Headlines

ಯೋಗಾಸನಕ್ಕೆ ಜಾಗತಿಕ ವೇದಿಕೆ; ಭಾರತದಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ – Kannada News | World Yogasana Championship 2026: Ahmedabad Hosts Global Yoga Sports Event

2026ರ ಜೂನ್ 4 ರಿಂದ 8 ರವರೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ‘ಟ್ರಾನ್ಸ್‌ಸ್ಟೇಡಿಯಾ’ದಲ್ಲಿ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿ ನಡೆಯಲಿದೆ. ಈ ಪ್ರತಿಷ್ಠಿತ ಕೂಟದಲ್ಲಿ ವಿಶ್ವದ 40ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿವೆ. ‘ವಿಶ್ವ ಯೋಗಾಸನ’ (World Yogasana) ಸಂಸ್ಥೆಯ ಆಶ್ರಯದಲ್ಲಿ ಈ ಚಾಂಪಿಯನ್‌ಶಿಪ್ ನಡೆಯಲಿದ್ದು, ‘ಯೋಗಾಸನ ಭಾರತ್’ ಇದರ ಆತಿಥ್ಯ ವಹಿಸಿದೆ. ಇದು ಜಗತ್ತಿನಾದ್ಯಂತದ ಪ್ರಮುಖ ಕ್ರೀಡಾಪಟುಗಳನ್ನು ಒಂದು ವೇದಿಕೆಗೆ ತರಲಿದ್ದು, ಯೋಗಾಸನವನ್ನು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಉತ್ತೇಜಿಸುವಲ್ಲಿ ಭಾರತದ ಮುಂಚೂಣಿ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ. ರಾಷ್ಟ್ರೀಯ…

Read More

ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ಬೆಂಗಳೂರು ಇಡಿ ಅಧಿಕಾರಿಗಳಿಂದ ದಾಳಿ, ಕೋಟ್ಯಾಂತರ ಮೌಲ್ಯದ ಆಸ್ತಿ ವಶಕ್ಕೆ – Kannada News | Bengaluru ED raids On online gaming company Games Kraft

ಬೆಂಗಳೂರು, (ಮೇ 07): ಆನ್ ಲೈನ್ ಗೇಮಿಂಗ್ ಕಂಪನಿಯ (online gaming company )ಮೇಲೆ ಬೆಂಗಳೂರು ಘಟಕದ ಇಡಿ ಅಧಿಕಾರಿಗಳು ದಾಳಿ (Bengaluru ED raids) ಮಾಡಿದ್ದಾರೆ. ರಮ್ಮಿ ಕಲ್ಚರ್ ಆ್ಯಪ್ ಮೂಲಕ ವಂಚನೆ ಪ್ರಕರಣದ ಸಂಬಂಧ Games Kraft ಕಂಪನಿಯ ಮೇಲೆ ದೆಹಲಿ ಹಾಗೂ ಬೆಂಗಳೂರಿನಲ್ಲಿ 16 ಕಡೆ ದಾಳಿ ನಡೆದಿದೆ. ಅಲ್ಲದೇ ರಮ್ಮಿ ಕಲ್ಚರ್ ಆ್ಯಪ್ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿಯಾಗಿದ್ದು, ದಾಳಿಯಲ್ಲಿ ಇಡಿ ಅಧಿಕಾರಿಗಳು ಕೋಟ್ಯಾಂತರ…

Read More

ಬೆಳ್ಳಂದೂರಿನಿಂದ ಏರ್​​ಪೋರ್ಟ್​​ಗೆ ತೆರಳಲು ಮೂರುವರೆ ಗಂಟೆ!: ಬೆಂಗಳೂರು ಟ್ರಾಫಿಕ್​​ ಭೀಕರತೆ ತೆರೆದಿಟ್ಟ ಯುವತಿಯ ವಿಡಿಯೋ ವೈರಲ್​​ – Kannada News | Airport Commute Nightmare: Bengaluru Woman’s 3.5 Hour Traffic Struggle Sparks Debate Online

