ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​​: ಆತ್ಮಹತ್ಯೆಯ ಯೋಚನೆ ಮಾಡಿದ್ದರಾ ಅದ್ವೈತ್ ಉಪಾಧ್ಯಾಯ? – Kannada News | Shivagange Missing Trekker Advaith Upadhyaya: Laptop Reveals Disturbing Online Searches

ನೆಲಮಂಗಲ, ಆಗಸ್ಟ್​​ 10: ಬೆಂಗಳೂರಿನ ಹಣಕಾಸು ಕಂಪನಿ ಉದ್ಯೋಗಿ ಅದ್ವೈತ್ ಉಪಾಧ್ಯಾಯ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ಅದ್ವೈತ್‌ರ ಕಾಡುಗೋಡಿ ಮನೆಯಲ್ಲಿ ಪತ್ತೆಯಾದ ಲ್ಯಾಪ್‌ಟಾಪ್ ಪರಿಶೀಲನೆಯ ವೇಳೆ ಸ್ಪೋಟಕ ಸಂಗತಿಗಳು ಬಯಲಾಗಿವೆ. ಕೃತಕ ಬುದ್ಧಿಮತ್ತೆ (AI) ಮೂಲಕ ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬಹುದು ಮತ್ತು ಶಿವಗಂಗೆಯ ಶಾಂತಲಾ ಡ್ರಾಪ್‌ನಿಂದ ಬಿದ್ದರೆ ಎಷ್ಟು ಸಮಯಕ್ಕೆ ಸಾವು ಸಂಭವಿಸಬಹುದು ಎಂಬ ಬಗ್ಗೆ ಅದ್ವೈತ್ ಮಾಹಿತಿ ಹುಡುಕಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ನಿಶ್ಚಿತಾರ್ಥವಾಗಿದ್ದ ಹುಡುಗಿಗೆ ಬೆಟ್ಟ ಹತ್ತುವಾಗ ಅದ್ವೈತ್ ಫೋಟೋ ಕಳುಹಿಸಿದ್ದರು. ಇದು ಅವರು ಕಳುಹಿಸಿದ ಕೊನೆಯ ಫೋಟೋ ಎಂದು ಹೇಳಲಾಗಿದೆ. ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಸೇರಿದಂತೆ 60ಕ್ಕೂ ಹೆಚ್ಚು ಅಧಿಕಾರಿಗಳು ಮೂರು ದಿನಗಳಿಂದ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಅದ್ವೈತ್‌ರ ಯಾವುದೇ ಕುರುಹು ಪತ್ತೆಯಾಗಿಲ್ಲ. ಪೊಲೀಸರು ಈಗ ಆತ್ಮಹತ್ಯೆಯ ಆಯಾಮದಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ – Kannada News | UPI MDR, Deepak Shenoy opposes percentage based transaction charges

ಕ್ಯಾಪಿಟಲ್‌ಮೈಂಡ್ ಸಿಇಒ ದೀಪಕ್ ಶೆಣೈImage Credit source: https://www.youtube.com/@mundhebanni

ನವದೆಹಲಿ, ಆಗಸ್ಟ್ 10: ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಪೇಮೆಂಟ್​ಗಳಿಗೆ ಇರುವಂತೆ ಯುಪಿಐ ಪಾವತಿಗಳಿಗೂ ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕವನ್ನು ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಸುದ್ದಿ ಇದೆ. ಇದು ಯುಪಿಐ ಪೇಮೆಂಟ್ ಇಕೋಸಿಸ್ಟಂನಲ್ಲಿರುವ ಕಂಪನಿಗಳ ಮೇಲಿನ ಹೊರೆಯನ್ನು ತಗ್ಗಿಸಲು ಸರ್ಕಾರ ಕಂಡುಕೊಂಡಿರುವ ಉಪಾಯ ಎನ್ನಲಾಗಿದೆ. ಆದರೆ, ಯುಪಿಐ ಪೇಮೆಂಟ್​ಗೆ ಎಂಡಿಆರ್ ವಿಧಿಸುವ ಸರ್ಕಾರದ ಕ್ರಮದ ಬಗ್ಗೆ ಕೆಲ ವಲಯಗಳಿಂದ ವಿರೋಧವೂ ಬಂದಿದೆ. ಬೇರೆ ಬೇರೆ ಕಾರಣಗಳಿಗೆ ವಿರೋಧ ಬಂದಿದೆ. ಕ್ಯಾಪಿಟಲ್ ಮೈಂಡ್ (Capitalmind) ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು ಯುಪಿಐ ಪೆಮೆಂಟ್​ಗಳಿಗೆ ಪರ್ಸೆಂಟೇಜ್ ಆಧಾರಿತವಾಗಿ ಎಂಡಿಆರ್ ಹೇರುವುದನ್ನು ವಿರೋಧಿಸಿದ್ದಾರೆ. ಮತ್ತೊಬ್ಬ ಉದ್ಯಮಿ ಅಶ್ನೀರ್ ಗ್ರೋವರ್ ಅವರು ಎಂಡಿಆರ್ ಶುಲ್ಕ ವಿಧಿಸುವ ಕ್ರಮವೇ ತಪ್ಪು ಎಂದಿದ್ದಾರೆ.

ಶೇಕಡಾವಾರು MDR ಅನಗತ್ಯ, ಕ್ಯಾಪಿಂಗ್ ಇರಲಿ: ಶೆಣೈ

ಕ್ಯಾಪಿಟಲ್‌ಮೈಂಡ್ ಸಿಇಒ ದೀಪಕ್ ಶೆಣೈ ಅವರು UPI ವಹಿವಾಟುಗಳಿಗೆ ಶೇಕಡಾವಾರು ಆಧಾರಿತ MDR ಹೇರುವುದನ್ನು ವಿರೋಧಿಸಿದ್ದಾರೆ. NEFT ಮತ್ತು RTGS ಪಾವತಿಗಳಂತೆ UPI ಕೂಡ ಅಗ್ಗವಾಗಿರಬೇಕು. ಶೇಕಡಾವಾರು ಆಧಾರಿತ ಶುಲ್ಕ ನೀಡುವ ಬದಲು, ಪ್ರತಿ ವಹಿವಾಟಿಗೆ ಗರಿಷ್ಠ ₹5 ಅಥವಾ ಶೇ. 0.2 (ಯಾವುದು ಕಡಿಮೆಯೋ ಅದು) ನಷ್ಟು ಮಾತ್ರ ಪರಿಮಿತಿ (Cap) ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಶೇಕಡಾವಾರು ಆಧಾರದಲ್ಲಿ ಶುಲ್ಕ ಹೆಚ್ಚಾದರೆ ದೊಡ್ಡ ಮಟ್ಟದ ವಹಿವಾಟುಗಳಿಗೆ ತೊಂದರೆಯಾಗುತ್ತದೆ. ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆ ಇಲ್ಲದೆ ಹಣ ಹರಿಯಲು ಅವಕಾಶ ನೀಡಬೇಕು ಎಂಬುದು ಅವರ ಸ್ಪಷ್ಟ ನಿಲುವು.

