ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ.. – Kannada News | PDO Nataraj refutes allegations made by Yash mother Pushpa Arun Kumar

ನಿವೇಶನವೊಂದಕ್ಕೆ ಸಂಬಂಧಪಟ್ಟಂತೆ ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ಪಿಡಿಒ ನಟರಾಜ್ ವಿರುದ್ಧ ಗುಡುಗಿದ್ದರು. ನಟರಾಜ್ ಮೇಲೆ ಕೆಲವು ಆರೋಪಗಳನ್ನು ಅವರು ಹೊರಿಸಿದ್ದರು. ಆ ಬಗ್ಗೆ ಸ್ವತಃ ನಟರಾಜ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘ಪುಷ್ಪಾ ಅವರು ಈ ರೀತಿ ಮಾತನಾಡಿರುವುದು ಸರಿಯಲ್ಲ. ನನ್ನ ಹೆಸರು ಹೇಳುವುದರಿಂದ ಅವರು ಸಮಾಜದಲ್ಲಿ ಅಧಃಪಥನಕ್ಕೆ ಇಳಿಯುತ್ತಿದ್ದಾರೆ. ಮನಸ್ಥಿತಿ ಹಾಳುಮಾಡಿಕೊಳ್ಳುತ್ತಿದ್ದಾರೆ. ಅದರಿಂದ ನನಗೆ ಬೇಜಾರು ಇಲ್ಲ. ನನ್ನಿಂದ ತಪ್ಪಾಗಿದ್ದರೆ ಅದನ್ನು ಸಂಬಂಧಪಟ್ಟವರಿಗೆ ನೀಡಲಿ’ ಎಂದು ಪಿಡಿಓ ನಟರಾಜ್ (PDO Nataraj) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ವಾಮೀಜಿ ಮಾತ್ರವಲ್ಲ ಹುಡುಗರ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ – Kannada News | Not Only kamalakar bhat guruji, She Contact With Some Boys: Says Suchitra Husband Mahesh

ಕಾರವಾರ, (ಫೆಬ್ರವರಿ 03): ಕಮಲಾಕರ ಭಟ್ ಗುರೂಜಿ (kamalakar bhat guruji) ಹಾಗೂ ಸುಚಿತ್ರಾಳ ಅನೈತಿಕ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಓರ್ವ ಸಾವಿನಲ್ಲಿ ಅಂತ್ಯವಾಗಿದೆ. ಗುರೂಜಿ ಜೊತೆ ಸುಚಿತ್ರಾ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ದೂರು ನೀಡಿದ್ದಕ್ಕೆ ಉತ್ತರ ಕನ್ನಡದ (Uttara Kannada) ಸಿದ್ಧಾಪುರದಲ್ಲಿ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಸುಚಿತ್ರಾಳ ಪತಿ ಮಹೇಶ್​​ನ ಸಹೋದರ ವಸಂತ್ ನಾಯ್ಕ ಮೃತಪಟ್ಟಿದ್ದಾನೆ. ಇನ್ನು ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್​​ ಹಾಗೂ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಸಂಬಂಧ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಹಲ್ಲೆಗೊಳಗಾದ ಮಹೇಶ್, ಅವಳು ಸ್ವಾಮೀಜಿ ಜೊತೆ ಮಾತ್ರವಲ್ಲ ಇತರೆ ಹುಡುಗರ ಜೊತೆ ಸಂಪರ್ಕ ಹೊಂದಿದ್ದಳು. ಅವಳೇ ರೌಡಿಗಳಿಂದ ನಮ್ಮ ಮೇಲೆ ದಾಳಿ ಮಾಡಿಸಿದ್ದಾಳೆಂದು ಸುಚಿತ್ರಾಳ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟಿದ್ದಾರೆ.

ಹುಡುಗರ ಜೊತೆ ಪತ್ನಿ ಸಂಪರ್ಕ

ಇನ್ನು ಹಲ್ಲೆಗೊಳಗಾದ ಮಹೇಶ್ ಟಿವಿ9 ಜತೆ ಮಾತನಾಡಿದ್ದು, ಮದುವೆ ಆಗಿ 15 ವರ್ಷ ಆಗಿದೆ. ನಾನು ಬೆಂಗಳೂರಿನಲ್ಲಿ ಹೊಟೇಲ್ ಕೆಲಸ ಮಾಡುತ್ತಿದ್ದು, ಎರಡು ಮೂರು ತಿಂಗಳಿಗೆ ಒಮ್ಮೆ ಊರಿಗೆ ಬಂದು ಹೋಗುತ್ತಿದ್ದೆ. ಇತ್ತ ಪತ್ನಿ (ಸುಚಿತ್ರಾ) ಫೇಸ್ ಬುಕ್ ನಲ್ಲಿ ಹುಡುಗರ ಜೊತೆ ಪತ್ನಿ ಸಂಪರ್ಕ ಹೊಂದಿದ್ದಳು. ದೀಪು ಎನ್ನುವನ ಜೊತೆ ಸಂಪರ್ಕ ಹೊಂದಿರುವ ವಿಷಯ ನನಗೆ ಗೊತ್ತಾಯಿತು. ಬಳಿಕ ಈ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಅವಳು ಜಗಳ ಮಾಡಿದ್ದಳು. ಆಗ ಅದರ ನಾಯಿ ಬುದ್ದಿ ಬೇಡ ಅಂತ ಸುಮ್ಮನಾದೆ ಎಂದು ಹೆಂಡ್ತಿ ಸುಚಿತ್ರಾಳ ಕಳ್ಳಾಟವನ್ನು ಬಿಚ್ಚಿಟ್ಟರು.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಓರ್ವ ಸಾವು

ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಮಹೇಶ್


ಕಳೆದ ಐದು ತಿಂಗಳ ಹಿಂದೆ ನನ್ನ ಎರಡು ಹೆಣ್ಣು ಮಕ್ಕಳನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ
ಜ್ಯೋತಿಷಿ ಜೊತೆ ಸೆಟ್ಲ್ ಆಗಿದ್ದಾಳೆ. ಆತನ ಜೊತೆ ಇದ್ದು ಐದು ತಿಂಗಳು ಆಗಿದೆ. ಆದ್ರೆ, ಮಗಳು ನನಗೆ ಮೆಸೇಜ್ ಹಾಕಿ ತಾಯಿ ಬಗ್ಗೆ ದೂರು ಹೇಳಿದ್ದಳು.ನಾನು ತಾಯಿ ಜೊತೆ ಇರುವುದಿಲ್ಲ ಬಂದು ಕರೆದುಕೊಂಡು ಹೋಗು ಅಂತಾ ಹೇಳಿದ್ದಳು. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಆಗ ವಾಪಸ್ ಊರಿಗೆ ಬಾ ಅಂತಾ ಮಗಳಿಗೆ ಹೇಳಿದ್ದೆ. ಮಗಳು ಸಿದ್ದಾಪುರ ಠಾಣೆಗೆ ಬಂದು ತಾಯಿ ವಿರುದ್ದ ದೂರು ನೀಡಿದ್ದಾಳೆ. ಬಳಿಕ ರಾತ್ರಿ ಪತ್ನಿ ಐವರು ಯುವಕರನ್ನು ಕರೆದುಕೊಂಡು ಬಂದು ನನ್ನ ಮತ್ತು ಅಣ್ಣ ಹಾಗೂ ಸ್ನೇಹಿತನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, ಘಟನೆಯಲ್ಲಿ ಅಣ್ಣ ಮೃತಪಟ್ಟಿದ್ದಾನೆ. ನನಗೂ ಗಂಭೀರ ಗಾಯ ಆಗಿದ್ದು, ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವೆ. ಇನ್ನು ಸ್ನೇಹಿತನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿವಿ ಬಳಿಕ ಚಿತ್ರಮಂದಿರಕ್ಕೆ ಬರಲಿರುವ ಹಾವು – Kannada News | Ektaa Kapoor planning to make movie on Nagin character

