ಕಣ್ಣಿಗೆ ಕಾಣುವ ದೇವರು ಎಂದರೆ ತಾಯಿ (mother). ಆಕೆಯ ನಿಷ್ಕಲ್ಮಶ ಪ್ರೀತಿ, ಕಾಳಜಿಗೆ ಬೆಲೆ ಕಟ್ಟಲು ಆಗದು. ತನ್ನ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ತನ್ನ ನೋವು, ಕಷ್ಟಗಳನ್ನು ಬದಿಗಿರಿಸಿ ಅವರಿಗಾಗಿ ದುಡಿಯುತ್ತಾಳೆ. ಆದರೆ ಇಲ್ಲೊಬ್ಬ ತಾಯಿಯ ದೈಹಿಕ ಕೊರತೆಯೂ ಆಕೆಗೆ ತನ್ನ ಕಂದನ ಮೇಲಿನ ಪ್ರೀತಿ, ಕಾಳಜಿಯನ್ನು ಕಸಿದು ಕೊಂಡಿಲ್ಲ. ಕೈಗಳಿಲ್ಲದಿದ್ದರೂ ಪಕ್ಷಿಯಂತೆ ಬಾಯಿಂದಲೇ ತುತ್ತು ನೀಡಿದ್ದಾಳೆ. ಮಗನ ಮೇಲೆ ತಾಯಿ ಪ್ರೀತಿ ತೋರ್ಪಡಿಸಿದ ರೀತಿ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.
Whatsinthenews ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್ ನಲ್ಲಿ ತಾಯಿ ಕಾಳಜಿಯನ್ನು ಕಾಣಬಹುದು. ತಾಯಿಯೊಬ್ಬಳು ಕೈಗಳಿಲ್ಲದಿದ್ದರೂ ಬಾಯಿಂದ ಮಗನಿಗೆ ತುತ್ತು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ದೇವರಿಗೆ ಯಾವುದನ್ನು ಕೊಡಬೇಕು ಕೊಡಬಾರದೆನ್ನುವುದು ಚೆನ್ನಾಗಿ ಗೊತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಾಯಿ ಪ್ರೀತಿ ಕಾಳಜಿ ಯಾವತ್ತೂ ಬದಲಾಗಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಾಮರಾಜನಗರ, (ಏಪ್ರಿಲ್ 02): ತಮ್ಮ ಮದುವೆಗೆ (marriage) ಪೋಷಕರ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಪ್ರೇಮಿಗಳು (Lovers) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ (Chamarajnagar) ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ನದಿಯಾ(19), ನಾಗೇಂದ್ರ(21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಮನೆಬಿಟ್ಟು ಹೋಗಿತ್ತು. ಹೀಗಾಗಿ ಇತ್ತ ಯುವತಿ ಕಡೆಯವರು ಮಿಸ್ಸಿಂಗ್ ದೂರು ನೀಡಿದ್ದಾರೆ. ಇದರಿದ ಹೆದರಿ ಪ್ರೇಮಿಗಳು ಜತೆಯಲ್ಲೇ ಸಾಯುಲು ನಿರ್ಧರಿಸಿ ನೇಣಿಗೆ ಶರಣಾಗಿದ್ದಾರೆ.
ನಾಗೇಂದ್ರ ಹಾಗೂ ಪಾಲಾರ್ ಗ್ರಾಮದ ನದಿಯಾ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ
3 ದಿನದ ಹಿಂದೆ ನಾಗೇಂದ್ರ, ನದಿಯಾಳನ್ನು ಕರೆದುಕೊಂಡು ತನ್ನ ಅಜ್ಜನ ಊರು ಪೊನ್ನಾಚಿಗೆ ಕರೆದುಕೊಂಡು ಹೋಗಿದ್ದ. ಇತ್ತ ನದಿಯಾ ಕುಟುಂಬಸ್ಥರು ಆತಂಕಗೊಂಡಿದ್ದು, ಎಲ್ಲೆಡೆ ಹುಡುಕಾರಿದ್ದಾರೆ. ಆದರೂ ಪತ್ತೆಯಾಗಿಲ್ಲ. ಕೊನೆಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಶ್ ದಾಖಲಿಸಿದ್ದರು.
ಕೇಸ್ ದಾಖಲಾದ ವಿಚಾರ ನಾಗೇಂದ್ರ ಹಾಗೂ ನದಿಯಾಗೆ ಗೊತ್ತಾಗಿ ಹೆದರಿಕೊಂಡಿದ್ದು, ಒಂದು ವೇಳೆ ಪೊಲೀಸರ ಕೈಗೆ ಸಿಕ್ಕರೆ ಹೇಗೆ ? ಮುಂದೇನು ಎಂದು ಭಯಗೊಡು ಸಾಯುವ ನಿರ್ಧಾರಕ್ಕೆ ಬಂದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರು ಒಟ್ಟಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಲೆ ಮಹದೇಶ್ವರಬೆಟ್ಟ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸದ್ಯ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಶವಗಳ ಸ್ಥಳಾಂತರ ಮಾಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಆಟಿಸಂ (Autism Spectrum Disorder) ಎನ್ನುವುದು ಮಕ್ಕಳ ವರ್ತನೆ ಮತ್ತು ಮೆದುಳಿನ ಬೆಳವಣಿಗೆಯನ್ನು ಪರಿಣಾಮಗೊಳಿಸುವ ಒಂದು ಸ್ಥಿತಿ. ಕೆಲವೊಮ್ಮೆ ಮಗುವಿಗೆ ಈ ಸಮಸ್ಯೆ ಇರುವುದನ್ನು ಪೋಷಕರು ಹಲವು ವರ್ಷಗಳ ನಂತರ ಗಮನಿಸಬಹುದು. ತಡವಾಗಿ ಗುರುತಿಸಿದರೆ ಸರಿಯಾದ ಚಿಕಿತ್ಸೆ ಪಡೆಯುವುದು ಕಷ್ಟವಾಗಬಹುದು. ಆದ್ದರಿಂದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ. ಅದಕ್ಕಾಗಿಯೇ ಪ್ರತಿ ವರ್ಷ ಏಪ್ರಿಲ್ 2ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಜನರಲ್ಲಿ ಆಟಿಸಂ ಬಗ್ಗೆ ಅರಿವು ಮೂಡಿಸುವುದೇ ಇದರ ಉದ್ದೇಶ. ಹಾಗಾಗಿ ಆಟಿಸಂ ಎಂದರೇನು, ಇದರ ಆರಂಭಿಕ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿಯುವುದರಿಂದ ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಕಂಡು ಹಿಡಿಯಬಹುದಾಗಿದೆ.