ಇದನ್ನೂ ಓದಿ: ಯುಪಿಐ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

ಬ್ಯಾಂಕುಗಳ ಫ್ಲೋಟ್ ಇನ್ಕಮ್: ಗ್ರಾಹಕರು ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಇರಿಸುವ ಹಣದಿಂದ ಬ್ಯಾಂಕುಗಳು ಭಾರಿ ಪ್ರಮಾಣದ ‘ಫ್ಲೋಟ್ ಆದಾಯ’ (Float Income- ಆಡ್ವಾನ್ಸ್ ಸೌಲಭ್ಯಗಳಿಂದ ಗಳಿಸುವ ಲಾಭ) ಗಳಿಸುತ್ತವೆ. ಈ ಆದಾಯವು UPI ನಿರ್ವಹಣೆಗೆ ತಗುಲುವ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ. ಹೀಗಾಗಿ ಪಾವತಿ ವ್ಯವಸ್ಥೆಯನ್ನು ಉಚಿತವಾಗಿ ಅಥವಾ ಅತಿ ಕಡಿಮೆ ವೆಚ್ಚದಲ್ಲಿ ನಿರ್ವಹಿಸಲು ಬ್ಯಾಂಕುಗಳಿಗೆ ಸಾಧ್ಯವಿದೆ ಎನ್ನುವ ವಾದ ಇದೆ.

“ಇದು ಹಿಮ್ಮುಖ ಹೆಜ್ಜೆ”: ಅಶ್ನೀರ್ ಗ್ರೋವರ್ ಎಚ್ಚರಿಕೆ

ಮತ್ತೊಂದೆಡೆ, ಭಾರತ್‌ಪೇ (BharatPe) ಮಾಜಿ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು “ಹಿಮ್ಮುಖ ಹೆಜ್ಜೆ” (Regressive Step) ಎಂದು ಕರೆದಿದ್ದಾರೆ.

“ಭಾರತದಲ್ಲಿ ಪ್ರಸ್ತುತ ಗಡಿಯಾರದ ಮುಳ್ಳಿನಂತೆ ಕಂಟಕವಿಲ್ಲದೆ, ಸರಾಗವಾಗಿ ನಡೆಯುತ್ತಿರುವ ಏಕೈಕ ವ್ಯವಸ್ಥೆ ಎಂದರೆ ಅದು ಮೊಬೈಲ್ ಪಾವತಿ. UPI ಮೇಲೆ MDR ಹೇರುವುದು ಈ ಯಶಸ್ವಿ ವ್ಯವಸ್ಥೆಯನ್ನೇ ನಾಶಮಾಡಲಿದೆ” ಎಂದು ಗ್ರೋವರ್ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸಬೇಕು. ವ್ಯಾಪಾರಿಗಳ ಮೇಲೆ ಶುಲ್ಕ ವಿಧಿಸಿದರೆ, ಅವರು ಡಿಜಿಟಲ್ ಪಾವತಿ ಸ್ವೀಕರಿಸುವುದನ್ನು ನಿಲ್ಲಿಸಿ ಮತ್ತೆ ನಗದು (Cash) ವಹಿವಾಟಿಗೆ ಮರಳುವ ಅಪಾಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಯುಪಿಐ ಬಳಸಲು ಶುಲ್ಕ ಪಾವತಿಸಬೇಕೇ? ಹಲವು ವದಂತಿಗಳಿಗೆ ಇಲ್ಲಿದೆ ಸ್ಪಷ್ಟನೆ

ಗ್ರಾಹಕರಿಗೆ ಯಾವುದೇ ಶುಲ್ಕ ಇಲ್ಲ ಎನ್ನುವ ಸರ್ಕಾರ

ಕೇಂದ್ರ ಸರ್ಕಾರವು ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ’ಗೆ ತಿದ್ದುಪಡಿ ತರಲು ಮಸೂದೆ ಮಂಡಿಸಿದ್ದು, ಭವಿಷ್ಯದಲ್ಲಿ ಅಗತ್ಯ ಬಿದ್ದರೆ ದೊಡ್ಡ ಮಟ್ಟದ ವ್ಯಾಪಾರಿಗಳಿಗೆ MDR ವಿಧಿಸುವ ಅಧಿಕಾರವನ್ನು ಪಡೆಯಲಿದೆ. ಸಾಮಾನ್ಯ ಗ್ರಾಹಕರಿಗೆ ಯಾವುದೇ ಎಂಡಿಆರ್ ಶುಲ್ಕ ಇರುವುದಿಲ್ಲ, ಅವರ ಯಾವುದೇ ಯುಪಿಐ ಪಾವತಿಗೂ ಶುಲ್ಕ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ದೊಡ್ಡ ವ್ಯಾಪಾರಿಗಳಿಗೆ ಎಂಡಿಆರ್ ಶುಲ್ಕ ವಿಧಿಸಿದರೂ ಆ ಹೊರೆ ಅಂತಿಮವಾಗಿ ಗ್ರಾಹಕರಿಗೇ ವರ್ಗಾವಣೆ ಆಗುತ್ತದೆ ಎನ್ನುವ ವಾದವಿದೆ. ಸರ್ಕಾರವು ಎಂಡಿಆರ್ ಶುಲ್ಕಕ್ಕೆ ಗರಿಷ್ಠ ಮಿತಿಯನ್ನು ನಿಗದಿ ಮಾಡುವ ಬಗ್ಗೆ ಆಲೋಚಿಸಬಹುದು. ಆದರೆ, ಶೇಕಡಾವಾರುವಾಗಿ ಶುಲ್ಕ ವಿಧಿಸಲಾಗುತ್ತದೆ ಎಂದೂ ಸರ್ಕಾರ ಹೇಳಿಲ್ಲ. ಹೀಗಾಗಿ, ಸರ್ಕಾರದ ನಡೆ ಏನು ಎಂದು ಕಾದು ನೋಡಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದುನಿಯಾ ವಿಜಯ್ ಸಿನಿಮಾದಲ್ಲಿ ಖಡಕ್ ಪಾತ್ರದ ಮೂಲಕ ಎಂಟ್ರಿ ಕೊಟ್ಟ ಟಬು – Kannada News | Tabu Steps Into Vijay Sethupathi and Puri Jagannadh’s SlumDog 33 Temple Road as a Ruthless IT Officer