ಒಂದು ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಸಿನಿಮಾ (Cinema) ವೀಕ್ಷಕರ ಸಂಖ್ಯೆಗಿಂತಲೂ ಧಾರಾವಾಹಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಟಿವಿ ಧಾರಾವಾಹಿಗಳು ಸಿನಿಮಾಗಳಿಗಿಂತಲೂ ಹೆಚ್ಚು ಹಣ ಗಳಿಸುತ್ತವೆ ಎನ್ನಲಾಗುತ್ತದೆ. ಆದರೆ ಭಾರತದ ಧಾರವಾಹಿಗಳು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿವೆ. ಕ್ಲೀಷೆ ಕತೆಗಳು, ತೀರ ಕಳಪೆ ಮಟ್ಟದ ಚಿತ್ರಕತೆ, ಕಳಪೆ ನಿರ್ಮಾಣ ಮತ್ತು ಪ್ರೊಡಕ್ಷನ್ ಕ್ವಾಲಿಟಿಯನ್ನು ಒಳಗೊಂಡಿರುತ್ತವೆ. ಹಾಗಿದ್ದರೂ ಸಹ ಹಲವಾರು ಧಾರಾವಾಹಿಗಳು ವರ್ಷಾನುಗಟ್ಟಲೆ ಪ್ರದರ್ಶನ ಕಂಡಿವೆ. ಅಂಥಹ ಧಾರಾವಾಹಿಗಳಲ್ಲಿ ‘ನಾಗಿನ್’ ಸಹ ಒಂದು.

ಟಿವಿ ಕ್ವೀನ್ ಎಂದೇ ಕರೆಯಲಾಗುವ ಏಕ್ತಾ ಕಪೂರ್ ನಾಗಿನ್ ಧಾರವಾಹಿಯ ನಿರ್ಮಾಪಕಿ ಆಗಿದ್ದು ಹಿಂದಿಯಲ್ಲಿ ನಾಗಿನ್ ಧಾರಾವಾಹಿ ಏಳು ಸೀಸನ್​ ಪೂರೈಸಿದೆ. ಹಿಂದಿಯ ‘ನಾಗಿನ್’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿದೆ. ಇದೀಗ ಏಕ್ತಾ ಕಪೂರ್, ಧಾರಾವಾಹಿ ಆಗಿದ್ದ ‘ನಾಗಿನ್’ ಅನ್ನು ಸಿನಿಮಾ ರೂಪಕ್ಕೆ ತರಲು ಸಜ್ಜಾಗಿದ್ದಾರೆ. ನಾಗಿನ್​​ಗೆ ಸಿನಿಮಾ ರೂಪ ನೀಡಲು ಏಕ್ತಾ ಸಜ್ಜಾಗಿದ್ದು, ಈ ಬಗ್ಗೆ ಚರ್ಚೆಗಳು ಚಾಲ್ತಿಯಲ್ಲಿವೆ ಎನ್ನಲಾಗುತ್ತಿದೆ.

‘ನಾಗಿನ್’ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ನಿರ್ಮಾಣ ಮಾಡಲು ಏಕ್ತಾ ಕಪೂರ್ ಮುಂದಾಗಿದ್ದಾರೆ. ಧಾರಾವಾಹಿಯಲ್ಲಿ ತೋರಿಸಿದ ಕತೆಗಿಂತಲೂ ಭಿನ್ನವಾದ ಕತೆಯನ್ನು ‘ನಾಗಿನ್’ ಸಿನಿಮಾನಲ್ಲಿ ತೋರಿಸುವ ಉದ್ದೇಶವನ್ನು ಏಕ್ತಾ ಹೊಂದಿದ್ದಾರೆ. ಸಿನಿಮಾಕ್ಕೆ ‘ನಾಗಿನ್: ದಿ ಎಪಿಕ್ ಟೇಲ್ ಆಫ್ ಲವ್ ಆಂಡ್ ಸ್ಯಾಕ್ರಿಫೈಸ್’ ಎಂದು ಹೆಸರಿಡಲಾಗಿದೆಯಂತೆ. ಸಿನಿಮಾನಲ್ಲಿ ನಾಗಿನ್ ಪಾತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಇದೇ ಏಪ್ರಿಲ್​​ನಿಂದ ಸಿನಿಮಾದ ಚಿತ್ರೀಕರಣ ಶುರು ಆಗಲಿದ್ದು, ಸಿನಿಮಾದ ಹಲವು ಭಾಗಗಳು ಸಹ ಮುಂದಿನ ವರ್ಷಗಳಲ್ಲಿ ಬರಲಿದೆ.

ಇದನ್ನೂ ಓದಿ:ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ

ಧಾರಾವಾಹಿಯಲ್ಲಿ ಬಹಳ ಯಶಸ್ವಿ ಆದ ಪಾತ್ರಗಳನ್ನು ಇರಿಸಿಕೊಂಡು ಸಿನಿಮಾ ಮಾಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಭಾರಿ ಜನಪ್ರಿಯ ಆಗಿದ್ದ ‘ಶಕ್ತಿಮಾನ್’ ಧಾರಾವಾಹಿಯನ್ನು ಸಿನಿಮಾ ಮಾಡುವ ಚರ್ಚೆ ಬಾಲಿವುಡ್​​ನಲ್ಲಿ ಆಗಿತ್ತು. ಆದರೆ ಆ ಚರ್ಚೆ ಮುಂದುವರೆಯಲಿಲ್ಲ. ಧಾರಾವಾಹಿಗಳಾಗಿದ್ದ ‘ಮಹಾಭಾರತ’, ‘ರಾಮಾಯಣ’ಗಳನ್ನು ಈಗಾಗಲೇ ಸಿನಿಮಾ ಮಾಡಲಾಗಿದೆ. ಇದೀಗ ‘ನಾಗಿನ್’ ಧಾರಾವಾಹಿಯನ್ನು ಸಿನಿಮಾ ಮಾಡಲು ಯೋಜನೆ ಸಿದ್ಧವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಂಎಸ್​ಎಂಇಗಳನ್ನು ಬಲಪಡಿಸುವ ರವಿಚಂದ್ರರ IND Classifieds; ಇದು ಹೈಪರ್​ಲೋಕಲ್ ಪವರ್​ಹೌಸ್ – Kannada News | Building a hyperlocal powerhouse: Founder Ravi Chandra’s vision for IND Classifieds and MSMEs