ಆಟಿಸಂ ಎಂದರೇನು?
ಆಟಿಸಂ ಒಂದು ಸ್ಥಿತಿಯಾಗಿದ್ದು, ಇದರಲ್ಲಿ ಮಗುವಿನ ಮೆದುಳಿನ ಬೆಳವಣಿಗೆ ಸಾಮಾನ್ಯಕ್ಕಿಂತ ವಿಭಿನ್ನವಾಗಿರುತ್ತದೆ. ಇದರಿಂದ ಮಗುವಿನ ಸಂವಹನ (Communication) ಮತ್ತು ದಿನನಿತ್ಯದ ವರ್ತನೆ ಮೇಲೆ ಪರಿಣಾಮ ಬೀರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಇದು ಹುಟ್ಟಿನಿಂದಲೇ ಇರುತ್ತದೆ, ಆದರೆ ಕೆಲವು ಮಕ್ಕಳಲ್ಲಿ ವಯಸ್ಸು ಹೆಚ್ಚಾಗುತ್ತಿದ್ದಂತೆ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಆಟಿಸಂನ ಆರಂಭಿಕ ಲಕ್ಷಣಗಳು:
ಕಣ್ಣಲ್ಲಿ ಕಣ್ಣಿಟ್ಟು ಮಾತನಾಡದಿರುವುದು
ಹೆಸರು ಕರೆದಾಗ ಪ್ರತಿಕ್ರಿಯೆ ನೀಡದಿರುವುದು
2 ವರ್ಷವಾದರೂ ಮಾತನಾಡಲು ಆರಂಭಿಸದಿರುವುದು
ಇತರ ಮಕ್ಕಳೊಂದಿಗೆ ಆಟವಾಡಲು ಅಥವಾ ಬೆರೆಯಲು ಆಸಕ್ತಿ ಕಡಿಮೆಯಾಗುವುದು
ಒಂದೇ ಮಾತನ್ನು ಪದೇಪದೇ ಪುನರಾವರ್ತಿಸುವುದು
ಏಕಾಏಕಿ ಕೋಪ ಅಥವಾ ಅಸಹಜ ವರ್ತನೆ ತೋರಿಸುವುದು
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ನ್ಯೂರೋ ಡೆವಲಪ್ಮೆಂಟ್ ತಜ್ಞರನ್ನು ಸಂಪರ್ಕಿಸುವುದು ಬಹಳ ಮುಖ್ಯ.
ತಜ್ಞರ ಪ್ರಕಾರ, ಆಟಿಸಂ ಒಂದು ರೋಗವಲ್ಲ, ಅದು ಒಂದು ಡಿಸ್ಆರ್ಡರ್. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಆರಂಭದಲ್ಲೇ ಗುರುತಿಸಿದರೆ ಸರಿಯಾದ ಚಿಕಿತ್ಸೆ ಮತ್ತು ತರಬೇತಿಯ ಮೂಲಕ ನಿಯಂತ್ರಣದಲ್ಲಿ ಇಡಬಹುದು. ಸ್ಪೀಚ್ ಥೆರಪಿ, ಬಿಹೇವಿಯರ್ ಥೆರಪಿ ಮತ್ತು ಇತರ ಚಿಕಿತ್ಸಾ ವಿಧಾನಗಳಿಂದ ಮಕ್ಕಳಲ್ಲಿ ಗಮನಾರ್ಹ ಸುಧಾರಣೆ ತರಬಹುದು. ಬೇಗ ಗುರುತಿಸಿದಷ್ಟು ಉತ್ತಮ ಫಲಿತಾಂಶ ಸಿಗುತ್ತದೆ. ಹಾಗಾಗಿ ಪೋಷಕರು ಮಗುವಿನ ವರ್ತನೆಯನ್ನು ಮೊದಲೇ ಗಮನಿಸಿ. ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾಗಿದ್ದರೆ ವೈದ್ಯರ ಸಲಹೆ ಪಡೆಯಿರಿ.
ಚಿಕ್ಕಬಳ್ಳಾಪುರ, ಏಪ್ರಿಲ್ 02: ಕಂಟೇನರ್ಗೆ ಹಿಂದಿನಿಂದ ಕಾರು ಡಿಕ್ಕಿ (Accident) ಹೊಡೆದ ಪರಿಣಾಮ ಇಬ್ಬರು ದುರ್ಮರಣ (death) ಹೊಂದಿರುವಂತಹ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ ಕ್ರಾಸ್ ಬಳಿ ನಡೆದಿದೆ. 5 ತಿಂಗಳ ಹಿಂದೆ ಮದುವೆಯಾಗಿದ್ದ ರಕ್ಷಿತಾ ರೆಡ್ಡಿ(28) ಮತ್ತು ಸಂಬಂಧಿ ಪವನ್ ರೆಡ್ಡಿ(30) ಸ್ಥಳದಲ್ಲೇ ಸಾವನ್ನಪ್ಪಿದ್ದು, ರಕ್ಷಿತಾ ಪತಿ ರಾಜಶೇಖರರೆಡ್ಡಿ ಸ್ಥಿತಿ ಗಂಭೀರವಾಗಿದೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ರಕ್ಷಿತಾ ರೆಡ್ಡಿ ಮತ್ತು ರಾಜಶೇಖರ ರೆಡ್ಡಿ ಕಳೆದ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ದಂಪತಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ಸ್ವಗ್ರಾಮ ಆಂಧ್ರದ ಅನಂತಪುರದ ಅವಳಗಿಗೆ ತೆರಳುತ್ತಿದ್ದರು. ಈ ವೇಳೆ ಶೆಟ್ಟಿಗೆರೆ ಕ್ರಾಸ್ ಬಳಿ ಕಂಟೇನರ್ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಚಿಕ್ಕಬಳ್ಳಾಪುರ ಬೈಪಾಸ್ನಲ್ಲಿ ಸರಣಿ ರಸ್ತೆ ಅಪಘಾತ
ಬೆಂಗಳೂರು ಹೈದರಾಬಾದ್ ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ಬೈಪಾಸ್ನಲ್ಲಿ 2 ಕಾರು, 2 ಲಾರಿ ಮತ್ತಯ 1 ಟ್ಯಾಂಕರ್ ಮಧ್ಯೆ ಸರಣಿ ರಸ್ತೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ರಸ್ತೆ ಬದಿ ಸಿಮೆಂಟ್ ಟ್ಯಾಂಕರ್ ಉರುಳಿಬಿದ್ದಿದೆ.
