೆಯಲಾಗುತ್ತದೆ. ಇದರ ಹೂವುಗಳು ರಾತ್ರಿಯ ಸಮಯದಲ್ಲಿ ಸುಗಂಧವನ್ನು ಬೀರುತ್ತವೆ.

ಮನೆಯಲ್ಲಿ ಪಾರಿಜಾತ ಗಿಡವನ್ನು ಬೆಳೆಸಬಹುದೇ ಎಂಬ ಪ್ರಶ್ನೆಗೆ ಉತ್ತರ ಹೌದು. ಇದನ್ನು ಉತ್ತರ-ಈಶಾನ್ಯ ಅಥವಾ ದಕ್ಷಿಣ-ನೈರುತ್ಯ ದಿಕ್ಕಿನಲ್ಲಿ ಬೆಳೆಸುವುದು ಶುಭ ಎಂದು ವಾಸ್ತು ಹೇಳುತ್ತದೆ. ಇದು ವಾಸ್ತು ದೋಷಗಳನ್ನು ನಿವಾರಿಸಿ, ಮನೆಯ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಪ್ರಸಾರ ಮಾಡುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ಪಾರಿಜಾತವೂ ಒಂದು. ಇದನ್ನು ಮಹಾಲಕ್ಷ್ಮಿಯ ಸಹೋದರ ಎಂದು ಸಹ ಪರಿಗಣಿಸಲಾಗುತ್ತದೆ. ಮನೆಯ ಸುತ್ತಲೂ ಪಾರಿಜಾತ ಗಿಡವಿದ್ದರೆ ಮಹಾಲಕ್ಷ್ಮಿ, ಮಹಾಸರಸ್ವತಿ, ಮಹಾಕಾಳಿ ಈ ತ್ರಿಶಕ್ತಿಗಳ ಅನುಗ್ರಹ ಇರುತ್ತದೆ ಎಂದು ನಂಬಲಾಗಿದೆ. ಸೂರ್ಯನ ಕಿರಣಗಳು ಇದಕ್ಕೆ ಬೀಳುವುದು ಅವಶ್ಯಕ. ನೆಲಕ್ಕೆ ಬಿದ್ದ ಹೂವುಗಳನ್ನು ಸಹ ಪೂಜೆಗೆ ಬಳಸಬಹುದು ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

Video: ಪೀರಗಢಿ ಫ್ಲೈಓವರ್‌ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಶವ ಪತ್ತೆ – Kannada News | Mystery Deaths on Delhi Flyover: Three Found Lifeless Inside Locked Car

ನವದೆಹಲಿ, ಫೆಬ್ರವರಿ 09: ದೆಹಲಿಯ ಪೀರಗಢಿ ಫ್ಲೈಓವರ್ ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮೂವರ ಶವ ಪತ್ತೆಯಾಗಿದೆ. ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಪ್ರೋಲಾ ನಿವಾಸಿ ರಣಧೀರ್ ಸಿಂಗ್ (60 ವರ್ಷ), ಲಕ್ಷ್ಮಿ ದೇವಿ (40 ವರ್ಷ) ಮತ್ತು ಶಿವ ನರೇಶ್ ಸಿಂಗ್ (47 ವರ್ಷ) ಎಂದು ಗುರುತಿಸಲಾಗಿದೆ. ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಶವಪರೀಕ್ಷೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ತುಂಬಾ ಹೊತ್ತಿನಿಂದ ಕಾರು ಅಲ್ಲೇ ನಿಂತಿದ್ದರಿಂದ ಅನುಮಾನಗೊಂಡ ಜನರು ಹತ್ತಿರಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮುಂದಿನ ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿಗೆ ಇಲ್ಲ ಅವಕಾಶ..!

Source link

ಸುನಾಮಿ ಉಯ್ಯಾಲೆ ದುರಂತ: ಎಲ್ಲರನ್ನೂ ಸಾವಿನ ದವಡೆಯಿಂದ ಕಾಪಾಡಿ ಪ್ರಾಣ ಬಿಟ್ಟ ಪೊಲೀಸ್ ಅಧಿಕಾರಿ ಜಗದೀಶ್ ಪ್ರಸಾದ್ ಯಾರು? – Kannada News | Surajkund Tsunami Swing Tragedy: Police Officer Jagadish Prasad’s Heroic Sacrifice