ಬೆಂಗಳೂರು: ಭಾರತದ ಆನ್ಲೈನ್ ಪ್ರಪಂಚ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲೇ ಸ್ಥಳೀಯ ಅಂಗಡಿಗಳು, ಸಣ್ಣ ಉದ್ಯಮಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಷ್ಟಪಡುತ್ತಿವೆ. ಗ್ರಾಹಕರನ್ನು ಆಕರ್ಷಿಸಲು, ತಂತ್ರಜ್ಞಾನ ವೆಚ್ಚ ನಿಭಾಯಿಸಲು ಪರದಾಡುತ್ತಿವೆ. ಈ ಸಂದರ್ಭದಲ್ಲಿ ಆನ್​ಲೈನ್ ಪ್ರಪಂಚದ ವಿಸ್ತಾರದ ಮಧ್ಯೆ ಸ್ಥಳೀಯ ಬ್ಯುಸಿನೆಸ್​ಗಳು ಎದ್ದು ಕಾಣುವ ರೀತಿಯಲ್ಲಿ ನೆರವಾಗುವಂತಹ ಕೆಲಸವನ್ನು ಮಾಡುತ್ತಿದೆ. ಇದರ ಸಂಸ್ಥಾಪಕರು ರವಿಚಂದ್ರ. ರವಿಚಂದ್ರ ಅವರು ಉದ್ದಿಮೆಗಾರಿಕೆಯ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಹೊಸ ದೃಷ್ಟಿಯಲ್ಲಿ ಯೋಚಿಸತೊಡಗಿದರು. ಅದರ ಪರಿಣಾಮವೇ IND Classifieds ಎನ್ನುವ ಪ್ಲಾಟ್​ಫಾರ್ಮ್ ರೂಪಿಸಿದ್ದು. ಜನರಿಗೆ ಆನ್​ಲೈನ್​ನಲ್ಲಿ ಏನು ಬೇಕೋ ಅದನ್ನು ಹುಡುಕುವ ವಿಧಾನದಲ್ಲಿ ಬದಲಾವಣೆ ತಂದರು. ದೊಡ್ಡ ಮಟ್ಟದಲ್ಲಿ ಅದನ್ನು ಆರಂಭಿಸುವ ಬದಲು ನೈಜ ಅನುಭವಗಳ ಆಧಾರದ ಮೇಲೆ ಪ್ಲಾಟ್​ಫಾರ್ಮ್ ಕಟ್ಟತೊಡಗಿದರು.

ದೊಡ್ಡ ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಗಮನ ಸೆಳೆಯುತ್ತವೆ. ಆದರೆ ಅವುಗಳೊಂದಿಗೆ ಜೋಡಿತವಾಗಲು ಹಣ, ಕೌಶಲ್ಯ ಮತ್ತು ಸಮಯ ಬೇಕು. ಸಣ್ಣ ಬ್ಯುಸಿನೆಸ್​ಗಳಿಗೆ ಇದು ಕಷ್ಟ. ಇದನ್ನು ಗಮನಿಸಿದ ರವಿಚಂದ್ರ ಅವರಿಗೆ ಒಂದು ಸರಳ ವಿಧಾನದ ಅಗತ್ಯ ಬೇಕು ಎನಿಸಿತು. ಬಹಳ ಕಡಿಮೆ ವೆಚ್ಚದ, ಸುಲಭ ಬಳಕೆ ಸಾಧ್ಯವಾಗುವಂತಹ ಮತ್ತು ಸ್ಥಳೀಯತೆಯನ್ನು ತೋರುವಂತಹ ಪ್ಲಾಟ್​ಫಾರ್ಮ್ ನಿರ್ಮಾಣಕ್ಕೆ ಇದು ಎಡೆ ಮಾಡಿಕೊಟ್ಟಿತು. ಇಲ್ಲಿ ಜನರು ತಾವು ಮಾರಾಟ ಮಾಡಲಿರುವ ಉತ್ಪನ್ನಗಳನ್ನು ಪೋಸ್ಟ್ ಮಾಡಬಹುದು. ಸಮೀಪದ ಗ್ರಾಹಕರಿಗೆ ಮಾತ್ರವೇ ಇದು ಕಾಣಿಸುತ್ತದೆ. ಬೇಡವಾಗಿರುವ ಇತರ ಪ್ರದೇಶಗಳಲ್ಲಿನ ಜನರಿಗೆ ಈ ಉತ್ಪನ್ನ ಕಾಣುವ ಬದಲು, ಸ್ಥಳೀಯ ಗ್ರಾಹಕರಿಗೆ ಮಾತ್ರವೇ ಗೋಚರಿಸುವಂತೆ ಮಾಡುವುದು ಇವರ ಪ್ಲಾಟ್​ಫಾರ್ಮ್​ನವಿಶೇಷತೆಯಾಗಿದೆ. ಇದರಿಂದ ಅನವಶ್ಯಕ ಸದ್ದು ತಪ್ಪುತ್ತದೆ. ಅವಶ್ಯಕತೆ ಇದ್ದವರಿಗೆ ಮಾತ್ರ ತಲುಪುತ್ತದೆ. ಹೀಗಾಗಿ, ಅಂಗಡಿ ಅಥವಾ ಬ್ಯುಸಿನೆಸ್ ಅನ್ನು ಗ್ರಾಹಕರು ಸಂಪರ್ಕಿಸುವ ಸಾಧ್ಯತೆ ಹೆಚ್ಚಿರುತ್ತದೆ. ದೂರ ಎನ್ನುವುದು ಸೂಕ್ತವಾಗಿದ್ದಾಗ, ವಿಶ್ವಾಸ ಸುಲಭವಾಗಿ ಬೆಳೆಯುತ್ತದೆ, ಫಲಿತಾಂಶ ವೇಗವಾಗಿ ಸಿಕ್ಕುತ್ತದೆ.

ಈ IND Classifieds ಪ್ಲಾಟ್​ಫಾರ್ಮ್​ನ ವಿಶೇಷತೆ ಇರುವುದು, ಎಂಎಸ್​ಎಂಇಗಳ ಮೇಲಿನ ಅದರ ಗಮನದಿಂದಾಗಿ. ಸಣ್ಣ ಬ್ಯುಸಿನೆಸ್ ಮಾಲೀಕರಿಗೆ ಹೊಸ ಬ್ಯುಸಿನೆಸ್ ಆರಂಭಿಸುವುದು ಸವಾಲಿನ ಕೆಲಸವಾಗಿರುತ್ತದೆ. ಜಾಹೀರಾತು ವೆಚ್ಚ, ತಾಂತ್ರಿಕ ಜ್ಞಾನದ ಕೊರತೆಯು ಹಿನ್ನಡೆ ಎನಿಸುತ್ತದೆ. IND Classifieds ನಲ್ಲಿ ಸರಳವಾದ ನೊಂದಣಿ ಪ್ರಕ್ರಿಯೆ ಇರುತ್ತದೆ. ದೊಡ್ಡ ಪ್ಲಾಟ್​ಫಾರ್ಮ್​ಗಳಿಗೆ ನೀಡಲಾಗುವಂತೆ ಇದು ಹೆಚ್ಚು ಹಣದ ಹೊರೆ ಹೊರಿಸುವುದಿಲ್ಲ. ತಂತ್ರಜ್ಞಾನ ಬಳಕೆಯಲ್ಲಿ ಅನುಭವ ಇಲ್ಲದವರೂ ಕೂಡ ಸುಲಭವಾಗಿ ಮತ್ತು ವೇಗವಾಗಿ ಆನ್​ಲೈನ್ ಉಪಸ್ಥಿತಿ ಪಡೆಯಬಹುದು. ಹೆಚ್ಚು ಖರ್ಚು ಮಾಡದೆಯೇ ಗ್ರಾಹಕರನ್ನು ಸೆಳೆಯಬಹುದು. ರವಿಚಂದ್ರ ಅವರಿಗೆ ಕ್ಲಾಸಿಫೈಡ್ ಸೈಟ್ ಆರಂಭಿಸುವ ಉದ್ದೇಶ ಮಾತ್ರವೇ ಅಲ್ಲ, ಸಣ್ಣ ಬ್ಯುಸಿನೆಸ್​ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಶಕ್ತಿ ತುಂಬುವುದು ಧ್ಯೇಯವಾಗಿತ್ತು. ತಮ್ಮ ಪ್ಲಾಟ್​ಫಾರ್ಮ್​ಗೆ ಲಾಭದ ಗುರಿ ಇಟ್ಟುಕೊಳ್ಳದೆ ಅವರು ಸ್ಥಳೀಯ ಉದ್ದಿಮೆದಾರರ ವಿಶ್ವಾಸ ಗಳಿಸುವುದಕ್ಕೆ ಆದ್ಯತೆ ಕೊಟ್ಟರು. ಇಲ್ಲಿ ಬದಲಾವಣೆ ಬಹಳ ನಿಧಾನವಾಗಿ ಬರುತ್ತದೆ. ಬಳಸಿದವರು ತೃಪ್ತರಾಗಿ, ಕ್ರಮೇಣವಾಗಿ ಪ್ಲಾಟ್​ಫಾರ್ಮ್ ವಿಶ್ವಾಸಾರ್ಹತೆ ಹೆಚ್ಚಾಗುತ್ತಾ ಹೋಗುತ್ತದೆ. ಇವತ್ತು IND Classifieds ಎಂಬುದು ಒಂದು ಡೈರೆಕ್ಟರಿ ಮಾತ್ರವೇ ಆಗಿ ಉಳಿದಿಲ್ಲ, ಸಣ್ಣ ಉದ್ದಿಮೆಗಳನ್ನು ನೇರವಾಗಿ ಬೆಂಬಲಿಸುವ ಪ್ಲಾಟ್​ಫಾರ್ಮ್ ಆಗಿದೆ.