ಪ್ರತಿಯೊಂದು ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಾಗಳಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಖಾಸಗಿ ವೋಲ್ವೋ ಬಸ್ಗೆ ಟಿಪ್ಪರ್ ಡಿಕ್ಕಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು
ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಕ್ರಾಸ್ ಬಳಿಯ ಹೈದರಾಬಾದ್ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ವೋಲ್ವೋ ಬಸ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆ ಡಿವೈಡರ್ ದಾಟಿ ಎದುರು ಬರುತ್ತಿದ್ದ ಬಸ್ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಟಿಪ್ಪರ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು (ಏ. 02): ದಿನನಿತ್ಯದ ಅಡುಗೆಮನೆಯಲ್ಲಿ (Kitchen), ರುಚಿಕರವಾದ ಆಹಾರವನ್ನು ತಯಾರಿಸಲು ಸಾಕಷ್ಟು ಶ್ರಮ, ಸಮಯ ಮತ್ತು ದುಬಾರಿ ಪದಾರ್ಥಗಳು ಬೇಕಾಗುತ್ತವೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ, ಕೆಲವೊಮ್ಮೆ ಸರಳ ಅಡುಗೆ ಸಲಹೆಗಳು ನಿಮ್ಮ ಆಹಾರದ ರುಚಿಯನ್ನು ಅದ್ಭುತವಾಗಿಸುತ್ತದೆ. ಸ್ವಲ್ಪ ಸಾಮಾನ್ಯ ಜ್ಞಾನ, ಸರಿಯಾದ ಸಮಯದಲ್ಲಿ ಸರಿಯಾದ ಪದಾರ್ಥಗಳನ್ನು ಬಳಸುವುದು ಮತ್ತು ಕೆಲವು ಸರಳ ತಂತ್ರಗಳನ್ನು ಅನುಸರಿಸುವುದರಿಂದ ರುಚಿಯಾದ ಅಡುಗೆ ಮಾಡಬಹುದು. ಈ ಲೇಖನದಲ್ಲಿ, ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವ ಐದು ಅಡುಗೆ ಸಲಹೆಗಳನ್ನು ಹೇಳುತ್ತೇವೆ.
ಲಘುವಾಗಿ ಹುರಿದ ಮಸಾಲೆಗಳನ್ನು ಬಳಸಿ
ನಿಮ್ಮ ಆಹಾರದ ರುಚಿಯನ್ನು ನೀವು ಹೆಚ್ಚಿಸಲು ಬಯಸಿದರೆ, ಈ ಸಲಹೆಯನ್ನು ಅನುಸರಿಸಬಹುದು. ರುಚಿಯ ನಿಜವಾದ ರಹಸ್ಯವೆಂದರೆ ಮಸಾಲೆಗಳ ಸರಿಯಾದ ಬಳಕೆ. ನೀವು ಸಂಪೂರ್ಣ ಅಥವಾ ಪುಡಿಮಾಡಿದ ಮಸಾಲೆಗಳನ್ನು ನೇರವಾಗಿ ಸೇರಿಸಿದಾಗ, ಅವುಗಳ ಪೂರ್ಣ ಪರಿಮಳ ಹೊರಬರುವುದಿಲ್ಲ. ಆದ್ದರಿಂದ, ಮೊದಲು ಮಸಾಲೆಗಳನ್ನು ಲಘುವಾಗಿ ಒಣಗಿಸಿ ಹುರಿಯುವುದು ಅಥವಾ ಎಣ್ಣೆಯಲ್ಲಿ ಬೇಯಿಸುವುದು ಉತ್ತಮ. ಇದು ಅವುಗಳ ಸುವಾಸನೆಯನ್ನು ಹೊರತರುತ್ತದೆ ಮತ್ತು ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ. ಮಸಾಲೆಗಳು ಅತಿಯಾಗಿ ಸುಡದಂತೆ ಎಚ್ಚರವಹಿಸಿ, ಏಕೆಂದರೆ ಇದು ಕಹಿಗೆ ಕಾರಣವಾಗಬಹುದು.