ವಿಜಯ್ ಸೇತುಪತಿ, ದುನಿಯಾ ವಿಜಯ್ ಅಭಿನಯದ, ಪೂರಿ ಜಗನ್ನಾಥ್ ನಿರ್ದೇಶನದ ‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ಸಿನಿಮಾದಲ್ಲಿ ಖ್ಯಾತ ನಟಿ ಟಬು ನಟಿಸುತ್ತಿದ್ದಾರೆ. ಚಿತ್ರತಂಡ ಈಗ ಅವರ ಪಾತ್ರದ ವಿಶೇಷ ಝಲಕ್ ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಅವರು ಗೌರಿ ಹೆಗ್ಡೆ ಎಂಬ ಶಕ್ತಿಶಾಲಿ ಹಾಗೂ ಭ್ರಷ್ಟರಿಗೆ ಸಿಂಹಸ್ವಪ್ನವಾದ ಆದಾಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟಬು ಅವರ ಪವರ್‌ಫುಲ್ ಲುಕ್

ಈ ಸಿನಿಮಾದಲ್ಲಿ ಟಬು ಅವರದ್ದು ಅತ್ಯಂತ ರಗಡ್ ಪಾತ್ರ. ಅವರು ತಮ್ಮ ಆ್ಯಕ್ಷನ್ ಅವತಾರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ಕನ್ನಡದಲ್ಲೂ ಬರುತ್ತಿದೆ. ಹೀಗಾಗಿ, ಕನ್ನಡದಲ್ಲೂ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಸದ್ಯ ಟಬು ಪಾತ್ರ ಪರಿಚಯ ಕನ್ನಡ ಭಾಷೆಯಲ್ಲೂ ಸಿಕ್ಕಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.

ಪೂರಿ ಜಗನ್ನಾಥ್ ತಮ್ಮ ನಾಯಕಿಯರ ಪಾತ್ರಗಳನ್ನು ವಿಭಿನ್ನವಾಗಿ ತೋರಿಸುತ್ತಾರೆ. ಅವರ ಪಾತ್ರಗಳಿಗೆ ಒಂದು ವಿಶೇಷ ತೂಕ ಇರುತ್ತದೆ. ಈ ಚಿತ್ರದಲ್ಲೂ ಟಬು ಪಾತ್ರದ ಗತ್ತು ಎದ್ದು ಕಾಣುತ್ತಿದೆ. ಈ ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.

ದೊಡ್ಡ ತಾರಾಗಣದ ಚಿತ್ರ

ಈ ಸಿನಿಮಾದಲ್ಲಿ ಕೇವಲ ಆ್ಯಕ್ಷನ್ ಮಾತ್ರವಲ್ಲದೆ ಬಲವಾದ ಕಥೆಯೂ ಇದೆ ಎಂದು ನಿರ್ದೇಶಕ ಪೂರಿ ಜಗನ್ನಾಥ್ ಹೇಳಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಪ್ರತಿಯೊಂದು ದೃಶ್ಯವೂ ಕುತೂಹಲ ಮೂಡಿಸಲಿದೆ. ನಟಿ ಸಂಯುಕ್ತ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಕೂಡ ಅಭಿನಯಿಸಿದ್ದಾರೆ. ಪ್ರತಿಯೊಬ್ಬರ ಪಾತ್ರಕ್ಕೂ ಇಲ್ಲಿ ವಿಶೇಷ ಮಹತ್ವ ನೀಡಲಾಗಿದೆ ಎಂಬುದು ನಿರ್ದೇಶಕರ ಮಾತು.

ಇದನ್ನೂ ಓದಿ: ‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ; ಏನದು?

ಈ ಬಹುಭಾಷಾ ಚಿತ್ರವನ್ನು ಪೂರಿ ಜಗನ್ನಾಥ್, ಚಾರ್ಮಿ ಕೌರ್ ಹಾಗೂ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹರ್ಷವರ್ಧನ್ ರಾಮೇಶ್ವರ್ ಸಂಗೀತ ನೀಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ. ಬೆಳ್ಳಿತೆರೆಯ ಮೇಲೆ ಟಬು ಅವರ ಈ ಹೊಸ ಅವತಾರವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆಯ ನಂತರ ಈ ಪಾತ್ರ ಪ್ರೇಕ್ಷಕರನ್ನು ಎಷ್ಟು ರಂಜಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇಂದ್ರ ಸಂಸ್ಕೃತ ವಿವಿಯಿಂದ ಸ್ವಾಮಿ ಭದ್ರೇಶದಾಸ್‌ಗೆ ‘ವೇದಾಂತವಿದ್ಯಾ-ವಿಶ್ವಗುರು’ ಬಿರುದು ಪ್ರದಾನ – Kannada News | Central Sanskrit University Honours BAPS Scholar Swami Bhadreshdas as Vedantavidya Vishwaguru

ಕೇಂದ್ರ ಸಂಸ್ಕೃತ ವಿವಿಯಿಂದ ಸ್ವಾಮಿ ಭದ್ರೇಶದಾಸ್‌ಗೆ ‘ವೇದಾಂತವಿದ್ಯಾ-ವಿಶ್ವಗುರು’ ಬಿರುದು ಪ್ರದಾನImage Credit source: Central Sanskrit University