ಭಾರತದಲ್ಲಿ ಹೆಚ್ಚೆಚ್ಚು ಜನರು ಮೊಬೈಲ್ ಮತ್ತು ಆನ್ಲೈನ್ ಸಾಧನಗಳನ್ನು ಬಳಸುವುದು ಹೆಚ್ಚಾದಂತೆ ಸ್ಥಳೀಯ ಮಾರುಕಟ್ಟೆಗಳ ಪ್ಲಾಟ್​ಫಾರ್ಮ್​ಗಳ ಪ್ರಾಮುಖ್ಯತೆ ಹೆಚ್ಚುತ್ತಿದೆ. IND Classifieds ಸೂಕ್ತ ಎನಿಸುವುದು ಇಲ್ಲೆ. ಸಣ್ಣ ಅಂಗಡಿಗಳು ತಮ್ಮ ಸಾಯುದಾಯಿಕ ಬೇರುಗಳನ್ನು ಒಳಗೊಂಡೇ ಅವರನ್ನು ಡಿಜಿಟಲ್ ಪ್ರಪಂಚಕ್ಕೆ ತರುವ ಕೆಲಸ ಮಾಡುತ್ತದೆ IND Classifieds. ಹೆಲ್ತ್​ಕೇರ್, ಆಹಾರ, ಶಾಪಿಂಗ್, ಕೌಶಲ್ಯದ ಕೆಲಸ ಇತ್ಯಾದಿ ಬಹಳಷ್ಟು ಕೆಟಗರಿಗಳನ್ನು ಈ ಪ್ಲಾಟ್​ಫಾರ್ಮ್​ನಲ್ಲಿ ನೋಡಬಹುದು.

ಮುಂದಿನ ದಿನಗಳಲ್ಲಿ, IND Classifieds ಬಲಿಷ್ಠ ತಂತ್ರಜ್ಞಾನ ವ್ಯವಸ್ಥೆಗಳು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತೃತ ಹಾಜರಾತಿ, ಹಾಗೆಯೇ ಸಣ್ಣ ತಯಾರಕರು ಮತ್ತು ಅಂಗಡಿಗಳಿಗೆ ಇನ್ನಷ್ಟು ಆಳವಾದ ಸ್ಥಳೀಯ ಗಮನವನ್ನು ಉದ್ದೇಶಿಸಿದೆ. ಬೆಳವಣಿಗೆ ಇದ್ದರೂ, ಮನೆಮಾತಾಗಿರುವ ಉದ್ಯಮಿಗಳಿಗೆ ಸುಲಭ ಪ್ರವೇಶ ಎಂಬ ಮೂಲತತ್ತ್ವವನ್ನು ಕಳೆದುಕೊಳ್ಳದೇ ಮುಂದುವರಿಯುವುದು ಇದರ ಗುರಿ. ಆನ್‌ಲೈನ್ ಮಾರುಕಟ್ಟೆಯಲ್ಲಿ ಹೊಸ ಆಟಗಾರರು ಬಂದರೂ, ಪ್ರತಿಯೊಂದು ಸಮುದಾಯದಲ್ಲಿಯೂ ಸ್ಪಷ್ಟ ಮತ್ತು ನೆಲೆಯೂರಿದ ಹಾಜರಾತಿ ಇದನ್ನು ವಿಭಿನ್ನವಾಗಿರಿಸುತ್ತದೆ.

ಸಣ್ಣ ಕನಸುಗಳಿಂದ ಆರಂಭವಾದ IND Classifieds, ಅನೇಕ ಭಾರತೀಯ ಉದ್ಯಮಿಗಳ ಆಶೆಯನ್ನು ಪ್ರತಿಧ್ವನಿಸುತ್ತದೆ — ಕಾಣಿಸಿಕೊಳ್ಳುವುದು, ಅವಕಾಶಗಳನ್ನು ಕಂಡುಕೊಳ್ಳುವುದು, ದೀರ್ಘಕಾಲ ಬಲವಾಗಿರುವುದು. ರವಿ ಚಂದ್ರ ಅವರ ನಾಯಕತ್ವದಲ್ಲಿ, ಈ ಸೇವೆ ನಿಧಾನವಾಗಿ ಸ್ಥಳೀಯ ಪ್ರಯತ್ನಗಳನ್ನು ಪ್ರಾದೇಶಿಕ ಶಕ್ತಿಯಾಗಿ ರೂಪಿಸುತ್ತಿದೆ; ಸಣ್ಣ ಮಾರಾಟಗಾರರು ಮತ್ತು ನಿರ್ಮಾತೃಗಳಿಗೆ ಆನ್‌ಲೈನ್ ಜೀವನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತಿದೆ. ನೆರೆಹೊರೆಯ ಉದ್ಯಮಗಳು ಡಿಜಿಟಲ್ ವಿಶ್ವಾಸ ಗಳಿಸಿದಾಗಲೇ ಒಂದು ದೇಶ ಹೇಗೆ ಸಮೃದ್ಧಿಯಾಗುತ್ತದೆ ಎಂಬುದಕ್ಕೆ ಇದು ಜೀವಂತ ಉದಾಹರಣೆ.

(ಗಮನಿಸಿ: ಇದು ಪ್ರಾಯೋಜಿತ ಸುದ್ದಿ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಲ್ಲುಜ್ಜಲು ಎಷ್ಟು ಪ್ರಮಾಣದ ಟೂತ್‌ಪೇಸ್ಟ್‌ ಬಳಸುವುದು ಸೂಕ್ತ? – Kannada News | Do you know how much toothpaste you should use to brush your teeth?