ಈರುಳ್ಳಿಯನ್ನು ಸರಿಯಾಗಿ ಹುರಿಯಿರಿ
ಈರುಳ್ಳಿಯನ್ನು ಸರಿಯಾಗಿ ಬೇಯಿಸುವುದು ಬಹಳ ಮುಖ್ಯ. ಹೆಚ್ಚಿನ ಉರಿಯಲ್ಲಿ ಬೇಗನೆ ಹುರಿಯುವ ಬದಲು, ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಬೇಯಿಸಿ. ಅವು ತಿಳಿ ಚಿನ್ನದ ಕಂದು ಬಣ್ಣಕ್ಕೆ ತಿರುಗುವವರೆಗೆ ಆಗಾಗ್ಗೆ ಬೆರೆಸಿ. ಇದು ರುಚಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ತರಕಾರಿಗಳನ್ನು ಅತಿಯಾಗಿ ಬೇಯಿಸಬೇಡಿ
ಬೀನ್ಸ್, ಕ್ಯಾರೆಟ್ ಮತ್ತು ಬೆಲ್ ಪೆಪ್ಪರ್ಗಳಂತಹ ಹಸಿರು ತರಕಾರಿಗಳನ್ನು ಅತಿಯಾಗಿ ಬೇಯಿಸುವುದರಿಂದ ಅವುಗಳ ಬಣ್ಣ ಮಂದವಾಗಬಹುದು ಮತ್ತು ಅವುಗಳ ಪೋಷಕಾಂಶಗಳು ಕಡಿಮೆಯಾಗಬಹುದು. ಅಲ್ಲದೆ ಅವುಗಳ ನೈಸರ್ಗಿಕ ಪರಿಮಳವೂ ಕಡಿಮೆ ಆಗುತ್ತದೆ. ಆದ್ದರಿಂದ, ತರಕಾರಿಗಳನ್ನು ಮೃದುಗೊಳಿಸುವಷ್ಟು ಬೇಯಿಸಿ, ಸ್ವಲ್ಪ ಕುರುಕಲು ಉಳಿಸಿಕೊಳ್ಳಿ. ಇದು ರುಚಿಯನ್ನು ಹೆಚ್ಚಿಸುವುದಲ್ಲದೆ ಅವುಗಳ ಪೌಷ್ಟಿಕಾಂಶವನ್ನು ಸಹ ಕಾಪಾಡಿಕೊಳ್ಳುತ್ತದೆ.
ಅನೇಕ ಜನರು ಅಡುಗೆಯ ಆರಂಭದಲ್ಲಿ ನಿಂಬೆ ರಸ ಅಥವಾ ಗರಂ ಮಸಾಲವನ್ನು ಸೇರಿಸುತ್ತಾರೆ. ಆದರೆ, ಸರಿಯಾದ ವಿಧಾನವೆಂದರೆ ಆಹಾರ ಸಿದ್ಧವಾದ ನಂತರ ಯಾವಾಗಲೂ ಕೊನೆಯಲ್ಲಿ ಈ ಪದಾರ್ಥಗಳನ್ನು ಸೇರಿಸುವುದು. ಇದು ಅವುಗಳ ಸುವಾಸನೆ ಮತ್ತು ತಾಜಾತನವನ್ನು ಕಾಪಾಡುತ್ತದೆ ಮತ್ತು ಖಾದ್ಯಕ್ಕೆ ವಿಶಿಷ್ಟವಾದ ರುಚಿ ನೀಡುತ್ತದೆ.
ಅನ್ನ ಬೇಯಿಸುವಾಗ ಸ್ವಲ್ಪ ತುಪ್ಪ ಸೇರಿಸಿ
ನಿಮ್ಮ ಅನ್ನವು ಮೃದು ಮತ್ತು ರುಚಿಕರವಾಗಿರಬೇಕೆಂದು ನೀವು ಬಯಸಿದರೆ, ಬೇಯಿಸುವಾಗ ಒಂದು ಟೀಚಮಚ ತುಪ್ಪವನ್ನು ಸೇರಿಸಿ. ತುಪ್ಪವನ್ನು ಸೇರಿಸುವುದರಿಂದ ಅನ್ನವು ಜಿಗುಟಾಗುವುದನ್ನು ತಡೆಯುತ್ತದೆ ಮತ್ತು ಸ್ವಲ್ಪ ಪರಿಮಳವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನೀವು ಒಂದು ಅಥವಾ ಎರಡು ಲವಂಗ ಅಥವಾ ಬೇ ಎಲೆಯನ್ನು ಸೇರಿಸಬಹುದು, ಇದು ಅನ್ನದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಟಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ (Peddi) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗ ದೊಡ್ಡ ಚರ್ಚೆ ನಡೆಯುತ್ತಿದೆ. ಚಿತ್ರದ ಬಿಡುಗಡೆ ವಿಳಂಬವಾಗಲಿದೆ ಎಂಬ ಗಾಳಿಸುದ್ದಿಗಳು ಹಬ್ಬಿವೆ. ಇವುಗಳ ನಡುವೆ ಚಿತ್ರತಂಡ ಹನುಮ ಜಯಂತಿಯ ಅಂಗವಾಗಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ನಲ್ಲಿ ರಾಮ್ ಚರಣ್ (Ram Charan) ಅವರ ಲುಕ್ ಗಮನ ಸೆಳೆದಿದೆ. ಆದರೆ ರಿಲೀಸ್ ಡೇಟ್ (Peddi Release Date) ಬಗ್ಗೆ ಪ್ರಸ್ತಾಪ ಇಲ್ಲ! ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣ ಆಗಿದೆ.
ಇತ್ತೀಚೆಗೆ ಬಿಡುಗಡೆಯಾದ ‘ಪೆದ್ದಿ ಪೈಲ್ವಾನ್’ ಗ್ಲಿಂಪ್ಸ್ನಿಂದ ಸಿದ್ಧಪಡಿಸಲಾದ ಈ ಪೋಸ್ಟರ್ನಲ್ಲಿ ರಾಮ್ ಚರಣ್ ಅತ್ಯಂತ ಪವರ್ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಲಿಷ್ಠ ಮೈಕಟ್ಟು ಮತ್ತು ಗಂಭೀರ ನೋಟವು ಹನುಮಂತನ ಶೌರ್ಯವನ್ನು ನೆನಪಿಸುವಂತಿದೆ. ಈ ಲುಕ್ ಕಂಡ ಅಭಿಮಾನಿಗಳು ‘ಇದು ಪಕ್ಕಾ ಮಾಸ್ ಸಿನಿಮಾ’ ಎಂದು ಜೈಕಾರ ಹಾಕುತ್ತಿದ್ದಾರೆ.