ನವದೆಹಲಿ, ಆಗಸ್ಟ್ 10: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು (Central Sanskrit University) ಬಿಎಪಿಎಸ್‌ನ ಖ್ಯಾತ ವಿದ್ವಾಂಸ ಹಾಗೂ ತತ್ವಜ್ಞಾನಿ ಮಹಾಮಹೋಪಾಧ್ಯಾಯ ಸ್ವಾಮಿ ಭದ್ರೇಶದಾಸ್ (Swami Bhadreshdas) ಅವರಿಗೆ ‘ವೇದಾಂತವಿದ್ಯಾ-ವಿಶ್ವಗುರು (Vedantavidya-Vishwaguru)’ ಎಂಬ ಗೌರವ ಬಿರುದನ್ನು ಪ್ರದಾನ ಮಾಡಿದೆ. ಆಗಸ್ಟ್ 9ರಂದು ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮದಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವ ನೀಡಲಾಯಿತು. ಸ್ವಾಮಿ ಭದ್ರೇಶದಾಸ್ ಅವರು ವೇದಾಂತದ ಮೂರು ಪ್ರಮುಖ ಆಧಾರ ಗ್ರಂಥಗಳಾದ ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಭಗವದ್ಗೀತೆಗಳಿಗೆ ಶಾಸ್ತ್ರೀಯ ಸಂಸ್ಕೃತ ಭಾಷ್ಯಗಳನ್ನು ರಚಿಸಿದ್ದಾರೆ. ಈ ಮೂರು ಗ್ರಂಥಗಳನ್ನು ಒಟ್ಟಾಗಿ ‘ಪ್ರಸ್ಥಾನತ್ರಯ’ ಎಂದು ಕರೆಯಲಾಗುತ್ತದೆ. ಪ್ರಸ್ಥಾನತ್ರಯದ ಮೂರೂ ಆಧಾರಗಳಿಗೂ ಸಂಪೂರ್ಣ ಸಂಸ್ಕೃತ ಭಾಷ್ಯ ರಚಿಸಿರುವುದು ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ.

ಪ್ರಮುಖ್ ಸ್ವಾಮಿ ಮಹಾರಾಜರ ಪ್ರೇರಣೆಯಿಂದ ಈ ಕಾರ್ಯವನ್ನು ಕೈಗೊಂಡಿರುವ ಸ್ವಾಮಿ ಭದ್ರೇಶದಾಸ್, ಮಹಾಂತ ಸ್ವಾಮಿ ಮಹಾರಾಜರ ಮಾರ್ಗದರ್ಶನದಲ್ಲಿ ಸಂಸ್ಕೃತ, ವೇದಾಂತ ಹಾಗೂ ಭಾರತೀಯ ಜ್ಞಾನ ಪರಂಪರೆಯ ಅಧ್ಯಯನ ಮತ್ತು ಜಾಗತಿಕ ಮಟ್ಟದ ಪ್ರಸಾರಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗೌರವ ಪ್ರದಾನ ಸಮಾರಂಭದಲ್ಲಿ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರ್ಖೇಡಿ, ಶ್ರೀ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುಕಾಂತ ಕುಮಾರ್ ಸೇನಾಪತಿ ಸೇರಿದಂತೆ ಹಲವು ಗಣ್ಯ ಸಂಸ್ಕೃತ ವಿದ್ವಾಂಸರು ಭಾಗವಹಿಸಿದ್ದರು.

ಸಮಾರಂಭದಲ್ಲಿ ಮಾತನಾಡಿದ ವಿದ್ವಾಂಸರು ಸ್ವಾಮಿ ಭದ್ರೇಶದಾಸ್ ಅವರ ಸಂಸ್ಕೃತ ಮತ್ತು ವೇದಾಂತ ಕ್ಷೇತ್ರದ ಕೊಡುಗೆಯನ್ನು ಶ್ಲಾಘಿಸಿದರು. ಪ್ರೊ. ಶ್ರೀನಿವಾಸ ವರ್ಖೇಡಿ ಅವರು ಸಂಸ್ಕೃತ ಪ್ರಸ್ಥಾನತ್ರಯ ಪರಂಪರೆಯಲ್ಲಿ ಅಕ್ಷರ-ಪುರುಷೋತ್ತಮ ದರ್ಶನಕ್ಕೆ ಶಾಸ್ತ್ರೀಯ ಚೌಕಟ್ಟು ರೂಪಿಸುವಲ್ಲಿ ಸ್ವಾಮಿ ಭದ್ರೇಶದಾಸ್ ಅವರ ಕೊಡುಗೆಯನ್ನು ಉಲ್ಲೇಖಿಸಿದರು.

ಪ್ರೊ. ಸುಕಾಂತ ಕುಮಾರ್ ಸೇನಾಪತಿ ಮಾತನಾಡಿ, ಸ್ವಾಮಿ ಭದ್ರೇಶದಾಸ್ ಅವರ ವಿದ್ವತ್ ಪಯಣದಲ್ಲಿ ಪ್ರಮಖ್ ಸ್ವಾಮಿ ಮಹಾರಾಜರು ಮತ್ತು ಮಹಾಂತ ಸ್ವಾಮಿ ಮಹಾರಾಜರು ನೀಡಿದ ಆಶೀರ್ವಾದ ಹಾಗೂ ಮಾರ್ಗದರ್ಶನದ ಮಹತ್ವವನ್ನು ವಿವರಿಸಿದರು. ಪ್ರೊ. ವಿ. ನಾರಾಯಣನ್ ಅವರು ಅಧಿಕೃತ ಗೌರವ ಪತ್ರವನ್ನು ವಾಚಿಸಿದರು.

ಇದನ್ನೂ ಓದಿ: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯುಜಿಸಿ ಗುಡ್​​ನ್ಯೂಸ್​; ವರ್ಷಕ್ಕೆ 1.5 ಲಕ್ಷ ರೂ. ವಿದ್ಯಾರ್ಥಿವೇತನ!

ಗೌರವ ಸ್ವೀಕರಿಸಿದ ಸ್ವಾಮಿ ಭದ್ರೇಶದಾಸ್, ಈ ವಿಶೇಷ ಮಾನ್ಯತೆಯನ್ನು ಭಗವಾನ್ ಸ್ವಾಮಿನಾರಾಯಣ ಹಾಗೂ ತಮ್ಮ ಗುರುಗಳಾದ ಪ್ರಮಖ್ ಸ್ವಾಮಿ ಮಹಾರಾಜ ಮತ್ತು ಮಹಾಂತ ಸ್ವಾಮಿ ಮಹಾರಾಜರ ಪಾದಗಳಿಗೆ ಸಮರ್ಪಿಸುವುದಾಗಿ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇವಾಲಯಗಳಲ್ಲಿ ಸೆಪ್ಟೆಂಬರ್ 1 ರಿಂದ ‘ನೋ ಮೊಬೈಲ್’: ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ – Kannada News | TN Temple Mobile Ban and Deposit Counters: New Rules for Devotees, VIPs from September 1st

ತಮಿಳುನಾಡು, ಆ.10: ತಮಿಳುನಾಡಿನಾದ್ಯಂತ ಇರುವ ಎಲ್ಲಾ ಪ್ರಸಿದ್ಧ ದೇವಸ್ಥಾನಗಳ ಒಳಗೆ ಮೊಬೈಲ್ ಫೋನ್‌ಗಳ ಬಳಕೆಯನ್ನು ಸೆಪ್ಟೆಂಬರ್ 1 ರಿಂದ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದರ್ಮಾದಾಯ (HR&CE) ಸಚಿವ ಎಸ್. ರಮೇಶ್ ಘೋಷಿಸಿದ್ದಾರೆ.