ಆರೋಗ್ಯದ ದೃಷ್ಟಿಯಿಂದ ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮೊದಲು ಹಲ್ಲುಜ್ಜಲೇಬೇಕು. ಇದು  ಹಲ್ಲು ಮತ್ತು ಒಸಡುಗಳನ್ನು ಆರೋಗ್ಯವಾಗಿಡುತ್ತದೆ ಜೊತೆಗೆ ಬಾಯಿಯಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕುತ್ತದೆ. ಹೀಗೆ ಹಲ್ಲುಜ್ಜುವ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಟೂತ್‌ಪೇಸ್ಟ್‌  (toothpaste) ಬಳಕೆ ಮಾಡುವ ಅಭ್ಯಾಸ ನಮ್ಮಲ್ಲಿ ಹಲವರಿಗೆ ಇದೆ. ಹೌದು ಹಲ್ಲು ಕ್ಲೀನ್‌ ಆಗುತ್ತೆ, ಬಿಳಿಯಾಗುತ್ತೆ ಅನ್ನೋ ಕಾರಣಕ್ಕೆ ಹಲವರು ಹೆಚ್ಚು ಟೂತ್‌ಪೇಸ್ಟ್‌ ಬಳಸುತ್ತಾರೆ. ನಿಜಕ್ಕೂ ಇದು ಸೂಕ್ತವೇ? ಹಲ್ಲುಜ್ಜುವಾಗ ಎಷ್ಟು ಪ್ರಮಾಣದಲ್ಲಿ ಟೂತ್‌ಪೇಸ್ಟ್‌ ಬಳಕೆ ಮಾಡಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಹಲ್ಲುಜ್ಜಲು ಎಷ್ಟು ಟೂತ್‌ಪೇಸ್ಟ್ ಬಳಸಬೇಕು?

ತಜ್ಞರ ಪ್ರಕಾರ, ನಿಮ್ಮ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಹೆಚ್ಚು ಟೂತ್‌ಪೇಸ್ಟ್ ಅಗತ್ಯವಿಲ್ಲ. ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಡಲು ಒಂದು ಬಟಾಣಿ ಗಾತ್ರದ ಟೂತ್‌ಪೇಸ್ಟ್ ಸಾಕು. ಈ ಪ್ರಮಾಣವು ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ ಮತ್ತು ನಿಮ್ಮ ಬಾಯಿಯನ್ನು ತಾಜಾವಾಗಿರಿಸುತ್ತದೆ. ವಾಸ್ತವವಾಗಿ, ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಟೂತ್‌ಪೇಸ್ಟ್‌ನ ಪ್ರಮಾಣವನ್ನು ಅವಲಂಬಿಸಿರುವುದಿಲ್ಲ, ಬದಲಿಗೆ ಹಲ್ಲುಜ್ಜುವ ಸರಿಯಾದ ವಿಧಾನ ಮತ್ತು ಸಮಯವನ್ನು ಅವಲಂಬಿಸಿರುತ್ತದೆ.

ಮಕ್ಕಳಿಗೆ ಎಷ್ಟು ಟೂತ್‌ಪೇಸ್ಟ್ ಸೂಕ್ತ?

ಮಕ್ಕಳ ವಿಷಯದಲ್ಲಿ, ಹೆಚ್ಚಿನ ಎಚ್ಚರಿಕೆ ಅಗತ್ಯ. ಚಿಕ್ಕ ಮಕ್ಕಳು ಹಲ್ಲುಜ್ಜುವಾಗ ಹೆಚ್ಚಾಗಿ ಟೂತ್‌ಪೇಸ್ಟ್ ಅನ್ನು ನುಂಗುತ್ತಾರೆ, ಇದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವೈದ್ಯರ ಪ್ರಕಾರ, ಮಕ್ಕಳಿಗೆ ಅಕ್ಕಿ ಗಾತ್ರದ ಟೂತ್‌ಪೇಸ್ಟ್ ಸಾಕು. ಇದು ಅವರ ಹಲ್ಲುಗಳನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಟೂತ್‌ಪೇಸ್ಟ್ ನುಂಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಪೋಷಕರು ಮಕ್ಕಳು ಹಲ್ಲುಜ್ಜುವಾಗ ಮೇಲ್ವಿಚಾರಣೆ ಮಾಡಬೇಕು ಮತ್ತು ಸರಿಯಾದ ಪ್ರಮಾಣದ ಪೇಸ್ಟ್ ಅನ್ನು ಬಳಸಲು ಅವರಿಗೆ ಕಲಿಸಬೇಕು.

ಹಲ್ಲುಜ್ಜುವ ಸರಿಯಾದ ವಿಧಾನ ಯಾವುದು?

ನೀವು ಹಲ್ಲುಜ್ಜುವ ವಿಧಾನವೂ ಬಹಳ ಮುಖ್ಯ. ನಿಮ್ಮ ಹಲ್ಲುಗಳನ್ನು ಆರೋಗ್ಯವಾಗಿಡಲು, ನೀವು ದಿನಕ್ಕೆ ಎರಡು ಬಾರಿ, ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಜ್ಜಬೇಕು. ಪ್ರತಿ ಬಾರಿ ಕನಿಷ್ಠ ಎರಡು ನಿಮಿಷಗಳ ಕಾಲ ಆರಾಮವಾಗಿ ಹಲ್ಲುಜ್ಜಿ. ನಿಮ್ಮ ಹಲ್ಲುಗಳ ಮೇಲೆ ವೃತ್ತಾಕಾರದ ಚಲನೆಯಲ್ಲಿ ಬ್ರಷ್ ಅನ್ನು ನಿಧಾನವಾಗಿ ಸರಿಸಿ, ಇದರಿಂದ ಒಸಡುಗಳು ಸಹ ಚೆನ್ನಾಗಿ ಸ್ವಚ್ಛವಾಗುತ್ತವೆ. ಹೆಚ್ಚು ಬಲದಿಂದ ವೇಗವಾಗಿ ಹಲ್ಲುಜ್ಜುವುದರಿಂದ ನಿಮ್ಮ ಹಲ್ಲು ಮತ್ತು ಒಸಡುಗಳಿಗೆ ಹಾನಿಯಾಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಮಾಡುವ ತಪ್ಪುಗಳು ನಿಮ್ಮ ನಿದ್ರೆಗೆ ಭಂಗ ತರಬಹುದು ಎಚ್ಚರ!

ಹೆಚ್ಚು ಟೂತ್‌ಪೇಸ್ಟ್ ಬಳಸುವುದರಿಂದ ಹಲ್ಲುಗಳಿಗೆ ಹಾನಿಯಾಗಬಹುದೇ?

ಹೆಚ್ಚು ಟೂತ್‌ಪೇಸ್ಟ್ ಹಚ್ಚುವುದರಿಂದ ಹಲ್ಲುಗಳು ಚೆನ್ನಾಗಿ ಹೊಳೆಯುತ್ತವೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ, ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ. ನಿಮ್ಮ ಬ್ರಷ್‌ಗೆ ಹೆಚ್ಚು ಟೂತ್‌ಪೇಸ್ಟ್ ಹಚ್ಚಿದಾಗ, ನಿಮ್ಮ ಬಾಯಿಯಲ್ಲಿ ಬಹಳಷ್ಟು ನೊರೆ ಬರುತ್ತದೆ. ಈ ಹೆಚ್ಚು ನೊರೆ ಎರಡು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮೊದಲನೆಯದಾಗಿ, ನೊರೆಯಿಂದಾಗಿ, ನೀವು ತುಂಬಾ ಬೇಗನೆ ಹಲ್ಲುಜ್ಜಲು ಪ್ರಾರಂಭಿಸುತ್ತೀರಿ ಮತ್ತು ನಿಮ್ಮ ಹಲ್ಲುಗಳು ಸರಿಯಾಗಿ ಸ್ವಚ್ಛಗೊಳ್ಳುವುದಿಲ್ಲ. ಎರಡನೆಯದಾಗಿ, ಹೆಚ್ಚುವರಿ ನೊರೆಯಿಂದಾಗಿ, ಬ್ರಷ್ ಫೈಬರ್‌ಗಳು ಹಲ್ಲು ಮತ್ತು ಒಸಡುಗಳನ್ನು ಸರಿಯಾಗಿ ತಲುಪುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಹೆಚ್ಚು ಟೂತ್‌ಪೇಸ್ಟ್ ಕಿರಿಕಿರಿ ಉಂಟು ಮಾಡುತ್ತದೆ ಮತ್ತು ಹಲ್ಲಿನ ಮೇಲಿನ ಪದರಕ್ಕೆ ಹಾನಿಯನ್ನುಂಟುಮಾಡುತ್ತದೆ.