ಸಿನಿಮಾ ಮುಂದೂಡಿಕೆಯಾಗಬಹುದು ಎಂಬ ಆತಂಕ ಅಭಿಮಾನಿಗಳಿಗೆ ಇದೆ. ಆದರೆ ರಾಮ್ ಚರಣ್ ಅವರೇ ಸ್ಪಷ್ಟಪಡಿಸಿರುವಂತೆ, ಸಿನಿಮಾ ನಿಗದಿತ ಸಮಯಕ್ಕೇ ಅಂದರೆ ಏಪ್ರಿಲ್ 30ರಂದು ತೆರೆಗೆ ಬರಲಿದೆ. ಆದರೂ, ಅಧಿಕೃತವಾಗಿ ಚಿತ್ರತಂಡ ಮತ್ತೊಮ್ಮೆ ಈ ದಿನಾಂಕವನ್ನು ಘೋಷಿಸಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೋಸ್ಟರ್ನಲ್ಲಿ ರಿಲೀಸ್ ಡೇಟ್ ಯಾಕೆ ಕಾಣಿಸುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ.
ಬುಚ್ಚಿ ಬಾಬು ಸಾನಾ ನಿರ್ದೇಶನದ ಈ ಚಿತ್ರವು ಗ್ರಾಮೀಣ ಹಿನ್ನೆಲೆಯ ಸ್ಪೋರ್ಟ್ಸ್ ಡ್ರಾಮಾ ಆಗಿದೆ. ಚಿತ್ರದ ಹೈಲೈಟ್ ಎಂದರೆ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅವರು ಇಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಜಾನ್ವಿ ಕಪೂರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
‘ವೃದ್ಧಿ ಸಿನಿಮಾಸ್’ ಸಂಸ್ಥೆಯು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ರಿಲೀಸ್ ಡೇಟ್ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಚಿಕ್ಕಮಗಳೂರು, ಏಪ್ರಿಲ್ 02: ಅನಾರೋಗ್ಯದ ಹಿನ್ನೆಲೆ ಡ್ರಿಪ್ಸ್ ಹಾಕಿಸಿಕೊಂಡೇ ವಿದ್ಯಾರ್ಥಿಯೋರ್ವ SSLC ಪರೀಕ್ಷೆ ಬರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢ ಶಾಲೆಯಲ್ಲಿ ನಡೆದಿದೆ. ಬೆಳಗ್ಗೆ ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿ ಗಗನ್ ಎಂಬಾತ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅಂಬುಲೈನ್ಸ್ ಮೂಲಕ ಬಣಕಲ್ ಅಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಅಗತ್ಯ ಚಿಕಿತ್ಸೆ ಪಡೆದ ಬಳಿಕ ವೈದ್ಯರ ಸಲಹೆ ಪಡೆದು ಡ್ರಿಪ್ಸ್ ಹಾಕಿಸಿಕೊಂಡೇ ಗಗನ್ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬಳಿಕ ವಿದ್ಯಾರ್ಥಿಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ನವದೆಹಲಿ, ಏಪ್ರಿಲ್ 2: ಸತತ ಹಿನ್ನಡೆಯಲ್ಲಿದ್ದ ರುಪಾಯಿ ಕರೆನ್ಸಿ ಗುರುವಾರ ಡಾಲರ್ ಎದುರು 105 ಪೈಸೆಗಳಷ್ಟು ಚೇತರಿಕೆ ಪಡೆದು 94ರ ಮಟ್ಟಕ್ಕಿಂತ ಕೆಳಗೆ ಬಂದಿದೆ. ಹಿಂದಿನ ದಿನದ ವಹಿವಾಟು ಅಂತ್ಯದಲ್ಲಿ ಡಾಲರ್ ಎದುರು 94.70ರ ಮಟ್ಟದಲ್ಲಿದ್ದ ರುಪಾಯಿ ಮೌಲ್ಯ ಇವತ್ತು ಗುರುವಾರ 93.65ಕ್ಕೆ ಏರಿದೆ. ಡಾಲರ್ ಎದುರು ರುಪಾಯಿ (Dollar vs Rupee) ಚೇತರಿಕೆಗೆ ಪ್ರಮುಖವಾಗಿ ಕಾರಣವಾಗಿದ್ದು ಆರ್ಬಿಐ ತೆಗೆದುಕೊಂಡ ಒಂದು ಕ್ರಮ.
ಸ್ಪೆಕ್ಯುಲೇಟಿವ್ ಟ್ರೇಡಿಂಗ್ನಿಂದ ರುಪಾಯಿಗೆ ಬಹಳ ಹಿನ್ನಡೆಯಾಗಿತ್ತು. ತೈಲ ಬೆಲೆ ಹೆಚ್ಚಿದ್ದರಿಂದ ಭಾರತದ ಕರೆಂಟ್ ಅಕೌಂಟ್ ಕೊರತೆ ಹಿಗ್ಗಿತು. ಇದು ರುಪಾಯಿ ಮೇಲೆ ಇನ್ನಷ್ಟು ಒತ್ತಡ ಹಾಕಿದೆ. ರುಪಾಯಿಗೆ ಹಿನ್ನಡೆ ತರುತ್ತಿದ್ದ ಸ್ಪೆಕ್ಯೂಲೇಟಿವ್ ಬೆಟ್ಗಳಿಗೆ ಆರ್ಬಿಐ ಕಡಿವಾಣ ಹಾಕಿತು. ಬ್ಯಾಂಕುಗಳು ರುಪಾಯಿ ಎನ್ಡಿಎಫ್ಗಳನ್ನು (ನಾನ್ ಡೆಲಿವರಬಲ್ ಫಾರ್ವರ್ಡ್ಸ್) ನೀಡದಂತೆ ನಿಯಮಗಳನ್ನು ಹಾಕಲಾಯಿತು. ಕ್ಯಾನ್ಸಲ್ ಆದ ಫಾರ್ವರ್ಡ್ ಕಾಂಟ್ರಾಕ್ಟ್ಗಳನ್ನು ರೀಬುಕಿಂಗ್ ಮಾಡದಂತೆ ಕಂಪನಿಗಳನ್ನು ತಡೆಯಾಯಿತು. ಇದರಿಂದ ಕರೆನ್ಸಿ ಸ್ಪೆಕುಲೇಶನ್ ಅತಿಯಾಗಿ ಆಗುವುದು ತಪ್ಪಿದಂತಾಯಿತು.