ತಿರುಚಿಯ ಶ್ರೀರಂಗಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭಕ್ತಾದಿಗಳು ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ಮೊಬೈಲ್ ಫೋನ್‌ಗಳನ್ನು ಇಡಲು ದೇವಸ್ಥಾನದ ಹೊರಗೆ ಅಥವಾ ಪ್ರವೇಶ ದ್ವಾರದಲ್ಲೇ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

ನಿಷೇಧಕ್ಕೆ ಮುಖ್ಯ ಕಾರಣವೇನು?:

ಇತ್ತೀಚಿನ ದಿನಗಳಲ್ಲಿ ಹಲವು ದೇವಸ್ಥಾನಗಳ ಗರ್ಭಗುಡಿ ಹಾಗೂ ಪವಿತ್ರ ಪೂಜಾ ಕೈಂಕರ್ಯಗಳ ವೀಡಿಯೊಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸಲಾಗುತ್ತಿತ್ತು. ದೇವಸ್ಥಾನಗಳ ಆವರಣದಲ್ಲಿ ಸಾಮಾಜಿಕ ಜಾಲತಾಣಗಳಿಗಾಗಿ ‘ರೀಲ್ಸ್’ ಮತ್ತು ಶಾರ್ಟ್ಸ್ ವೀಡಿಯೊಗಳನ್ನು ಮಾಡುವುದನ್ನು ತಡೆಯುವುದು ಹಾಗೂ ಪವಿತ್ರತೆಯನ್ನು ಕಾಪಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.

ಠೇವಣಿ ಕೌಂಟರ್ ಮತ್ತು ಸೇವಾ ಶುಲ್ಕ:

ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಮೊಬೈಲ್ ಫೋನ್‌ಗಳನ್ನು ಸುರಕ್ಷಿತವಾಗಿಡಲು ಪ್ರತ್ಯೇಕ ‘ಡೆಪಾಸಿಟ್ ಕೌಂಟರ್’ ಸ್ಥಾಪಿಸಲಾಗುತ್ತದೆ. ವರದಿಗಳ ಪ್ರಕಾರ, ಭಕ್ತರು ದೇವದರ್ಶನ ಮುಗಿಸಿ ಬರುವವರೆಗೆ ಮೊಬೈಲ್ ಸುರಕ್ಷತೆಗಾಗಿ ಪ್ರತಿ ಫೋನ್‌ಗೆ 5 ರೂ ಶುಲ್ಕ ವಿಧಿಸಲಾಗುತ್ತದೆ.

ಇದನ್ನೂ ಓದಿ: ಜಮೀನಿನಲ್ಲಿ ಹೂತುಹಾಕಿದ್ದ 5 ಲಕ್ಷ ರೂ. ನೋಟುಗಳನ್ನು ತಿಂದ ಗೆದ್ದಲು: ಮರೆವಿನಿಂದ ರೈತನಿಗೆ ಎದುರಾಯ್ತು ಬಹುದೊಡ್ಡ ಸಂಕಷ್ಟ

ವಿಐಪಿ, ರಾಜಕಾರಣಿಗಳು ಮತ್ತು ಚಿತ್ರನಟರಿಗೆ ಬಿಗಿ ನಿಯಮಗಳು:

ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿಐಪಿಗಳ (VIP) ಭೇಟಿಗೆ ಸಂಬಂಧಿಸಿದಂತೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜಕಾರಣಿಗಳು, ಚಲನಚಿತ್ರ ತಾರೆಯರು ಹಾಗೂ ಇತರ ಗಣ್ಯರು ದೇವಾಲಯಕ್ಕೆ ಭೇಟಿ ನೀಡುವ ಒಂದು ದಿನ ಮುಂಚಿತವಾಗಿ HR&CE ಆಯುಕ್ತರಿಗೆ ಮಾಹಿತಿ ನೀಡಬೇಕು. ಭೇಟಿಯ ಸಮಯ ಹಾಗೂ ಜೊತೆಯಲ್ಲಿ ಬರುವವರ ಸಂಖ್ಯೆಯನ್ನು ಸ್ಪಷ್ಟಪಡಿಸಬೇಕು. ತುರ್ತು ಸಂದರ್ಭದ ವಿಐಪಿ ಭೇಟಿಗಳಿದ್ದರೂ, ಸಾಮಾನ್ಯ ಭಕ್ತರ ದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ವಿಐಪಿ ಭೇಟಿಗಳ ಸಂದರ್ಭದಲ್ಲೂ ದೇವಾಲಯದ ಒಳಗೆ ಯಾವುದೇ ರೀತಿಯ ವೀಡಿಯೋಗ್ರಫಿ ಅಥವಾ ಫೋಟೋಗ್ರಫಿಗೆ ಅವಕಾಶವಿರುವುದಿಲ್ಲ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ: ಪ್ರಮುಖ ನಾಯಕರು ಭಾಗಿ – Kannada News | BJP Organises Har Ghar Tiranga Rally in Bengaluru Ahead of Independence Day

ಬೆಂಗಳೂರು, ಆಗಸ್ಟ್​​ 10: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ತ್ರಿವರ್ಣ ಧ್ವಜ ಯಾತ್ರೆ ನಡೆಯಿತು. ಕೆ.ಸಿ. ಜನರಲ್ ಆಸ್ಪತ್ರೆಯ ಮುಂಭಾಗದ ಸರ್ಕಾರಿ ಶಾಲೆಯ ಬಳಿಯಿಂದ ಆರಂಭವಾದ ಈ ಯಾತ್ರೆಯ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವಥನಾರಾಯಣ್ ಸೇರಿದಂತೆ ಹಲವು ಪ್ರಮುಖ ನಾಯಕರು ವಹಿಸಿದ್ದರು. ಯಾತ್ರೆಯ ಉದ್ದಕ್ಕೂ “ಭಾರತ್ ಮಾತಾ ಕಿ ಜೈ”, “ವಂದೇ ಮಾತರಂ”ನಂತಹ ಘೋಷಣೆಗಳು ಮೊಳಗಿದವು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟೀಮ್ ಇಂಡಿಯಾ ಆಟಗಾರರು ಗಾಯಗೊಳ್ಳಲು IPL ಕಾರಣ! – Kannada News | IPL Teams Forcing Injured Indian Cricketers into Action