ಬೆಂಗಳೂರು, ಮೇ 07: ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ (Bengaluru) ಟ್ರಾಫಿಕ್​​ ಸಮಸ್ಯೆ ಮಾಮೂಲು. ಅದರಲ್ಲೂ ಮಳೆ ಬಂತೆಂದರಂತೂ ಮುಗಿದೇ ಹೋಯಿತು. ಕಿಲೋ ಮೀಟರ್​​ಗಟ್ಟಲೆ ವಾಹನಗಗಳು ಸರತಿ ಸಾಲಲ್ಲಿ ನಿಂತುಬಿಡುತ್ತವೆ. ಈ ನಡುವೆ ಬೆಳ್ಳಂದೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಟ್ರಾಫಿಕ್​​ ಕಾರಣ ತನಗೆ ಬರೋಬ್ಬರಿ 3 ಗಂಟೆ ತಗುಲಿದೆ ಎಂದು ಯುವತಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ಹೇಳಿದ್ದೇನು? ಸಾಕ್ಷಿ ಎಂಬ ಯುವತಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ನನ್ನ ಜೀವನದ…

Read More

‘ಸೆರಗು ಸರಿದಿದ್ದಕ್ಕೆ’ ನೋರಾ ಕ್ಷಮೆ: ಜೊತೆಗೊಂದು ಮಹತ್ವದ ನಿರ್ಧಾರ – Kannada News | Nora Fatehi apologises to National Commission for Women over KD Movie song controversy

‘ಕೆಡಿ’ (KD) ಸಿನಿಮಾದ ‘ಸರ್ಸೆ ಸೆರಗು’ ಹಾಡು ಉತ್ತರ ಭಾರತದಲ್ಲಿ ಭಾರಿ ವಿವಾದ ಹುಟ್ಟು ಹಾಕಿತ್ತು. ‘ಸರ್ಕೆ ಚುನರಿ’ ಹೆಸರಿನಲ್ಲಿ ಹಿಂದಿಯಲ್ಲಿ ಬಿಡುಗಡೆ ಆಗಿದ್ದ ಈ ಹಾಡಿನ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನಲ್ಲಿ ಕುಣಿದಿದ್ದ ನಟಿ ನೋರಾ ಫತೇಹಿ, ನಿರ್ದೇಶಕ ಪ್ರೇಮ್ ಇನ್ನಿತರೆ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿತ್ತು. ಪ್ರೇಮ್ ಸೇರಿದಂತೆ ಇನ್ನಿತರರು ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದ್ದರು. ಆದರೆ ನೋರಾ, ವಿಚಾರಣೆಯನ್ನು ಮುಂದೂಡುತ್ತಾ ಬಂದಿದ್ದರು. ಆದರೆ ಇಂದು ಗುರುವಾರ…

Read More

ಬುಧ‌ನ ಪ್ರಸ್ತುತ ಸಂಚಾರದಿಂದ ಯಾವ ರಾಶಿಗೆ ಕಾದಿದೆ ಶುಭಾಶುಭ – Kannada News | Mercury in Aries: Astrological Impact and Predictions for All Zodiac Signs

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹ ಮಂಡಲದ ರಾಜಕುಮಾರ ಹಾಗೂ ಬುದ್ಧಿಕಾರಕ ಎಂದು ಪ್ರಸಿದ್ಧ. ಬುಧನು ಮಂಗಳನ ಅಧಿಪತ್ಯದ ಮೇಷ ರಾಶಿಯಲ್ಲಿದ್ದಾಗ ಚುರುಕುತನ ಮತ್ತು ವೇಗವನ್ನು ಪಡೆಯುತ್ತಾನೆ. ಆದರೆ, ಕೇವಲ ರಾಶಿ ಸ್ಥಿತಿಯಿಂದ ಫಲ ನಿರ್ಣಯ ಮಾಡುವುದು ಅಪೂರ್ಣ. ​​ಮೇಷ ರಾಶಿಯಲ್ಲಿರುವ ಬುಧನು ಈ ಕೆಳಗಿನ ವರ್ಗಗಳಲ್ಲಿ ಸ್ಥಿತನಾದಾಗ ವ್ಯಕ್ತಿತ್ವದ ಮೇಲೆ ವಿಶೇಷ ಪ್ರಭಾವ ಬೀರುತ್ತಾನೆ. ​ಬುಧನು ರವಿಯ ಪ್ರಭಾವಕ್ಕೆ ಒಳಗಾಗಿದ್ದು ಮಾತುಗಳಲ್ಲಿ ಅಧಿಕಾರಯುತ ಧೋರಣೆ ಮತ್ತು ಸ್ಪಷ್ಟತೆ ಇರುತ್ತದೆ. ಆಡಳಿತಾತ್ಮಕ ಕೌಶಲಗಳು ವೃದ್ಧಿಯಾಗುತ್ತವೆ. ಇದು ವ್ಯಕ್ತಿಯನ್ನು ತೀಕ್ಷ್ಣಮತಿಯನ್ನಾಗಿ…