ಇರಾನ್ ಯುದ್ಧವು ತಾರ್ಕಿಕ ಅಂತ್ಯ ಮುಟ್ಟುವ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ. ತೈಲ ಬೆಲೆ 100 ಡಾಲರ್ಗಿಂತ ಹೆಚ್ಚಿನ ಮಟ್ಟದಲ್ಲೇ ಇದೆ. ಗುರುವಾರ ಬ್ರೆಂಟ್ ಫ್ಯೂಚರ್ಸ್ನಲ್ಲಿ ತೈಲ ಬೆಲೆ ಶೇ. 5ರಷ್ಟು ಹೆಚ್ಚಾಗಿ ಬ್ಯಾರಲ್ಗೆ 106 ಡಾಲರ್ ಮುಟ್ಟಿದೆ. ಇದೇ ಮಟ್ಟದಲ್ಲಿ ತೈಲ ಬೆಲೆ ಮತ್ತಷ್ಟು ಕಾಲ ಮುಂದುವರಿಯುತ್ತಿದ್ದಲ್ಲಿ ಭಾರತದ ಆರ್ಥಿಕತೆಗೆ ಮತ್ತಷ್ಟು ಹಿನ್ನಡೆ ತರುತ್ತಾ ಹೋಗಬಹುದು.
ಭಾರತಕ್ಕೆ ಬೈ ಹೇಳುತ್ತಿರುವ ವಿದೇಶೀ ಹೂಡಿಕೆದಾರರು
ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಭಾರತೀಯ ಈಕ್ವಿಟಿ ಸೆಗ್ಮೆಂಟ್ನಿಂದ ಸತತವಾಗಿ ನಿರ್ಗಮಿಸುತ್ತಿದ್ದಾರೆ. ಬುಧವಾರವೂ ಎಫ್ಪಿಐಗಳೀಂದ 8,331 ಕೋಟಿ ರೂ ಮೊತ್ತದ ಷೇರುಗಳ ಮಾರಾಟವಾಗಿದೆ. ಮಾರ್ಚ್ ತಿಂಗಳಲ್ಲಿ ಎಫ್ಪಿಐಗಳು 1.18 ಲಕ್ಷ ಕೋಟಿ ರೂ ಹೂಡಿಕೆಗಳನ್ನು ಹಿಂಪಡೆದಿದ್ದಾರೆ.
2024-25ರಲ್ಲಿ ಎಫ್ಪಿಐಗಳಿಂದ ನಿವ್ವಳ ಹೊರಹರಿವು ಆಗಿರುವುದು ಬರೋಬ್ಬರಿ 1.80 ಲಕ್ಷ ಕೋಟಿ ರೂ ನಷ್ಟು. ಕಳೆದ 34 ವರ್ಷದಲ್ಲೇ ಇದು ದಾಖಲೆ ಪ್ರಮಾಣದ ಎಫ್ಪಿಐ ಹೊರಹರಿವು. ಈ ಬೆಳವಣಿಗೆಯು ರುಪಾಯಿ ಮೇಲೆ ಅತೀವ ಒತ್ತಡ ತಂದಿದೆ. ಪರಿಣಾಮವಾಗಿ ಡಾಲರ್ ಎದುರು ರುಪಾಯಿ ಒಂದು ಹಂತದಲ್ಲಿ 95ರ ಗಡಿ ದಾಟಿ ಹೋಗಿತ್ತು.
ಕೊಯಮತ್ತೂರು, ಏಪ್ರಿಲ್ 2: ಯೂಟ್ಯೂಬರ್ (YouTuber) ಮೊನಾಲಿಸಾಳನ್ನು ಭೇಟಿಯಾಗುವ ಉದ್ದೇಶದಿಂದ ಕೊಯಮತ್ತೂರಿನಿಂದ ಚೆನ್ನೈಗೆ ಪ್ರಯಾಣಿಸಲು ಯತ್ನಿಸಿದ ನಾಲ್ವರು ಶಾಲಾ ವಿದ್ಯಾರ್ಥಿನಿಯರನ್ನು ಕೊಯಮತ್ತೂರು ರೈಲ್ವೆ ನಿಲ್ದಾಣದ ಪೊಲೀಸರು ರಕ್ಷಿಸಿದ್ದಾರೆ. ಕೊಯಮತ್ತೂರಿನ ಖಾಸಗಿ ಶಾಲೆಯಲ್ಲಿ 7ನೇ ತರಗತಿಯ ಆಪ್ತ ಸ್ನೇಹಿತರಾದ ನಾಲ್ವರು ವಿದ್ಯಾರ್ಥಿನಿಯರು ಮನೆಯಿಂದ ಓಡಿಹೋಗಿ ರೈಲು ಹತ್ತುವ ಮೊದಲೇ ಅವರನ್ನು ತಡೆಹಿಡಿಯಲಾಯಿತು.