ಭಾರತೀಯ ಕ್ರಿಕೆಟ್‌ನಲ್ಲಿ ಸದ್ಯ ಆತಂಕಕಾರಿ ಮತ್ತು ಅತ್ಯಂತ ವಿವಾದಾತ್ಮಕ ವಿಷಯವೊಂದು ಮುನ್ನೆಲೆಗೆ ಬಂದಿದೆ. ನಗದು ಸಮೃದ್ಧ ಐಪಿಎಲ್ (IPL) ಫ್ರಾಂಚೈಸಿಗಳು ತಮ್ಮ ಆರ್ಥಿಕ ಲಾಭಕ್ಕಾಗಿ ಭಾರತದ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರನ್ನು ಗಾಯದ ನಡುವೆಯೂ ಬಲವಂತವಾಗಿ ಆಡಿಸುತ್ತಿವೆ ಎಂದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮೂಲಗಳು ಗಂಭೀರ ಆರೋಪ ಮಾಡಿವೆ.

ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿರುವ ಈ ಆಘಾತಕಾರಿ ಮಾಹಿತಿ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಐಪಿಎಲ್ ತಂಡಗಳ ನಡುವಿನ ಆಂತರಿಕ ಸಂಘರ್ಷವನ್ನು ಬೀದಿಗೆ ತಂದಿದೆ. ರಾಷ್ಟ್ರೀಯ ತಂಡದ ಹಿತಾಸಕ್ತಿಯನ್ನು ಬಲಿಗೊಟ್ಟು ಆಟಗಾರರ ಫಿಟ್‌ನೆಸ್ ಜತೆ ಚದುರಂಗದ ಆಟವಾಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕೋಟಿ ಕೋಟಿ ಹೂಡಿಕೆಯ ಒತ್ತಡ:

ಫ್ರಾಂಚೈಸಿಗಳು ಹರಾಜಿನಲ್ಲಿ ಆಟಗಾರರ ಮೇಲೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುತ್ತವೆ. ಹೀಗಾಗಿ, ಸಣ್ಣ-ಪುಟ್ಟ ಗಾಯಗಳಿದ್ದರೂ ಆಟಗಾರರು ವಿಶ್ರಾಂತಿ ಪಡೆಯದಂತೆ ಅವರ ಮೇಲೆ ತೀವ್ರ ಮಾನಸಿಕ ಮತ್ತು ಒಪ್ಪಂದದ ಒತ್ತಡ ಹೇರಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಇಂಜೆಕ್ಷನ್ ಪಡೆದು ಆಡ್ತಿದ್ದಾರೆ!

ತಂಡದಿಂದ ಹೊರಬಿದ್ದರೆ ಸ್ಥಾನ ಕಳೆದುಕೊಳ್ಳುವ ಭೀತಿ ಮತ್ತು ಫ್ರಾಂಚೈಸಿಗಳ ಮ್ಯಾನೇಜ್‌ಮೆಂಟ್ ಒತ್ತಡಕ್ಕೆ ಮಣಿದು ಸ್ಟಾರ್ ಆಟಗಾರರು ನೋವಿನ ಇಂಜೆಕ್ಷನ್ ಅಥವಾ ಮಾತ್ರೆಗಳನ್ನು ಪಡೆದು ಆಡುತ್ತಿದ್ದಾರೆ ಎಂಬ ವಿಚಾರ ಕೂಡ ಈ ಆರೋಪದೊಂದಿಗೆ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಫಿಸಿಯೋಗಳ ಮೇಲೆ ಹೊರೆ:

ಐಪಿಎಲ್‌ನಲ್ಲಿ ಗಾಯವನ್ನು ಮತ್ತಷ್ಟು ಉಲ್ಬಣಗೊಳಿಸಿಕೊಂಡ ನಂತರ, ಫ್ರಾಂಚೈಸಿಗಳು ಆಟಗಾರರನ್ನು ಗುಣಮುಖರನ್ನಾಗಿ ಮಾಡುವ ಜವಾಬ್ದಾರಿಯನ್ನು ಬೆಂಗಳೂರಿನ CoE ಫಿಸಿಯೋಗಳ ಮೇಲೆ ತಳ್ಳುತ್ತಿವೆ. ಇದೇ ಕಾರಣದಿಂದಾಗಿ ಇದೀಗ ಟೀಮ್ ಇಂಡಿಯಾದ ಹಲವು ಆಟಗಾರರು ‘ಸೆಂಟರ್ ಆಫ್ ಎಕ್ಸಲೆನ್ಸ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

13 ಸ್ಟಾರ್ ಆಟಗಾರರು ಗಾಯಾಳು!

ಸದ್ಯ ಭಾರತದ ಸುಮಾರು 13 ಪ್ರಮುಖ ಕ್ರಿಕೆಟಿಗರು ತೀವ್ರ ಗಾಯದ ಸಮಸ್ಯೆಯಿಂದಾಗಿ ಬೆಂಗಳೂರಿನ CoE ನಲ್ಲಿ ರಿಹ್ಯಾಬ್​ ಶಿಬಿರದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಹೊತ್ತಿಗೇ ಭಾರತ ತಂಡ ಇಷ್ಟೊಂದು ದೊಡ್ಡ ಫಿಟ್‌ನೆಸ್ ಬ್ಯಾಕ್‌ಲ್ಯಾಶ್ ಎದುರಿಸುತ್ತಿರುವುದು ಇದೇ ಮೊದಲು.