ಫರೀದಾಬಾದ್, ಫೆಬ್ರವರಿ 09: ಹರಿಯಾಣದ ಫರೀದಾಬಾದ್​​ನಲ್ಲಿ ನಡೆದ 39ನೇ ಸೂರಜ್​ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ದೊಡ್ಡ ಅಪಘಾತ(Accident)ವೊಂದು ಸಂಭವಿಸಿತ್ತು. ಸುನಾಮಿ ಉಯ್ಯಾಲೆ ಕಳಚಿಬಿದ್ದು ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಹಾಗಾದರೆ ಎಲ್ಲರನ್ನೂ ರಕ್ಷಿಸಲು ಹೋಗಿ ಪ್ರಾಣಬಿಟ್ಟ ಪೊಲೀಸ್ ಅಧಿಕಾರಿ ಜಗದೀಶ್ ಪ್ರಸಾದ್ ಯಾರು ಎನ್ನುವ ಮಾಹಿತಿ ಇಲ್ಲಿದೆ.

ಸೂರಜ್‌ಕುಂಡ್ ಜಾತ್ರೆಯಲ್ಲಿ ನಡೆದ ಅಪಘಾತವು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು, ಸುನಾಮಿ ಹೆಸರಿನ ಉಯ್ಯಾಲೆ ಇದ್ದಕ್ಕಿದ್ದಂತೆ ಮುರಿದು ಬಿದ್ದಿತ್ತು, ಅಲ್ಲಿ ಭದ್ರತಾ ಉಸ್ತುವಾರಿ ವಹಿಸಿದ್ದ ಇನ್ಸ್​ಪೆಕ್ಟರ್ ಜಗದೀಶ್ ಪ್ರಸಾದ್ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಸಹಾಯಕ್ಕೆ ಮುಂದಾದರು.

ಪ್ರಸಾದ್ ಅವರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿ ಜನಸಮೂಹವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಈ ಮಧ್ಯೆ ಉಯ್ಯಾಲೆಯ ಭಾರವಾದ ಭಾಗವು ಅವರ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡರು. ಅವರನ್ನು ತಕ್ಷಣವೇ ಬಿಕೆ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು. ಮೂಲತಃ ಮಥುರಾ ಮೂಲದ ಪ್ರಸಾದ್ ಅವರ ನಿವೃತ್ತಿಗೆ ಕೇವಲ ಎರಡು ವರ್ಷಗಳು ಬಾಕಿ ಉಳಿದಿದ್ದವು.

ಮತ್ತಷ್ಟು ಓದಿ: ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು, 13 ಜನರಿಗೆ ಗಾಯ

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಫರೀದಾಬಾದ್ ಉಪ ಆಯುಕ್ತ ಆಯುಷ್ ಸಿಂಗ್ ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಜಾತ್ರೆಯಲ್ಲಿ ಗೇಟ್ ಕುಸಿದು ಇಬ್ಬರು ಗಾಐಗೊಂಡಿದ್ದರು, ಆಡಳಿತವು ಮನರಂಜನಾ ಪ್ರದೇಶವನ್ನು ಸ್ಥಳಾಂತರಿಸಿ ತನಿಖೆಯನ್ನು ಪ್ರಾರಂಭಿಸಿತ್ತು. 2025ರ ಏಪ್ರಿಲ್​ನಲ್ಲಿ ದೆಹಲಿಯ ಕಪಶೇರಾದ ಫನ್ ಅಂಡ್ ಫುಡ್ ವಿಲೇಜ್​ನಲ್ಲಿ ರೋಲರ್ ಕೋಸ್ಟರ್ ಅಪಘಾತ ಸಂಭವಿಸಿತ್ತು. 24 ವರ್ಷದ ಪ್ರಿಯಾಂಕಾ ರಾವತ್ ತನ್ನ ಮದುವೆಗೆ ಕೆಲವು ತಿಂಗಳಿರುವಾಗ ಸೀಟ್ ಬೆಲ್ಟ್​ ತುಂಡಾದ ಪರಿಣಾಮ ಬಿದ್ದು ಸಾವನ್ನಪ್ಪಿದ್ದರು.

ಆಕೆ ತನ್ನ ಫಿಯಾನ್ಸಿ ಜತೆ ಉದ್ಯಾನಕ್ಕೆ ಹೋಗಿದ್ದರು, ಈ ಘಟನೆಯು ಇಂಥಾ ಮನರಂಜನಾ ಉದ್ಯಾನಗಳಲ್ಲಿನ ಸುರಕ್ಷತೆಯ ಮಾನದಂಡಗಳ ಕಡೆಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೈಸೂರು ಕೆಸರೆ ಬಡಾವಣೆಯಲ್ಲಿ 4ಕ್ಕೂ ಹೆಚ್ಚು ಗೋದಾಮುಗಳಿಗೆ ಬೆಂಕಿ!