Read More

ಜೊತೆಯಲ್ಲಿ ಕ್ರಿಕೆಟ್ ಆಡಿದ್ದ ಗೆಳೆಯನ ಅಕಾಲಿಕ ನಿಧನಕ್ಕೆ ಕಣ್ಣೀರಾದ ವಿರಾಟ್ ಕೊಹ್ಲಿ – Kannada News | Virat Kohli Mourns Amanpreet Gill: U19 India Cricketer Passes Away at 36

ಭಾರತದ ಪರ 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಆಡಿದ್ದ ಪಂಜಾಬ್ ಮೂಲದ ಅಮನ್‌ಪ್ರೀತ್ ಗಿಲ್ (Amanpreet Gill) ಕೇವಲ 36 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಅಸುನೀಗಿದ್ದಾರೆ. ಚಂಡೀಗಢದಲ್ಲಿ ಜನಿಸಿದ ಅಮನ್‌ಪ್ರೀತ್ ಸಿಂಗ್ ಗಿಲ್ ಪಂಜಾಬ್ ಕ್ರಿಕೆಟ್ ತಂಡಕ್ಕಾಗಿ ದೇಶೀಯ ಕ್ರಿಕೆಟ್ ಆಡಿದ್ದರು. 2007 ರಲ್ಲಿ ಶ್ರೀಲಂಕಾದಲ್ಲಿ ನಡೆದ 19 ವರ್ಷದೊಳಗಿನವರ ತ್ರಿಕೋನ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಮನೀಶ್ ಪಾಂಡೆ ಕೂಡ ಆಡಿದ್ದರು. ಇದೀಗ ಗೆಳೆಯ ಅಕಾಲಿಕ ಮರಣದಿಂದ ಆಘಾತಕ್ಕೊಳಗಾಗಿರುವ…

Read More

ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು… – Kannada News | RBI issues draft rules for acquiring immovable assets against loans

ನವದೆಹಲಿ, ಮೇ 7: ಭಾರತೀಯ ರಿಸರ್ವ್ ಬ್ಯಾಂಕ್ (RBI), ಬ್ಯಾಂಕುಗಳು ಸಾಲಕ್ಕೆ ಅಡಮಾನವಾಗಿ ಪಡೆದುಕೊಳ್ಳುವ ಸ್ಥಿರಾಸ್ತಿಗಳ (Immovable Assets) ನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ಕರಡು ನಿಯಮಗಳನ್ನು ಹೊರಡಿಸಿದೆ. ಇದರ ಮುಖ್ಯ ಉದ್ದೇಶ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಸಾಲ ವಸೂಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದಾಗಿದೆ. ಬ್ಯಾಂಕಿನಲ್ಲಿ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆಯಲು ನೀವು ಅಡವಾಗಿ ಇಡುವ ಮನೆ ಇತ್ಯಾದಿ ಆಸ್ತಿಯನ್ನು ಬ್ಯಾಂಕುಗಳು ಸಾಮಾನ್ಯವಾಗಿ ವಶಕ್ಕೆ ತೆಗೆದುಕೊಳ್ಳುವುದಿಲ್ಲ. ಸಾಲ ತೀರಿಸಲು ವಿಫಲರಾದಾಗ, ಮತ್ತು ಸಾಲ ವಸೂಲಿ ಮಾಡುವ…

Read More

ಅನುದಾನ ಕೊರತೆ ಮಧ್ಯೆ ಕಾರವಾರದಲ್ಲಿ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ: ಏನಿದು ವಿವಾದ? – Kannada News | Karwar Concrete Road Project Faces Controversy Amid Funding Shortage

ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ Image Credit source: tv9 kannada ಕಾರವಾರ, ಮೇ 07: ರಾಜ್ಯದ ಹಲವೆಡೆ ಅನುದಾನದ ಕೊರತೆ ಹಾಗೂ ಬಿಟುಮಿನ್ (ಡಾಂಬರು) ಅಭಾವದಿಂದ ರಸ್ತೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದ್ದರೆ, ಉತ್ತರ ಕನ್ನಡ ಜಿಲ್ಲೆಯ (uttara-kannada) ಕಾರವಾರದಲ್ಲಿ ಮಾತ್ರ ಸುಸ್ಥಿತಿಯಲ್ಲಿರುವ ಕಾಂಕ್ರೀಟ್ ರಸ್ತೆಯ (Concrete Road) ಮೇಲೆ ಡಾಂಬರು ಹಾಕುವ ಮೂಲಕ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಮುಖ್ಯಾಂಶಗಳು  ಸುಸಜ್ಜಿತ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ ಸಾರ್ವಜನಿಕರ ಆಕ್ರೋಶಕ್ಕೆ…

Read More

ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಮತ್ತೊಬ್ಬ ಕನ್ನಡದ ನಟ ಸೇರ್ಪಡೆ – Kannada News | Prakash Raj joined Jr NTR and Prashanth Neel movie

ಜೂ ಎನ್​​ಟಿಆರ್ ಮತ್ತು ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್​ನ ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಕೆಲವೇ ಕೆಲವು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾಕ್ಕೆ ಇನ್ನೂ ಅಧಿಕೃತವಾಗಿ ಯಾವುದೇ ಹೆಸರಿಟ್ಟಿಲ್ಲವಾದರೂ ಅಭಿಮಾನಿಗಳು ಸಿನಿಮಾವನ್ನು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದಾರೆ. ಪ್ರಶಾಂತ್ ನೀಲ್, ತಮ್ಮ ಸಿನಿಮಾಗಳಲ್ಲಿ ಎಲ್ಲ ಭಾಷೆಯ ಕಲಾವಿದರನ್ನು ಬಳಸಿಕೊಳ್ಳುತ್ತಾರೆ. ‘ಕೆಜಿಎಫ್’ ಸಿನಿಮಾಕ್ಕೂ ಅವರು ಕನ್ನಡದ ಮಾತ್ರವಲ್ಲದೆ ಪರ ಭಾಷೆ ಕಲಾವಿದರನ್ನೂ ಬಳಸಿಕೊಂಡಿದ್ದರು. ‘ಸಲಾರ್’ನಲ್ಲಿ ಕನ್ನಡದ ನಟ ನವೀನ್ ಶಂಕರ್ ನಟಿಸಿದ್ದರು. ಇದೀಗ ಈ ಸಿನಿಮಾನಲ್ಲಿಯೂ ಕನ್ನಡದ…

Read More

ವಿಮಾನದಲ್ಲಿ ಪವರ್ ಬ್ಯಾಂಕ್ ತೆಗೆದುಕೊಂಡು ಹೋಗಬಹುದಾ? ಇಂಡಿಗೋ ಬೆಂಕಿ ಅವಘಡದ ಬಳಿಕ ಹೊಸ ನಿಯಮ ಜಾರಿ – Kannada News | DGCA issues new power bank rules for passengers after Chandigarh IndiGo flight fire incident

ನವದೆಹಲಿ, ಮೇ 7: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಇಂಡಿಗೋ ವಿಮಾನದಲ್ಲಿನ (IndiGo Flight) ಬೆಂಕಿ ದುರಂತದ ಘಟನೆಯು ನಾಗರಿಕ ವಿಮಾನಯಾನದ ಇತ್ತೀಚಿನ ಪವರ್ ಬ್ಯಾಂಕ್ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವಿಮಾನದ ಲ್ಯಾಂಡಿಂಗ್ ನಂತರ ಕ್ಯಾಬಿನ್ ಒಳಗೆ ಪವರ್ ಬ್ಯಾಂಕ್ ಬೆಂಕಿ ಹೊತ್ತಿಕೊಂಡ ನಂತರ ವಿಮಾನವನ್ನು ಸ್ಥಳಾಂತರಿಸಲಾಯಿತು. ಇದರಿಂದ ದೊಡ್ಡ ದುರಂತ ತಪ್ಪಿತ್ತು. ಲಿಥಿಯಂ ಬ್ಯಾಟರಿ ಸಂಬಂಧಿತ ಬೆಂಕಿ ಅವಘಡಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳು ಮತ್ತು ವಿಶ್ವಾದ್ಯಂತ ವಿಮಾನಯಾನ ಸಂಸ್ಥೆಗಳು ಮತ್ತು…

Read More