  • ಜಸ್​ಪ್ರೀತ್ ಬುಮ್ರಾ: ಮೊಣಕಾಲು ನೋವಿನ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಹಾರ್ದಿಕ್ ಪಾಂಡ್ಯ: ಕ್ವಾಡ್ರಿಸೆಪ್ಸ್ ಸ್ನಾಯು ಸೆಳೆತದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.
  • ವಾಷಿಂಗ್ಟನ್ ಸುಂದರ್: ಕ್ವಾಡ್ರಿಸೆಪ್ಸ್ ಇಂಜುರಿಯಿಂದಾಗಿ ರಿಹ್ಯಾಬ್‌ನಲ್ಲಿದ್ದಾರೆ.
  • ಹರ್ಷಿತ್ ರಾಣಾ: ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಗೆ ತುತ್ತಾಗಿದ್ದಾರೆ.
  • ನಿತೀಶ್ ಕುಮಾರ್ ರೆಡ್ಡಿ: ಹ್ಯಾಮ್‌ಸ್ಟ್ರಿಂಗ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
  • ಸಾಯಿ ಸುದರ್ಶನ್: ಎಡಗಾಲಿನ ಹೆಬ್ಬೆರಳಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಆಕಾಶ್ ದೀಪ್: ಬೆನ್ನಿನ ಕೆಳಭಾಗದ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
  • ವರುಣ್ ಚಕ್ರವರ್ತಿ: ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಪ್ರಿನ್ಸ್ ಯಾದವ್: ಹ್ಯಾಮ್‌ಸ್ಟ್ರಿಂಗ್ ಇಂಜುರಿಯಿಂದಾಗಿ CoE ನಲ್ಲಿದ್ದಾರೆ.

ಇದನ್ನೂ ಓದಿ: RCB ಮಾಸ್ಟರ್​ಮೈಂಡ್​ಗಳ ರಣತಂತ್ರ ಉಲ್ಟಾ ಪಲ್ಟಾ!

ಒಟ್ಟಾರೆಯಾಗಿ ಹೇಳುವುದಾದರೆ, ಕೋಟಿ ಕೋಟಿ ಹಣ ಹರಿಯುವ ಐಪಿಎಲ್‌ನ ಗ್ಲಾಮರ್ ಮತ್ತು ಫ್ರಾಂಚೈಸಿಗಳ ಆರ್ಥಿಕ ಹಿತಾಸಕ್ತಿಗಳ ನಡುವೆ ದೇಶಕ್ಕಾಗಿ ಆಡುವ ಆಟಗಾರರ ಫಿಟ್‌ನೆಸ್ ಬಲಿಯಾಗುತ್ತಿದೆಯೇ ಎಂಬ ಅನುಮಾನ ಈಗ ದಟ್ಟವಾಗಿದೆ. ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮೂಲಗಳು ಮಾಡಿರುವ ಈ ಗಂಭೀರ ಆರೋಪಗಳು ಕೇವಲ ಒಂದು ವಿವಾದವಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

Source link

ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ: ಪೊಲೀಸ್ ವಸತಿಗೃಹಗಳತ್ತ ಕೊಚ್ಚಿಬಂತು ನೂರಾರು ಟನ್ ಕಸದ ರಾಶಿ! – Kannada News | Madikeri Landslide: Garbage Dump Collapses at Stone Hill, Threatens Police Quarters

ಮಡಿಕೇರಿ, ಆಗಸ್ಟ್ 10: ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸ್ಟೋನ್ ಹಿಲ್ ಬೆಟ್ಟದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮೇಲಿದ್ದ ನೂರಾರು ಟನ್ ಕಸದ ರಾಶಿ ಕೆಳಭಾಗಕ್ಕೆ ಕೊಚ್ಚಿಹೋಗಿದೆ. ಬೆಟ್ಟದ ತುದಿಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದುದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.

ಬೆಟ್ಟದ ತಪ್ಪಲಿನಲ್ಲಿಯೇ ಪೊಲೀಸ್ ವಸತಿ ಗೃಹಗಳಿದ್ದು, ಕಸದ ರಾಶಿ ಹಾಗೂ ಮಣ್ಣು ವಸತಿ ಸಮುಚ್ಚಯದತ್ತ ಧಾವಿಸುತ್ತಿರುವುದರಿಂದ ನಿವಾಸಿಗಳಲ್ಲಿ ತೀವ್ರ ಆತಂಕ ಎದುರಾಗಿದೆ. ಸ್ಥಳೀಯ ನಗರಸಭೆ ಸದಸ್ಯ ಅಪ್ಪಣ್ಣ ಈ ಕುರಿತು ಮಾತನಾಡಿ, ತಕ್ಷಣವೇ ಕಸ ತೆರವುಗೊಳಿಸಿ ಸುರಕ್ಷಿತ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಅಪಾಯ ಸಂಭವಿಸಲಿದೆ ಎಂದು ಎಚ್ಚರಿಸಿದ್ದಾರೆ. ಘಟನೆಯ ಕುರಿತು ನಮ್ಮ ಪ್ರತಿನಿಧಿ ಗೋಪಾಲ್ ಸೋಮಯ್ಯ ಪ್ರತ್ಯಕ್ಷ ವರದಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಗದ್ದೆಯಲ್ಲಿ ಶವ ಹೂತ ಪತ್ನಿ: 6 ತಿಂಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದೇ ರೋಚಕ! – Kannada News | Chikkodi Horror: Wife Takes Husband’s Life with Lover, Buries Body in Sugarcane Field; Arrogance Unravels After 6 Months

ಮೃತ ವ್ಯಕ್ತಿ ಮತ್ತು ಆರೋಪಿಗಳುImage Credit source: Tv9 Kannada

ಚಿಕ್ಕೋಡಿ, ಆಗಸ್ಟ್​​ 10: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂಬ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿಕೊಂಡು ಗಂಡನನ್ನೇ ಕೊಂದು, ಶವವನ್ನು ಜಮೀನಿನಲ್ಲಿ ಹೂತುಹಾಕಿದ್ದ ಪತ್ನಿ 6 ತಿಂಗಳ ಬಳಿಕ ಪೊಲೀಸರ ಅತಿಥಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ.  ರಾಘು ಗಾವಡೆ(40) ಕೊಲೆಯಾದ ವ್ಯಕ್ತಿಯಾಗಿದ್ದು, ಇವರ ಪತ್ನಿ ಬಂಗಾರಿ ಗಾವಡೆ, ಪ್ರಿಯಕರ ರಾಮು ರಾಣಗೆ ಬಂಧಿತ ಆರೋಪಿಗಳಾಗಿದ್ದಾರೆ. ಫೆ.7ರಂದೇ ರಾಘು ಗಾವಡೆ ಕೊಲೆ ನಡೆದಿದ್ದು, ಪತಿ ಪರ ಊರಿಗೆ ಹೋಗಿದ್ದಾನೆಂಬ ಪತ್ನಿಯ ನಾಟಕವನ್ನು ಪೊಲೀಸರು ಕುಟುಂಬಸ್ಥರ ಎದುರು ಕೊನೆಗೂ ಬಯಲು ಮಾಡಿದ್ದಾರೆ.