ಮೈಸೂರು, ಫೆಬ್ರುವರಿ 09: ಮೈಸೂರು ನಗರದ ಕೆಸರೆ ಬಡಾವಣೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಸಮೀಪದ, ಓಲ್ಡ್ ಐಟಿಐ (Old ITI) ಪ್ರದೇಶದಲ್ಲಿರುವ ನಾಲ್ಕಕ್ಕೂ ಹೆಚ್ಚು ಗೋದಾಮುಗಳಿಗೆ ಬೆಂಕಿ ತಗುಲಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಮೈಸೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆ ಹಲವು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

ಈ ಅನಾಹುತದಿಂದ ಸುತ್ತ ಮುತ್ತ ದಟ್ಟ ಹೊಗೆ ಆವರಿಸಿದ್ದು, ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯೂ ನಿಯೋಜನೆಗೊಂಡಿದ್ದು, ಪರಿಸ್ಥಿತಿ ನಿಭಾಯಿಸಲು ನೆರವಾಗಿದ್ದಾರೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲವು ಮೂಲಗಳ ಪ್ರಕಾರ, ದುಷ್ಕರ್ಮಿಗಳ ಕೃತ್ಯದಿಂದ ಬೆಂಕಿ ತಗುಲಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಯಾಂಡ್​​ವಿಚ್​ ಆಗೋದನ್ನು ತಪ್ಪಿಸಿಕೊಳ್ಳಲು ನಿರ್ಧರಿಸಿದ ಸಲ್ಮಾನ್ ಖಾನ್ – Kannada News | Salman Khan’s ‘Battle of Galwan’ Shifts to Aug 15: To Aviod big clash

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​​ನ ಸ್ಟಾರ್ ಹೀರೋ ಎಂಬುದು ನಿಜ. ಆದರೆ, ಈಗ ಅವರಿಗೆ ಮೊದಲಿನ ಬೇಡಿಕೆ ಉಳಿದುಕೊಂಡಿಲ್ಲ. ಅವರ ವೃತ್ತಿ ಜೀವನ ಡಲ್ ಆಗಿದೆ. ಮೊದಲಿನಷ್ಟು ಖಡಕ್ ಸಿನಿಮಾಗಳನ್ನು ನೀಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಬಾಲಿಶ ಸ್ಕ್ರಿಪ್ಟ್​​ಗ ಆಯ್ಕೆ ಕಾರಣಕ್ಕೆ ಸಿನಿಮಾ ಓಡುತ್ತಿಲ್ಲ. ಹೀಗಿರುವಾಗಲೇ ಈಗ ಸಲ್ಮಾನ್ ಖಾನ್ ಅವರು ಸ್ಯಾಂಡ್​​ವಿಚ್ ಆಗೋದನ್ನು ತಪ್ಪಿಸಿಕೊಳ್ಳಲು ಒಂದು ಪ್ಲ್ಯಾನ್ ರೂಪಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್​ ಅಲ್ಲಿ ಸಲ್ಮಾನ್ ಖಾನ್ ಅವರ ಹವಾ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ದೊಡ್ಡ ಹೀರೋಗಳ ಚಿತ್ರಗಳು ಬದಿಗೆ ಸರಿಯುತ್ತಿದ್ದವು. ಆದರೆ, ಈಗ ಪರಿಸ್ಥಿತಿ ಆ ರೀತಿ ಇಲ್ಲ. ಅವರ ಸಿನಿಮಾ ರಿಲೀಸ್ ಆಗುತ್ತದೆ ಎಂದರೆ ಯಾರೊಬ್ಬರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇದು ನಿರ್ಮಾಪಕರ ಭಯಕ್ಕೆ ಕಾರಣ ಆಗಿದೆ. ಅವರ ನಟನೆಯ ‘ಬ್ಯಾಟಲ್ ಆಫ್ ಗಲ್ವಾನ್’ ಏಪ್ರಿಲ್ 17ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗ ಅದು ಮುಂದಕ್ಕೆ ಹೋಗಿದೆ.

ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ತೆರೆಗೆ ಬರುತ್ತಿವೆ. ಇಷ್ಟೇ ಅಲ್ಲ, ಏಪ್ರಿಲ್ 30ಕ್ಕೆ ತೆಲುಗಿನ ಪೆದ್ದಿ, ಕನ್ನಡದ ‘ಕೆಡಿ’ ಚಿತ್ರಗಳು ಬರುತ್ತಿವೆ. ಇದರ ಮಧ್ಯೆ ಬಂದರೆ ಸ್ಯಾಂಡ್​​ವಿಚ್ ಆಗೋದು ಫಿಕ್ಸ್ ಎಂಬುದು ಸಲ್ಲು ನಿರ್ಮಾಪಕರ ಆತಂಕ. ಇದಲ್ಲದೆ, ಸಿನಿಮಾ ಕೆಲಸ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಈ ವಿಷಯದಲ್ಲಿ ಆತುರ ಮಾಡೋದು ಬೇಡ ಎಂಬುದು ಅವರ ಆಲೋಚನೆ.

ಈ ಎಲ್ಲಾ ಕಾರಣದಿಂದ ಸಲ್ಮಾನ್ ಖಾನ್ ಅವರ ಚಿತ್ರವನ್ನು ಸ್ವತಂತ್ರ್ಯ ದಿನಾಚರಣೆಗೆ ಮುಂದೂಡಡಲಾಗಿದೆ. ಮೇ ತಿಂಗಳಲ್ಲಿ ಐಪಿಎಲ್ ಅಬ್ಬರ ಜೋರಿರುತ್ತದೆ. ಆ ಬಳಿಕ ಮಳೆಗಾಲ. ಹೀಗಾಗಿ, ಆಗಸ್ಟ್ 15ನ್ನು ತಂಡ ಆಯ್ಕೆ ಮಾಡಿಕೊಂಡಿದೆ.

ಇದನ್ನೂ ಓದಿ: ಪ್ರೇಮಿಗಳಿಗಾಗಿ ಮತ್ತೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸಿನಿಮಾ ‘ತೇರೆ ನಾಮ್’

‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ದೇಶಭಕ್ತಿ ಕಥೆಯ ಸಿನಿಮಾ. ಚೀನಾ ಹಾಗೂ ಭಾರತದ ಗಡಿ ಗಲ್ವಾನ್​​ನಲ್ಲಿ ನಡೆದ ಫೈಟ್ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಹೀಗಾಗಿ ಆಗಸ್ಟ್ 15 ಒಳ್ಳೆಯ ಆಯ್ಕೆ ಎಂಬುದು ತಂಡದ ಆಲೋಚನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು: ಭಾರಿ ಅಗ್ನಿ ಅವಘಡ, ಧಗಧಗ ಹೊತ್ತಿ ಉರಿದ 4 ಗೋದಾಮುಗಳು – Kannada News | Massive Fire Breaks Out in Mysuru Warehouses Near Kesare Layout, Several Godowns Gutted

ಮೈಸೂರು, ಫೆಬ್ರವರಿ 9: ಮೈಸೂರು ನಗರದ ಹೊರವಲಯದ ಕೆಸರೆ ಬಡಾವಣೆಯಲ್ಲಿ ಭಾನುವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿ ನಾಲ್ಕಕ್ಕೂ ಅಧಿಕ ಗೋದಾಮುಗಳು ಬೆಂಕಿಗಾಹುತಿಯಾಗಿವೆ. ಮೈಸೂರು-ಬೆಂಗಳೂರು ಹೆದ್ದಾರಿ ಸಮೀಪದಲ್ಲಿರುವ ಈ ಗೋದಾಮುಗಳಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದ್ದು, ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ವ್ಯಾಪಿಸಿದೆ. ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಬಳಿಕ ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು.

ಅದೃಷ್ಟವಶಾತ್, ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಹಳೆಯ ವಸ್ತುಗಳು ಮತ್ತು ಸುಲಭವಾಗಿ ಹೊತ್ತಿ ಉರಿಯುವ ಸಾಮಗ್ರಿಗಳು ಇದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿತು ಎಂದು ತಿಳಿದುಬಂದಿದೆ. ಬೆಂಕಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿರುವ ಸಾಧ್ಯತೆ ಇದೆ. ಕುಡಿದ ಮತ್ತಿನಲ್ಲಿ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಘಟನೆಯು ಮೈಸೂರಿನ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version