ಈ ಹುಡುಗಿಯರು ತಮ್ಮ ಪೋಷಕರ ಒಪ್ಪಿಗೆ ಪಡೆದು ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದರು. ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಖಾತೆಗಳನ್ನು ರಚಿಸಿದರು, ಅದರಲ್ಲಿ ಹಲವಾರು ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಂಡರು. ಸದಾ ಆನ್ಲೈನ್ನಲ್ಲಿ ಚಾಟ್ ಮಾಡುತ್ತಿದ್ದರು. ಚೆನ್ನೈ ಮೂಲದ 22 ವರ್ಷದ ಜನಪ್ರಿಯ ಯೂಟ್ಯೂಬರ್ ಮೊನಾಲಿಸಾಳ ಬಗ್ಗೆ ಆ 4 ಹುಡುಗಿಯರಲ್ಲಿ ಒಬ್ಬಳಿಗೆ ತುಂಬ ಇಷ್ಟವಿತ್ತು. ಆಕೆ ಯಾವಾಗಲೂ ಮೊನಾಲಿಸಾಳ ವಿಡಿಯೋ, ರೀಲ್ಸ್ಗಳನ್ನು ನೋಡುತ್ತಿದ್ದಳು. ಯಾವಾಗಲಾದರೂ ಒಮ್ಮೆ ಆಕೆಯನ್ನು ಭೇಟಿಯಾಗಬೇಕೆಂದು ಬಯಸಿದ್ದಳು.
ಆಕೆ ಇನ್ಸ್ಟಾಗ್ರಾಮ್ನಲ್ಲಿ ಮೊನಾಲಿಸಾಳನ್ನು ಫಾಲೋ ಮಾಡುತ್ತಿದ್ದಳು. ಆಗಾಗ ಆಕೆಯೊಂದಿಗೆ ಚಾಟ್ ಕೂಡ ಮಾಡಿತ್ತಿದ್ದಳು. ತಾನು ಆಕೆಯನ್ನು ಭೇಟಿಯಾಗಬೇಕೆಂದುಕೊಂಡಿದ್ದೇನೆ ಎಂಬ ವಿಷಯವನ್ನು ಆಕೆ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಾಗ ಉಳಿದ ಮೂವರು ಹುಡುಗಿಯರು ಸಹ ಮೊನಾಲಿಸಾಳನ್ನು ಫಾಲೋ ಮಾಡಲು ಪ್ರಾರಂಭಿಸಿದರು. ಅವರೂ ಆಕೆಯ ಜೊತೆ ಸಂಪರ್ಕದಲ್ಲಿದ್ದರು.
ಕ್ರಮೇಣ, ನಾಲ್ವರು ಹುಡುಗಿಯರು ಮೊನಾಲಿಸಾಳನ್ನು ವೈಯಕ್ತಿಕವಾಗಿ ಭೇಟಿಯಾಗಬೇಕೆಂಬ ಬಲವಾದ ಆಸೆಯನ್ನು ಬೆಳೆಸಿಕೊಂಡರು. ಇದೇ ಕಾರಣಕ್ಕೆ ಚೆನ್ನೈಗೆ ಪ್ರಯಾಣಿಸಲು ನಿರ್ಧರಿಸಿದರು. ಪ್ಲಾನ್ ಮಾಡಿ ಮನೆಯಿಂದ ಓಡಿಹೋದರು. ಅವರ ನಾಪತ್ತೆಯನ್ನು ಕಂಡು ಆಘಾತಕ್ಕೊಳಗಾದ ಅವರ ಪೋಷಕರು ಕೊಯಮತ್ತೂರು ನಗರ ಪೊಲೀಸರಿಗೆ ದೂರು ನೀಡಿದರು. ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲು ವಿಶೇಷ ತಂಡವನ್ನು ರಚಿಸಲಾಯಿತು.
ಆ ಹುಡುಗಿಯರು ಕೊಯಮತ್ತೂರು ರೈಲು ನಿಲ್ದಾಣದ ಕಡೆಗೆ ಹೋಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿತು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ನಾಲ್ವರು ಹುಡುಗಿಯರನ್ನು ರಕ್ಷಿಸಿ, ಪೊಲೀಸ್ ಠಾಣೆಗೆ ಕರೆತಂದರು. ಬಳಿಕ ಆ ಪೊಲೀಸರು ಹುಡುಗಿಯರಿಗೆ ಬುದ್ಧಿ ಹೇಳಿ ಅವರ ಪೋಷಕರಿಗೆ ಒಪ್ಪಿಸಿದರು. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ.
ಯೂಟ್ಯೂಬರ್ ಮೊನಾಲಿಸಾಗೆ ಮೆಸೇಜ್ ಮಾಡಿದ್ದ ಈ ವಿದ್ಯಾರ್ಥಿನಿಯರು ಆಕೆಯನ್ನು ನೋಡಲು ಬಯುಸುತ್ತಿರುವುದಾಗಿ ಹೇಳಿದ್ದರು. ಅದಕ್ಕೆ ಆಕೆ “ಬನ್ನಿ” ಎಂದು ಉತ್ತರಿಸಿದ್ದಳು. ಈ ವಿಷಯಕ್ಕೆ ಸಂಬಂಧಿಸಿದಂತೆ ಮೊನಾಲಿಸಾಳನ್ನು ಪೊಲೀಸರು ಪ್ರಶ್ನಿಸಲಿದ್ದಾರೆ. ಈ ಉದ್ದೇಶಕ್ಕಾಗಿ ಆಕೆಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ. ತನಿಖೆಯಲ್ಲಿ ಆಕೆ ನಿಜವಾಗಿಯೂ ಈ ಹುಡುಗಿಯರನ್ನು ತನ್ನನ್ನು ಭೇಟಿ ಮಾಡಲು ಆಹ್ವಾನಿಸಿದ್ದು ಸಾಬೀತಾದರೆ ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು (ಏ. 02): ಪ್ರಸಿದ್ಧ ವಿವೋ (Vivo) ಕಂಪನಿ ಭಾರತೀಯ ಮಾರುಕಟ್ಟೆಗೆ ಆಕರ್ಷಕ ಫೀಚರ್ಸ್ನ ಹೊಸ ಸ್ಮಾರ್ಟ್ಫೋನ್ ಪರಿಚಯಿಸಿದೆ. ಇದರ ಹೆಸರು ವಿವೋ V70 FE. ಮಿಡ್ರೇಂಜ್ ಬೆಲೆಯಲ್ಲಿ ಈ ಫೋನ್ ಅನಾವರಣಗೊಂಡಿದ್ದು, ಇದರಲ್ಲಿ ಹೆಚ್ಚಿನ ರೆಸಲ್ಯೂಶನ್ 200-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7360-ಟರ್ಬೊ ಚಿಪ್ಸೆಟ್ ಅನ್ನು ಬಳಸುತ್ತದೆ, AI ಇಮೇಜಿಂಗ್ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬ ಕುರಿತ ಸಂಪೂರ್ಣ ಮಾಹಿತಿ ತಿಳಿಯೋಣ.