ಘಟನೆ ಏನು?

ಬಂಗಾರಿ ಗಾವಡೆಗೆ ರಾಮು ರಾಣ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿ ರಾಘು ಜಗಳ ಮಾಡುತ್ತಿದ್ದ. ಈ ನಡುವೆ ಫೆ.7ರಂದು ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡಿದ್ದ. ಇದರಿಂದ ಕೋಪಗೊಂಡು ಪ್ರಿಯಕರ ರಾಮುಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದ ಬಂಗಾರಿ, ಮಲಗಿದ್ದಾಗ ರಾಘುವಿನ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ನಂತರ ಮಧ್ಯರಾತ್ರಿ ಟಾಟಾಏಸ್​ ವಾಹನದಲ್ಲಿ ಜಮೀನಿಗೆ ಶವ ಸಾಗಾಟ ಮಾಡಿದ್ದ ಆರೋಪಿಗಳು, ಫೆ.8ರಂದು ರಾತ್ರಿ‌ ಕಬ್ಬಿನ ಗದ್ದೆಯಲ್ಲಿ ಶವ ಹೂತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: ಶಿವಾನಂದ ನೀಲಣ್ಣನವರ್​​ಗೆ ಇಡಿ ಶಾಕ್! ಬೆಳಗಾವಿಯಲ್ಲಿ ಮೂರು ಕಡೆಗಳಲ್ಲಿ ದಾಳಿ

ಕೊಲೆ ವಿಚಾರ ಬಯಲಾಗಿದ್ದೇಗೆ?

ಗಂಡನನ್ನು ಪ್ರಿಯಕರನ ಜೊತೆ ಸೇರಿ ಕೊಂದ ಬಳಿಕ ಅದನ್ನು ಮರೆಮಾಚಲು ಆತ ಕುರಿ ಕಾಯಲು ಬೇರೆ ಊರಿಗೆ ಹೋಗಿದ್ದಾನೆಂದು ಪತ್ನಿ ಬಂಗಾರಿ ಹೇಳಿಕೊಂಡು ತಿರುಗಾಡಿದ್ದಳು. ಆದರೆ ಕೆಲ ತಿಂಗಳ ಹಿಂದೆ ರಾಘುವಿನ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರೂ, ಅಂತ್ಯಕ್ರಿಯೆಗೆ ಆತ ಬಾರದಿದ್ದಾಗ ಸಹೋದರನಿಗೆ ಸಂಶಯ ಬಂದಿದೆ. ಇದೇ ಕಾರಣಕ್ಕೆ ಖಡಕಲಾಟ ಠಾಣೆಗೆ ಹೋಗಿ ಆತ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ. ಜೊತೆಗೆ ಅಣ್ಣನ ಪತ್ನಿ ಬಂಗಾರಿ ಮೇಲೆಯೇ ಸಂಶಯ ವ್ಯಕ್ತಪಡಿಸಿದ್ದ. ಹೀಗಾಗಿ ಬಂಗಾರಿಯನ್ನ ಕರೆದು ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರೋದಾಗಿ ಆಕೆ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಘಟನೆ ಸಂಬಂಧ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು – Kannada News | Nayanthara Praises Radhika Pandit At Toxic Event Calling Her Yash Biggest Strength

‘ಟಾಕ್ಸಿಕ್’ ಟ್ರೇಲರ್ ಲಾಂಚ್ ಈವೆಂಟ್​​ ಅಲ್ಲಿ ಯಶ್ ಬಗ್ಗೆ ಎಲ್ಲರೂ ಮಾತನಾಡಿದರು. ಆದರೆ, ನಯನತಾರಾ ಅವರು ಯಶ್​​ಗೆ ಶಕ್ತಿಯಾಗಿ ನಿಂತ ರಾಧಿಕಾ ಬಗ್ಗೆ ಮಾತನಾಡಿದರು. ವೇದಿಕೆ ಮೇಲೆ ಮಾತನಾಡಿದ ನಯನತಾರಾ, ‘ಸಿನಿಮಾ ಹಿಟ್ ಆದಾಗ ಪ್ರತಿಯೊಬ್ಬರೂ ಚಿತ್ರದ ನಟ-ನಟಿಯರು, ತಾಂತ್ರಿಕ ತಂಡ ಮತ್ತು ಅವರ ಕಠಿಣ ಪರಿಶ್ರಮದ ಬಗ್ಗೆ ಮಾತನಾಡುತ್ತಾರೆ. ಆದರೆ ಆ ಯಶಸ್ಸಿನ ಹಿನ್ನೆಲೆಯಲ್ಲಿ ಕುಟುಂಬದವರು ಮಾಡುವ ತ್ಯಾಗ ಮತ್ತು ಬೆಂಬಲದ ಬಗ್ಗೆ ಯಾರೂ ಮಾತನಾಡುವುದಿಲ್ಲ’ ಎಂದರು.

ಯಶ್ ಅವರ ಪಕ್ಕದಲ್ಲಿ ಕುಳಿತಿದ್ದ ರಾಧಿಕಾ ಪಂಡಿತ್ ಅವರನ್ನು ತೋರಿಸುತ್ತಾ, ‘ರಾಧಿಕಾ ಅವರು ಯಶ್ ಅವರ ಪಾಲಿನ ಅತಿ ದೊಡ್ಡ ಶಕ್ತಿ. ಯಶ್ ಅವರ ಕನಸು ಮತ್ತು ದೂರದೃಷ್ಟಿಗಾಗಿ ರಾಧಿಕಾ ತಮ್ಮ ಸಮಯವನ್ನು ತ್ಯಾಗ ಮಾಡಿ ನೀಡುತ್ತಿರುವ ಬೆಂಬಲ ನಿಜಕ್ಕೂ ಅದ್ಭುತವಾದದ್ದು. ರಾಧಿಕಾ ಅವರ ಮೇಲೆ ನನಗೆ ಅಪಾರವಾದ ಗೌರವ ಹಾಗೂ ಪ್ರೀತಿಯಿದೆ’ ಎಂದು ಹೇಳಿದರು.

ನಯನತಾರಾ ಅವರ ಈ ಭಾವುಕ ಮಾತುಗಳನ್ನು ಕೇಳಿ ಸಭೆಯಲ್ಲಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಮುಗುಳ್ನಕ್ಕು ಧನ್ಯವಾದ ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Exit mobile version