ಜಾಹೀರಾತುಗಳಲ್ಲಿ ಏಕೆ ಬ್ರಶ್‌ ಪೂರ್ತಿ  ಪೇಸ್ಟ್ ಹಚ್ಚಿರುವುದನ್ನು ತೋರಿಸುವುದು?

ಟೂತ್‌ಪೇಸ್ಟ್ ಜಾಹೀರಾತುಗಳಲ್ಲಿ ಬ್ರಷ್‌ನಲ್ಲಿ  ಪೂರ್ತಿ ಉದ್ದಕ್ಕೆ ಟೂತ್‌ಪೇಸ್ಟ್‌ ಹರಡಿರುವುದನ್ನು ನೀವು ನೋಡಿರುತ್ತೀರಿ ಅಲ್ವಾ. ಇದನ್ನೇ ನೋಡಿ ಹಲವರು ತಾವು ಕೂಡ ಹಲ್ಲುಜ್ಜಲು ಜಾಸ್ತಿ ಪ್ರಮಾಣದ ಟೂತ್‌ಪೇಸ್ಟ್‌ ಬಳಸುತ್ತಾರೆ.  ಜಾಹೀರಾತುಗಳಲ್ಲಿ ಹೀಗೆ ತೋರಿಸುವುದರ ಹಿಂದಿನ  ಕಾರಣ ಹಲ್ಲಿನ ಆರೋಗ್ಯವಲ್ಲ, ಬದಲಾಗಿ ಮಾರ್ಕೆಟಿಂಗ್. ಕಂಪನಿಗಳು ಜನರು ಹೆಚ್ಚು ಟೂತ್‌ಪೇಸ್ಟ್ ಬಳಸಬೇಕೆಂದು ಬಯಸುತ್ತವೆ, ಇದರಿಂದ ಪೇಸ್ಟ್ ಬೇಗನೆ ಖಾಲಿಯಾಗುತ್ತದೆ ಮತ್ತು ಅವರು ಆಗಾಗ್ಗೆ ಹೊಸ ಪ್ಯಾಕ್‌ಗಳನ್ನು ಖರೀದಿಸಬೇಕಾಗುತ್ತದೆ. ಇದರಿಂದ ಹೆಚ್ಚು ಟೂತ್‌ಪೇಸ್ಟ್ ಮಾರಾಟವಾಗುತ್ತದೆ ಮತ್ತು ಕಂಪನಿಯ ಗಳಿಕೆ ಹೆಚ್ಚಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವುಗಳು ರಕ್ಷಣೆ, ಕೆಲವು ಹಸುಗಳು ಮೃತಪಟ್ಟಿರುವ ಶಂಕೆ – Kannada News | Mulbagal Cow Rescue: Gorakshakas Intercept Cruel Transport from Hyderabad to Bengaluru

ಕೋಲಾರ, ಫೆ.3: ಹೈದರಾಬಾದ್‌ನಿಂದ ಬೆಂಗಳೂರಿಗೆ ಅಕ್ರಮವಾಗಿ ಕಂಟೇನರ್‌ನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 70ಕ್ಕೂ ಹೆಚ್ಚು ಗೋವುಗಳನ್ನು ಮುಳಬಾಗಿಲು ತಾಲೂಕಿನ ಹನುಮನಹಳ್ಳಿ ಟೋಲ್ ಬಳಿ ಗೋರಕ್ಷಕರು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹನುಮನಹಳ್ಳಿ ಟೋಲ್ ಬಳಿ ಇಂದು (ಫೆ.3) ಸಂಜೆ ಈ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಬೆಂಗಳೂರಿನ ಕಸಾಯಿಖಾನೆಗೆ ಅತಿ ಕ್ರೂರವಾಗಿ ಕಂಟೇನರ್‌ನಲ್ಲಿ ಗೋವುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗೋರಕ್ಷಕ ದಳ ಹಾಗೂ ಭಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದರು. ಮುಚ್ಚಿದ ಕಂಟೇನರ್‌ನಲ್ಲಿ ಗಾಳಿ, ಬೆಳಕು, ಆಹಾರ ಮತ್ತು ನೀರಿಲ್ಲದೆ ಸುಮಾರು 70ಕ್ಕೂ ಹೆಚ್ಚು ದೇಸೀ ತಳಿಯ ಹಸುಗಳನ್ನು ತುಂಬಲಾಗಿತ್ತು. ದೀರ್ಘ ಪ್ರಯಾಣದ ಆಯಾಸ ಮತ್ತು ಉಸಿರುಗಟ್ಟಿಸುವ ವಾತಾವರಣದಿಂದಾಗಿ ಕಂಟೇನರ್‌ನಲ್ಲೇ ಕೆಲವು ಹಸುಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕಂಟೇನರ್ ತೆರೆದಾಗ ಗೋವುಗಳ ದಯನೀಯ ಸ್ಥಿತಿ ಕಂಡು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ರಾಜಿ ಮಾಡಿಕೊಂಡು ರಾಷ್ಟ್ರವನ್ನೇ ಮಾರಿದ್ದಾರೆ; ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ – Kannada News | PM Modi is compromised, sold the nation Rahul Gandhi lashes out on US trade deal

ನವದೆಹಲಿ, ಫೆಬ್ರವರಿ 3: ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಭಾರಿ ಗದ್ದಲ ಭುಗಿಲೆದ್ದಿತು. ಚೀನಾದ ವಿಷಯದ ಕುರಿತು ರಾಹುಲ್ ಗಾಂಧಿಯವರ ಭಾಷಣವನ್ನು ವಿರೋಧಿಸಿದ್ದರಿಂದ ಎರಡೂ ಕಡೆಯವರು ಗದ್ದಲ ಮಾಡುತ್ತಲೇ ಇದ್ದರು. ತನಗೆ ಮಾತನಾಡಲು ಬಿಡದಿದ್ದಕ್ಕೆ ಆಕ್ರೋಶಗೊಂಡ ರಾಹುಲ್ ಗಾಂಧಿ, “ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ವಿರೋಧ ಪಕ್ಷದ ನಾಯಕ. ಸದನದಲ್ಲಿ ಮಾತನಾಡುವುದು ನನ್ನ ಹಕ್ಕಾಗಿದ್ದರೂ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ” ಎಂದು ಹೇಳಿದ್ದಾರೆ. ಅಮೆರಿಕದೊಂದಿಗಿನ ಒಪ್ಪಂದದ ಕುರಿತು ಪ್ರಧಾನಿ ಮೋದಿ ಒತ್ತಡದಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಪ್ರಧಾನಿ ಮೋದಿಯವರು ಗೊಂದಲಕ್ಕೊಳಗಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಯುಎಸ್-ಭಾರತ ವ್ಯಾಪಾರ ಒಪ್ಪಂದಕ್ಕೆ ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಅವರ ಮೇಲೆ ತೀವ್ರ ಒತ್ತಡವಿದೆ. ಇದು ನರೇಂದ್ರ ಮೋದಿಯವರ ಇಮೇಜ್‌ಗೆ ಹಾನಿಯಾಗಬಹುದು ಎಂದು ಅವರು ಆತಂಕಗೊಂಡಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆ ಅಧಿವೇಶನದಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದ 8 ಸಂಸದರ ಅಮಾನತು

ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಹೇಳುವ ಸಮಯದಲ್ಲಿ ಸತತ ಎರಡನೇ ದಿನವೂ ಚೀನಾ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿದ್ದರಿಂದ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗದ ಕಾರಣ ರಾಹುಲ್ ಗಾಂಧಿ ಕೋಪಗೊಂಡರು. ಭಾರತ-ಚೀನಾದ ಸಂಬಂಧಗಳ ಕುರಿತಾದ ಲೇಖನವನ್ನು ಉಲ್ಲೇಖಿಸಿ, ಹಿಂದಿನ ತೀರ್ಪು ಮತ್ತು ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿದ್ದಕ್ಕೆ ರಾಹುಲ್ ಗಾಂಧಿಯವರಿಗೆ ಅವಕಾಶ ನೀಡಲು ನಿರಾಕರಿಸಲಾಯಿತು.

“ನಮ್ಮ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ಯೋಚಿಸಬೇಕು. ಮೊದಲ ಬಾರಿಗೆ, ವಿರೋಧ ಪಕ್ಷದ ನಾಯಕನಿಗೆ ಈ ಸದನದಲ್ಲಿ ರಾಷ್ಟ್ರಪತಿಗಳ ಭಾಷಣದ ಬಗ್ಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನರೇಂದ್ರ ಮೋದಿ ಅವರು ರಾಜಿ ಮಾಡಿಕೊಂಡ ಕಾರಣದಿಂದ ಈ ವ್ಯಾಪಾರ ಒಪ್ಪಂದದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಮಾರಾಟ ಮಾಡಿದ್ದಾರೆ. ಅವರು ದೇಶವನ್ನೇ ಮಾರಿದ್ದಾರೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ಪ್ರಕಟವಾಗದ ಪುಸ್ತಕದಲ್ಲಿರುವ ವಿಷಯ ಉಲ್ಲೇಖಿಸಲು ಹೋಗಿ ಸದನದ ಬಾಯಿಗೆ ಆಹಾರವಾದ್ರಾ ರಾಹುಲ್ ಗಾಂಧಿ

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ನಾವು ರಾಹುಲ್ ಗಾಂಧಿಯವರ ಮಾತು ಕೇಳಲು ಬಯಸಿದ್ದೆವು. ಆದರೆ ಅವರು ಒಂದೇ ಮಾತನ್ನು ಪದೇ ಪದೇ ಪುನರಾವರ್ತಿಸುತ್ತಿದ್ದಾರೆ. ಅವರು ನಿಯಮಗಳನ್ನು ಪಾಲಿಸಬೇಕು. ಅವರು ಒಂದೇ ಮಾತನ್ನು ಪದೇ ಪದೇ ಪುನರಾವರ್ತಿಸುವಂತಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ನನಗೆ ಯಾರು ಶತ್ರುಗಳಿಲ್ಲ, ಇರೋದೆಲ್ಲ ಶಕುನಿಗಳೆ; ವೈರಲ್ ಆಯ್ತು ಆಟೋ ಹಿಂಬದಿ ಬರೆದ ಸಾಲುಗಳು – Kannada News | The line written on the back of the auto, reddit post goes viral

ನೀವು ಆಟೋ, ಬೈಕ್ ಅಥವಾ ಕಾರಿನ ಹಿಂಭಾಗದಲ್ಲಿ ಕೆಲ ತಮಾಷೆಭರಿತ ಅಥವಾ ಅರ್ಥಪೂರ್ಣ ಸಾಲುಗಳನ್ನು ನೋಡಿರಬಹುದು. ಕೆಲವರು ತಮ್ಮ ವಾಹನದ ಹಿಂಭಾಗದಲ್ಲಿ ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಯ ಹೆಸರು ಹೀಗೆ ಕೆಲ ಸಾಲುಗಳನ್ನು ಬರೆದಿರುತ್ತಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ (Auto driver) ತನ್ನ ಆಟೋದ ಹಿಂಬದಿಯಲ್ಲಿ ಬರೆದ ಸಾಲುಗಳಲ್ಲಿ ಶಕುನಿಗಳನ್ನು ನೆನಪಿಸಿಕೊಂಡಿದ್ದಾನೆ. ನನಗೆ ಯಾರು ಶತ್ರುಗಳು ಇಲ್ಲ, ಇರೋದೆಲ್ಲ ಶಕುನಿಗಳೆ ಎಂದು ಬರೆದ ಸಾಲೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಆರ್‌/ ಬೆಂಗಳೂರು (r/Bengaluru) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಆಟೋ ಹಿಂಬದಿ ಬರೆದ ಬರಹವನ್ನು ಹಂಚಿಕೊಳ್ಳಲಾಗಿದೆ. ಈ ಆಟೋದ ಹಿಂಬದಿ, ‘ನನಗೆ ಯಾರು ಶತ್ರುಗಳು ಇಲ್ಲ, ಇರೋದೆಲ್ಲ ಶಕುನಿಗಳೆ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ ಸಂಪಾದಿಸುವ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಎಂತಹ ಅದ್ಭುತ ಮಾತು ಎಂದಿದ್ದಾರೆ. ಮತ್ತೊಬ್ಬರು ವಾವ್ ಅದ್ಭುತ ಬ್ರದರ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಸತ್ಯವಾದ ಮಾತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:19 pm, Tue, 3 February 26

Source link

India Post Recruitment 2026: 10th ಪಾಸಾದವರಿಗೆ ಲಿಖಿತ ಪರೀಕ್ಷೆಯಿಲ್ಲದೇ ಸರ್ಕಾರಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ – Kannada News | India Post GDS Recruitment 2026: 28,740 Posts for 10th Pass, No Exam! Apply Now