ಭಾರತದಲ್ಲಿ ವಿವೋ V70 FE ಬೆಲೆ, ಲಭ್ಯತೆ
ಭಾರತದಲ್ಲಿ ವಿವೋ V70 FE ಬೆಲೆ 8GB + 128GB ಆಯ್ಕೆಗೆ ರೂ. 37,999 ರಿಂದ ಪ್ರಾರಂಭವಾಗುತ್ತದೆ. ಅದೇ 8GB + 256GB ಮತ್ತು 12GB + 256GB ಆವೃತ್ತಿಗಳ ಬೆಲೆ ಕ್ರಮವಾಗಿ ರೂ. 40,999 ಮತ್ತು ರೂ. 44,999. ಈ ಹ್ಯಾಂಡ್ಸೆಟ್ ಮಾನ್ಸೂನ್ ಬ್ಲೂ ಮತ್ತು ನಾರ್ದರ್ನ್ ಲೈಟ್ಸ್ ಪರ್ಪಲ್ ಫಿನಿಶ್ಗಳಲ್ಲಿ ಲಭ್ಯವಿದೆ. ಈ ಫೋನ್ ವಿವೋ ವೆಬ್ಸೈಟ್, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಲ್ಲಿ ಏಪ್ರಿಲ್ 9 ರಿಂದ ಮಾರಾಟಕ್ಕೆ ಬರಲಿದೆ.
ವಿವೋ V70 FE ಫೀಚರ್ಸ್
ವಿವೋ V70 FE ಫೋನ್ 6.83-ಇಂಚಿನ 1.5K OLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ, 1,900 nits ವರೆಗಿನ ಗರಿಷ್ಠ ಬ್ರ್ಐಟ್ನೆಸ್ ಮತ್ತು HDR10+ ಪ್ರಮಾಣೀಕರಣವನ್ನು ಹೊಂದಿದೆ. 4nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 7360-ಟರ್ಬೊ ಚಿಪ್ಸೆಟ್ನಿಂದ ಚಾಲಿತವಾಗಿದೆ, 12GB ವರೆಗಿನ LPDDR5 RAM ಮತ್ತು 512GB ವರೆಗಿನ UFS 3.1 ಆನ್ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಇದು ಆಂಡ್ರಾಯ್ಡ್ 16-ಆಧಾರಿತ OriginOS 6 ನೊಂದಿಗೆ ಬರುತ್ತದೆ. ಮತ್ತೊಂದು ವಿಶೇಷ ಎಂದರೆ ಇದರ ಮುಂಭಾಗದ ಕ್ಯಾಮೆರಾ ಸುತ್ತಲೂ Origin Island ವೈಶಿಷ್ಟ್ಯವನ್ನು ಒಳಗೊಂಡಿದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, 200-ಮೆಗಾಪಿಕ್ಸೆಲ್ ಆಕರ್ಷಕ ಕ್ಯಾಮೆರಾ ನೀಡಲಾಗಿದೆ. ಇದು 1/1.56-ಇಂಚಿನ ಮುಖ್ಯ ಸೆನ್ಸರ್, f/1.88 ಅಪರ್ಚರ್ನಿಂದ ಕೂಡಿದೆ. ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), f/2.2 ಅಪರ್ಚರ್ ಹೊಂದಿರುವ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್, 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಔರಾ ಲೈಟ್ ಬೆಂಬಲವನ್ನು ಹೊಂದಿದೆ. ಮುಂಭಾಗದಲ್ಲಿ, ಇದು f/2.2 ಅಪರ್ಚರ್ ಹೊಂದಿರುವ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್ಸೆಟ್ AI-ಬೆಂಬಲಿತ 30x ಸೂಪರ್ ಜೂಮ್ ಜೊತೆಗೆ AI ಮ್ಯಾಜಿಕ್ ವೆದರ್, AI ಮ್ಯಾಜಿಕ್ ಲ್ಯಾಂಡ್ಸ್ಕೇಪ್ ಮತ್ತು AI ಫೋರ್-ಸೀಸನ್ ಪೋರ್ಟ್ರೇಟ್ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ವಿವೋ, V70 FE ಮಾದರಿಯಲ್ಲಿ ಗೇಮಿಂಗ್ ಹೈಪರ್ಸೆನ್ಸ್ ಆಡಿಯೊದೊಂದಿಗೆ ಡ್ಯುಯಲ್ ಸ್ಪೀಕರ್ಗಳನ್ನು ಒಳಗೊಂಡಿದೆ. ಇದು ಡಾರ್ಕ್ನೆಸ್ ಗ್ಲೋ ತಂತ್ರಜ್ಞಾನವನ್ನು ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಮತ್ತು IP69 ರೇಟಿಂಗ್ಗಳನ್ನು ಹೊಂದಿದೆ ಮತ್ತು ನೀರೊಳಗಿನ ಛಾಯಾಗ್ರಹಣವನ್ನು ಸಹ ಬೆಂಬಲಿಸುತ್ತದೆ. ಇವೆಲ್ಲದರ ಜೊತೆಗೆ 7,000mAh ಬ್ಯಾಟರಿಯನ್ನು ಹೊಂದಿದ್ದು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್ಗೆ ಬೆಂಬಲವನ್ನು ಹೊಂದಿದೆ. ಕಂಪನಿಯು 60 ನಿಮಿಷಗಳಲ್ಲಿ 1 ರಿಂದ 100 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು ಹೇಳಿಕೊಂಡಿದೆ.