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ

ದೇಶಾದ್ಯಂತ ಸರ್ಕಾರಿ ಉದ್ಯೋಗದ ಅವಕಾಶಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯಾ ಪೋಸ್ಟ್ ದೊಡ್ಡ ಸುವರ್ಣಾವಕಾಶವನ್ನು ಘೋಷಿಸಿದೆ. ವಿವಿಧ ಅಂಚೆ ವೃತ್ತಗಳಲ್ಲಿ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗಾಗಿ ಒಟ್ಟು 28,740 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ, ಕೇವಲ 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) ಮತ್ತು ಡಾಕ್ ಸೇವಕ್ ಹುದ್ದೆಗಳನ್ನು ತಮ್ಮದೇ ಊರಿನ ಅಂಚೆ ಕಚೇರಿಗಳಲ್ಲಿ ಪಡೆಯುವ ಅವಕಾಶವಿದ್ದು, ಸ್ಥಳೀಯರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 14ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿದಾರರು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಗಣಿತ, ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯನ್ನು ಓದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಸೈಕಲ್ ಸವಾರಿ ತಿಳಿದಿರಬೇಕು. ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು; ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ದೊರೆಯುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 100ರೂ. ಅರ್ಜಿ ಶುಲ್ಕವಿದ್ದು, ಎಸ್‌ಸಿ, ಎಸ್‌ಟಿ, ಅಂಗವಿಕಲರು ಮತ್ತು ಟ್ರಾನ್ಸ್‌ವುಮೆನ್ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಅರ್ಜಿಯಲ್ಲಿ ದೋಷಗಳಿದ್ದರೆ ನಂತರ ತಿದ್ದುಪಡಿ ಮಾಡಲು ವಿಶೇಷ ಅವಕಾಶವೂ ನೀಡಲಾಗಿದೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಹಾಗೂ ಸರ್ಕಾರಿ ಸೌಲಭ್ಯಗಳು ಲಭ್ಯವಿದ್ದು, BPM ಹುದ್ದೆಗೆ ತಿಂಗಳಿಗೆ 12,000 ರಿಂದ 29,380 ರೂ. ಮತ್ತು ABPM/ಡಾಕ್ ಸೇವಕ್ ಹುದ್ದೆಗೆ 10,000 ರಿಂದ 24,470ರೂ. ವರೆಗೆ ಸಂಬಳ ನೀಡಲಾಗುತ್ತದೆ. ಪರೀಕ್ಷೆಯ ಒತ್ತಡವಿಲ್ಲದೆ, ಕೇವಲ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತಿರುವುದರಿಂದ, 10ನೇ ತರಗತಿ ಉತ್ತೀರ್ಣರಾದ ಯುವಕರಿಗೆ ಇದು ಅತ್ಯಂತ ಸುಲಭ ಮತ್ತು ಉತ್ತಮ ಸರ್ಕಾರಿ ಉದ್ಯೋಗಾವಕಾಶವಾಗಿದೆ. ಆದ್ದರಿಂದ ಆಸಕ್ತರು ಕೊನೆಯ ದಿನಾಂಕಕ್ಕೂ ಮುನ್ನ ಅರ್ಜಿ ಸಲ್ಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್, ಪೋಷಕರ ಹೊರೆ ಇಳಿಸಿದ ಸರ್ಕಾರ – Kannada News | Karnataka Governmnet Green Signal To Free textbooks And Note book to Class 1 12 students from next academic year

ಬೆಂಗಳೂರು, (ಫೆಬ್ರವರಿ 03): ಕರ್ನಾಟಕದ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ  (Students)  ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ವಿದ್ಯಾ ವಿಕಾಸ ಯೋಜನೆಯಡಿ ( vidya vikas scheme) ಶಾಲಾ ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ನೋಟ್ ಬುಕ್​ (Text And Note Bo0k) ವಿತರಣೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೌದು..2026 -27ನೇ ಸಾಲಿನ 1ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೀಡಲು ಅನುಮೋದನೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಶುಭಮಂಗಳಾ ಅವರು ಆದೇಶ ಹೊರಡಿಸಿದ್ದಾರೆ.   ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಸುಮಾರು 61 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ.ಈ ಮೂಲಕ ಮೊದಲ ಬಾರಿಗೆ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕದ ಜೊತೆಗೆ ನೋಟ್‌ಬುಕ್ ಸಹ ವಿತರಣೆಗೆ ಮುಂದಾಗಿದೆ.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಶಿಕ್ಷಣ ಇಲಾಖೆ

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ 1ರಿಂದ 12ನೇ ತರಗತಿಯವರೆಗೆ ದಿನಚರಿ ಪುಸ್ತಕ ವಿತರಣೆ ಸಂಬಂಧ ಶಿಕ್ಷಣ ಇಲಾಖೆಯು 30 ಕೋಟಿ 83 ಲಕ್ಷದ 25 ಸಾವಿರ ಹಣದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ಸರ್ಕಾರ ಸಹ ಒಪ್ಪಿಗೆ ಸೂಚಿಸಿದ್ದು, 290.46 ಕೋಟಿ ರೂ ಅನುದಾನವನ್ನು ಶಾಲಾ ಶಿಕ್ಷಣ ಇಲಾಖೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನಲ್ಲೇ ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲು ತಯಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶುಭ ಮಂಗಳ ಆದೇಶ ಹೊರಡಿಸಿದ್ದಾರೆ. ಇನ್ನು ಪಠ್ಯ ಪುಸ್ತಕದ ಕಾಗದ ಮತ್ತು ಮುದ್ರಣ ಗುಣಮಟ್ಟ ರಾಜಿ ಆಗೋ ಹಾಗಿಲ್ಲ . ಹೆಚ್ಚುವರಿ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಿ ಕಳ್ಳಾಟ ಆಡೋ ಹಾಗಿಲ್ಲ . ಸರ್ಕಾರದ ಹಣ ದುರುಪಯೋಗ ಮಾಡಿದ್ರೆ ಕಠಿಣ ಕ್ರಮ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ 3 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್​ ಕ್ಲಾಸ್ ಭಾಗ್ಯ!

ಪೋಷಕರ ಹೊರೆ ಇಳಿಸಿದ ಸರ್ಕಾರ

ಇನ್ನು 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದಲೇ ಪಠ್ಯ ಪುಸ್ತಕ ಹಾಗೂ ನೋಟ್ ಬುಕ್ ಉಚಿತವಾಗಿ ನೀಡುವುದರಿಂದ ಪೋಷಕರ ಹೊರೆ ತಪ್ಪಲಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಪುಸ್ತಕ ನೀಡಲಾಗುತ್ತಿತ್ತಾದರೂ ಪೋಷಕರು ನೋಟ್ ಬುಕ್ ಕೊಡಿಸಬೇಕಿತ್ತು. ಇನ್ನೂ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೂ ಸಹ ಪುಸ್ತಕ ನೀಡುತ್ತಿರುವುದರಿಂದ ಪೋಷಕರ ಹೊರೆ ಕಡಿಮೆಯಾಗಲಿದೆ.

ಆದೇಶದಲ್ಲೇನಿದೆ?

ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ದ್ವಿಭಾಷಾ ಬಾಲ ಚೇತನ ಚಟುವಟಿಕೆ ಪುಸ್ತಕಗಳು, ಸರ್ಕಾರಿ ಶಾಲೆಗಳ 4ರಿಂದ 9ನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಮತ್ತು ಸರ್ಕಾರಿ ಶಾಲಾ ಕಾಲೇಜುಗಳ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗತಿಯವರೆಗೆ ದಿನಚರಿ ಪುಸ್ತಕ ಮತ್ತು 1ರಿಂದ 10ನೇ ತರಗತಿಯವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ವಿತರಿಸಲು ಸೂಚಿಸಲಾಗಿದೆ.

ಕೆಟಿಪಿಪಿ ಕಾಯ್ದೆ 1999ರ ಅಡಿ ರೂಪಿಸಿದ ನಿಯಮಗಳಂತೆ ಪಾರದರ್ಶಕ ಟೆಂಡರ್ ಕರೆದು ಕರ್ನಾಟಕ ಪುಸ್ತಕ ಸಂಘದ ಮೂಲಕ ಮುದ್ರಿಸಿ ವಿತರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ. ಒಟ್ಟು 264.62 ಕೋಟಿ ವೆಚ್ಚದಲ್ಲಿ ವಿದ್ಯಾ ವಿಕಾಸ ಯೋಜನೆ ಅಡಿ ಪುಸ್ತಕಗಳ ವಿತರಣೆಗೆ ಅನುಮೋದನೆ ನೀಡಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕದಡಿ ಹೊಸದಾಗಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಿಗೆ 25.841 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು. ಎಸ್‌ಎಟಿಎಸ್ ಮೂಲಕ ಶಾಲೆಗಳಿಂದ ಪಠ್ಯಪುಸ್ತಕಗಳ ಬೇಡಿಕೆಯ ಮಾಹಿತಿ ಪಡೆದು ಎಲ್ಲಾ ವಿವರ ದಾಖಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version